ಬುಧವಾರ, ಮೇ 15, 2024
ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್-ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಗ್​ಬಾಸ್​ ತೆಲುಗು ಸೀಸನ್​ 5 ವಿನ್ನರ್​ ಆಗಿ ಸನ್ನಿ ಘೋಷಣೆ

Twitter
Facebook
LinkedIn
WhatsApp
ಬಿಗ್​ಬಾಸ್​ ತೆಲುಗು ಸೀಸನ್​ 5 ವಿನ್ನರ್​ ಆಗಿ ಸನ್ನಿ ಘೋಷಣೆ

ಭಾರೀ ಕುತೂಹಲ ಸೃಷ್ಟಿಸಿದ್ದ ತೆಲುಗು ಆವೃತ್ತಿಯ ಬಿಗ್​ ಬಾಸ್​ (Bigg Boss) ಸೀಸನ್​​ 5 ಫಿನಾಲೆ ಕಾರ್ಯಕ್ರಮಕ್ಕೆ ತೆರೆಬಿದ್ದಿದೆ. ದೊಡ್ಮನೆ ಆಟದಲ್ಲಿ ಸನ್ನಿ ವಿಜೇತರಾಗಿ ಹೊರಹೊಮ್ಮಿದರೆ ಷಣ್ಮುಖ್​ ರನ್ನರ್​ ಅಪ್​ ಆಗಿದ್ದಾರೆ. ಇನ್ನು ಶ್ರೀರಾಮ ಚಂದ್ರ ಎರಡನೆ ರನ್ನರ್​ ಅಪ್​ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. ಬಿಗ್​ ಬಾಸ್​ ಸೀಸನ್​ 5 ವಿನ್ನರ್​ ಟ್ರೋಫಿ ಎತ್ತಿ ಹಿಡಿದ ಸನ್ನಿ ಬರೋಬ್ಬರಿ 50 ಲಕ್ಷ ರೂಪಾಯಿ ಹಣ, ಬೈಕ್​ ಹಾಗೂ 25 ಲಕ್ಷ ರೂಪಾಯಿ ಮೌಲ್ಯದ ಪ್ಲೋಟ್​​ನ್ನು ಬಹುಮಾನದ ರೂಪದಲ್ಲಿ ಪಡೆದಿದ್ದಾರೆ.

ಟಿವಿ ಶೋಗಳಲ್ಲಿ ನಿರೂಪಕನಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದ ಸನ್ನಿ ಲೈಫ್​ಸ್ಟೈಲ್​ ಚಾನೆಲ್​ಗಳಲ್ಲಿ ಕೆಲಸ ಮಾಡಿ ಬಳಿಕ ವಿಜೆ ಆಗಿದ್ದರು. ಕೊನೆಗೆ ಕಲ್ಯಾಣ ವೈಭೋಗಂ ಮೂಲಕ ನಟನೆಯನ್ನೂ ಆರಂಭಿಸಿದ್ದರು.
ಬಿಗ್​ಬಾಸ್​ ಸೀಸನ್​ 5 ಕಾರ್ಯಕ್ರಮವನ್ನು ನಟ ನಾರ್ಗಾಜುನ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಎಸ್​.ಎಸ್​ ರಾಜಮೌಳಿ, ಆಲಿಯಾಭಟ್​, ರಣಬೀರ್​ ಕಪೂರ್​, ನಾಣಿ, ನಾಗ ಚೈತನ್ಯ, ಶ್ರೀಯಾ ಶರಣ್​ ಹಾಗೂ ಅಯಾನ್​ ಮುಖರ್ಜಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸೆಪ್ಟೆಂಬರ್ 5ರಂದು ಆರಂಭವಾಗಿದ್ದ ಬಿಗ್​ ಬಾಸ್​ ತೆಲುಗು ಸೀಸನ್​ 5 ಬರೋಬ್ಬರಿ 106 ದಿನಗಳ ಪ್ರಯಾಣವನ್ನು ಯಶಸ್ವಿಯಾಗಿ ಪೂರೈಸಿದೆ. ಬಿಗ್​ಬಾಸ್​ ತೆಲುಗು ಸೀಸನ್​ 5ನಲ್ಲಿ ಸರಯು, ಉಮಾದೇವಿ, ಲಹರಿ, ನಟರಾಜ್​, ಹಮಿದಾ, ಶ್ವೇತಾ ವರ್ಮಾ, ಪ್ರಿಯಾ, ಲೊಬೋ, ವಿಶ್ವ, ಜಸ್ವಂತ್​, ಅನಿ, ರವಿ, ಪ್ರಿಯಾಂಕ ಸಿಂಗ್​ , ಕಾಜಲ್​. ಸನ್ನಿ, ಶ್ರೀರಾಮ ಚಂದ್ರ, ಸಿರಿ ಹನ್ಮಂತ್​, ಷಣ್ಮುಖ್​ ಜಸ್ವಂತ್​ ಹಾಗೂ ಸನ್ನಿ 19 ಮಂದಿ ಸ್ಪರ್ಧಿಗಳಾಗಿ ಮನೆಗೆ ಎಂಟ್ರಿ ನೀಡಿದ್ದರು. ಹೈದರಾಬಾದ್​ನ ಅನ್ನಪೂರ್ಣ ಸ್ಟುಡಿಯೋದಲ್ಲಿರುವ ಬಿಗ್​ಬಾಸ್​ ಮನೆಯಲ್ಲಿ ಈ ಸೆಲೆಬ್ರಿಟಿಗಳು ವಾಸ್ತವ್ಯ ಹೂಡಿದ್ದರು.

19 ಮಂದಿ ಸ್ಪರ್ಧಿಗಳಲ್ಲಿ 13 ಮಂದಿ ವಾರದ ಕೊನೆಯಲ್ಲಿ ವೀಕ್ಷಕರಿಂದ ಕಡಿಮೆ ಮತ ಪಡೆದುಕೊಂಡ ಕಾರಣಕ್ಕೆ ಎಲಿಮಿನೇಟ್​ ಆಗಿದ್ದರು, ಈ ಸೀಸನ್​ನಲ್ಲಿ ಸರಯು ಮೊಟ್ಟ ಮೊದಲು ಎಲಿಮಿನೇಟ್​ ಆದ ಮನೆಯ ಸದಸ್ಯೆ ಆಗಿದ್ದಾರೆ. ಕೊನೆಯ ಬಾರಿಗೆ ಜನರಿಂದ ಕಡಿಮೆ ಮತ ಪಡೆದು 98ನೇ ದಿನಕ್ಕೆ ಕಾಜಲ್​ ಮನೆಯಿಂದ ಹೊರಬಂದಿದ್ದರು . ಜಸ್ವಂತ್​ ಅನಾರೋಗ್ಯದಿಂದಾಗಿ ಶೋನಿಂದ ಹೊರನಡೆದಿದ್ದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು