ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಾಹುಬಲಿ ಸಿನಿಮಾದ ರೀತಿ ಹಸುಗೂಸನ್ನು ರಕ್ಷಿಸಿದ ದೊಡ್ಡಪ್ಪ

Twitter
Facebook
LinkedIn
WhatsApp
ಬಾಹುಬಲಿ ಸಿನಿಮಾದ ರೀತಿ ಹಸುಗೂಸನ್ನು ರಕ್ಷಿಸಿದ ದೊಡ್ಡಪ್ಪ

ಪೆದ್ದಪಲ್ಲಿ(ತೆಲಂಗಾಣ): ಪಕ್ಕದ ತೆಲಂಗಾಣದಲ್ಲೂ ನಿರಂತರವಾಗಿ ಮಳೆ ಸುರಿಯುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಅನೇಕ ಜಿಲ್ಲೆಗಳಲ್ಲಿ ಹಲವು ಗ್ರಾಮಗಳಲ್ಲಿ ಜಲಾವೃತಗೊಂಡಿವೆ. ಸುರಕ್ಷಿತ ಪ್ರದೇಶಗಳಲ್ಲಿ ನಿವಾಸಿಗಳು ಸ್ಥಳಾಂತರವಾಗುತ್ತಿದ್ದಾರೆ. ಇದರ ನಡುವೆ ಪೆದ್ದಪಲ್ಲಿ ಜಿಲ್ಲೆಯಲ್ಲಿ ಕುತ್ತಿಗೆ ಎತ್ತರದ ಪ್ರವಾಹ ನೀರಿನಲ್ಲಿ ಎರಡು ತಿಂಗಳ ಮಗುವೊಂದರನ್ನು ದೊಡ್ಡಪ್ಪ ಪಾತ್ರೆಯಲ್ಲಿ ಇಟ್ಟುಕೊಂಡು ರಕ್ಷಣೆ ಮಾಡಿದ್ದಾರೆ.

ಪೆದ್ದಪಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಸುರಯಪಲ್ಲಿ, ಪೋತಾರಂ, ಸಿರಿಪುರಂ, ಬೆಸ್ತಪಲ್ಲಿ, ವಿಲೋಚವರಂ, ಮರಿವಾಡ ಗ್ರಾಮಗಳು ನಲುಗಿ ಹೋಗಿವೆ. ಅದರಲ್ಲೂ, ಮರಿವಾಡ ಗ್ರಾಮದಲ್ಲಿ ಭುಜದ ಎತ್ತರಕ್ಕೆ ಪ್ರವಾಹದ ನೀರು ನುಗ್ಗಿವೆ. ಇದರಿಂದ ಸುರಕ್ಷಿತ ಸ್ಥಳಗಳಿಗೆ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಇದೇ ಗ್ರಾಮದ ಮನೆಯೊಂದರಲ್ಲಿ ಪುಪ್ಪಾಳ ಸುಮಲತಾ ಎಂಬ ಮಹಿಳೆಯು ಎರಡು ತಿಂಗಳ ಮಗು ಹೊಂದಿದ್ದು, ತಾಯಿ ಮತ್ತು ಮಗುವನ್ನು ರಕ್ಷಿಸಲು ಸಂಬಂಧಿಕರು ನಿರ್ಧರಿಸಿದ್ದರು.

ತಾಯಿ ಸುಮಲತಾ ಅದೇ ನೀರಿನಲ್ಲಿ ಹೇಗೋ ತೆರಳಿ ದಡ ಸೇರಲು ಮುಂದಾಗಿದ್ದರು. ಆದರೆ, ಎಲ್ಲಿ ನೋಡಿದರೂ ಕುತ್ತಿಗೆ ಎತ್ತರದ ಪ್ರವಾಹ ನೀರು ಇರುವುದರಿಂದ ಎರಡು ತಿಂಗಳ ಮಗುವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ.

ಹೀಗಾಗಿ ಮಗುವಿನ ದೊಡ್ಡಪ್ಪ ರಾಮಮೂರ್ತಿ, ಉಪಾಯ ಮಾಡಿ ಹಾಸಿಗೆಯಲ್ಲಿ ಮಗುವನ್ನು ಸುತ್ತಿದ್ಧಾರೆ. ನಂತರ ಮಗುವನ್ನು ಪಾತ್ರೆಯಲ್ಲಿ ಇಟ್ಟುಕೊಂಡು ತಲೆ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದಿದ್ಧಾರೆ. ಇದೀಗ ವಿಡಿಯೋ ವೈರಲ್​ ಆಗಿದ್ದು, ಈ ದೃಶ್ಯ ‘ಬಾಹುಬಲಿ’ ಸಿನಿಮಾದ ಸನ್ನಿವೇಶವನ್ನು ನೆನಪಿಸುವಂತಿದೆ ಎಂದು ನೆಟ್ಟಿಗರು ಹೊಗಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ