ಮಂಗಳವಾರ, ಮೇ 21, 2024
ಈ ಆಟಗಾರ ಕಣಕ್ಕಿಳಿದಾಗಿನಿಂದ RCB ಒಂದೇ ಒಂದು ಪಂದ್ಯವನ್ನು ಸೋತಿಲ್ಲ!-ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು-ವಿಧಾನ ಪರಿಷತ್‌ನ 11 ಸ್ಥಾನಗಳಿಗೆ ಚುನಾವಣೆ ಘೋಷಣೆ..!-ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!-ಪೋರ್ಷೆ ಕಾರು ಬೈಕ್‌ಗೆ ಡಿಕ್ಕಿ ಹೊಡೆದು 2 ಮಂದಿ ಸಾವು: ಅಪ್ರಾಪ್ತ ಚಾಲಕನಿಗೆ ಅಪಘಾತದ ಕುರಿತು ಪ್ರಬಂಧ ಬರೆಯಲು ಕೋರ್ಟ್‌ನಿಂದ ಸೂಚನೆ-ಲೈಂಗಿಕ ದೌರ್ಜನ್ಯ ಪ್ರಕರಣ; ಹೆಚ್​ಡಿ ರೇವಣ್ಣಗೆ ಜಾಮೀನು ಮಂಜೂರು..!-ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ; ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಮುನ್ಸೂಚನೆ..!-ನಾನು ರೇವ್ ಪಾರ್ಟಿಗೆ ಹೋಗಿಲ್ಲ; ನಟಿ ವಿಡಿಯೋ ಸಂದೇಶ : ಐವರ ಬಂಧನ.!-ವಾರಗಳ ಹಿಂದೆ ಅಪಾರ್ಟ್ಮೆಂಟ್ ನ ಮೇಲ್ಛಾವಣಿಯಿಂದ ಬೀಳುತ್ತಿದ್ದ ಮಗುವಿನ ರಕ್ಷಣೆ ಬಳಿಕ ತಾಯಿ ಶವವಾಗಿ ಪತ್ತೆ..!-ಬೆಂಗಳೂರು: ರೇವ್ ಪಾರ್ಟಿ ಮೇಲೆ ಸಿಸಿಬಿ ಪೊಲೀಸರ ದಾಳಿ ; ಹಲವು ತೆಲುಗು ನಟ ನಟಿಯರು ಮತ್ತು ಮಾಡೆಲ್ ಗಳು ಭಾಗಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕರಿಮಣೇಲು: ಪನೋಳಿ ಮರ ಹೂಬಿಟ್ಟ ಅದ್ಭುತ ದೃಶ್ಯ ಕಂಣ್ತುಂಬಿಕೊಂಡಿದ್ದೀರಾ..?!

Twitter
Facebook
LinkedIn
WhatsApp
ಕರಿಮಣೇಲು: ಪನೋಳಿ ಮರ ಹೂಬಿಟ್ಟ ಅದ್ಭುತ ದೃಶ್ಯ ಕಂಣ್ತುಂಬಿಕೊಂಡಿದ್ದೀರಾ..?!

ವೇಣೂರು: ತನ್ನ ಜೀವಿತಾವಧಿಯಲ್ಲಿ ಒಂದು ಸಲ ಹೂ ಬಿಡುವ ತೀರಾ ಅಪರೂಪದ ಮರ ಸಂಕುಳಗಳಲ್ಲಿ ಒಂದಾದ ಶ್ರೀತಾಳಿ (ಪನೋಲಿ ಮರ) ಕರಿಮಣೇಲು ದೇವಸ್ಥಾನದ ಬಳಿ ಕಂಡು ಬಂದಿದ್ದು, ಕಳೆದೆರಡು ತಿಂಗಳುಗಳಿಂದ ಇದರ ಅಂದವನ್ನು ನೋಡಿ ಜನ ಕಣ್ತುಂಬಿಕೊಳ್ಳುತ್ತಿದ್ದಾರೆ.

ತಾಳಿ ಮರದಂತೆ ಎತ್ತರಕ್ಕೆ ಬೆಳೆಯುವ ಈ ಮರವು ತನ್ನ ಜೀವಿತಾವಧಿಯಲ್ಲಿ ಒಂದು ಬಾರಿ ಹೂವಿನಿಂದಲೇ ಆವೃತವಾಗಿ ಅತ್ಯಂತ ಆಕರ್ಷಣೀಯವಾಗಿ ಕಂಡು ಬರುತ್ತಿದೆ. ಪನೋಲಿ ಮರಕ್ಕೆ ಕನ್ನಡದಲ್ಲಿ ಶ್ರೀತಾಳಿ ಮರ ಎನ್ನುವುದು ರೂಡಿ. ಈ ಮರ ಸುಮಾರು 70 ರಿಂದ 80 ವರ್ಷಕ್ಕೆ ಹೂ ಬಿಟ್ಟು ಬಳಿಕ ಸಾಯುತ್ತದೆ. ಕರಿಮಣೇಲು ದೇವಸ್ಥಾನದ ಚಂದ್ರಶೇಖರ ಅಸ್ರಣ್ಣರಿಗೆ ಸೇರಿದ ತೋಟದಲ್ಲಿ ಮರ ಹೂ ಬಿಟ್ಟಿರುವ ಅದ್ಭುತ ದೃಶ್ಯ ಕಂಡು ಬಂದಿದೆ. ಅಸ್ರಣ್ಣರಿಗೆ ಸರಿಸುಮಾರು 73 ವರ್ಷ ವಯಸ್ಸಾಗಿದ್ದು, ಚಿಕ್ಕವಯಸ್ಸಿನಲ್ಲೇ ತೋಟದಲ್ಲಿ ಈ ಮರ ಕಂಡಿದ್ದನ್ನು ಅವರು ನೆನಪಿಸುತ್ತಾರೆ. ಹಾಗಾಗಿ ಈ ಮರಕ್ಕೆ 70 ವರ್ಷ ದಾಟಿರಬಹುದೆಂದು ಶಂಕಿಸಲಾಗಿದೆ.

ಹಿರಿಯರಾದ ….. ಅವರು ಹೇಳುವ ಪ್ರಕಾರ, ಹಿಂದಿನ ಕಾಲದಲ್ಲಿ ಈ ಮರದ ಹೊಲಿಯಿಂದ ದೇವರ ಸತ್ತಿಗೆ (ಕೊಡೆ)ಯನ್ನು ಮಾಡುತ್ತಿದ್ದರು. ಅಲ್ಲದೆ ಗೊರಬೆ (ಕೊರಂಬು) ಮಾಡಲು ಉಪಯೋಗಿಸುತ್ತಿದ್ದರು ಎನ್ನುತ್ತಾರೆ. ಶ್ರೀತಾಳಿ ಮರ ಅತ್ಯಂತ ಪವಿತ್ರ ಮರವಾಗಿದ್ದು, ಇದರ ಮರದಿಂದ ಬರುವ ಹುಡಿಯನ್ನು ಸೇವನೆಗೆ ಬಳಕೆ ಮಾಡಬಹುದು ಎನ್ನುತ್ತಾರೆ. ರೋಗ ನಿರೋಧಕ ಶಕ್ತಿ ವೃದ್ಧಿಯಾಗಲು ರಾಮಬಾಣ ಎನ್ನಲಾಗಿದೆ.

ಮನಬಂದಂತೆ ಕಡಿಯುವಂತಿಲ್ಲ

ಶ್ರೀತಾಳಿ ಮರ ಅಥವಾ ಪನೋಲಿ ಮರ ಒಂದು ಶ್ರೇಷ್ಠ ಹಾಗೂ ಅತ್ಯಂತ ವಿಶೇಷತೆಯುಳ್ಳ ಮರ ಆಗಿದೆ. ಇದನ್ನು ಮನಬಂದಂತೆ ಕಡಿಯುವಂತಿಲ್ಲ. ಇದನ್ನು ಕಡಿಯಬೇಕಾದರೆ ಧಾರ್ಮಿಕ ವಿಧಿವಿಧಾನಗಳು ನಡೆಯಬೇಕಂತೆ. ಶುಭ ಮುಹೂರ್ತದಲ್ಲಿ ವಿವಿಧ ಪೂಜಾ ವಿಧಾನಗಳೊಂದಿಗೆ ಚೆಂಡೆ, ವಾದಕಗಳೊಂದಿಗೆ ಗುತ್ತುಬರ್ಕೆಯವರ ಉಪಸ್ಥಿತಿಯಲ್ಲಿ ಪೂಜಾಕಾರ್ಯ ನಡೆದು ಬಳಿಕವೇ ಮರ ಕಡಿಯಲು ಸಿದ್ಧತೆ ಮಾಡಲಾಗುತ್ತದೆಯಂತೆ. ಈಗಾಗಿ ಕರಿಮಣೇಲುವಿನಲ್ಲಿರುವ ಮರವನ್ನು ಈ ಎಲ್ಲಾ ಸಂಪ್ರದಾಯದಂತೆ ಕಡಿಯಲು ನ. 21ರ ಬೆಳಿಗ್ಗೆ 9:55ಕ್ಕೆ ಮುಹೂರ್ತ ನಿಗದಿಯಾಗಿದೆ. ಈವೊಂದು ವಿಶೇಷ ಸಂಪ್ರದಾಯ, ಆಚರಣೆಯ ಕಾರ್ಯವನ್ನು ಕಣ್ತುಂಬಿಕೊಳ್ಳಬೇಕಾದರೆ ನ.21ರಂದು ನೀವು ಕರಿಮಣೇಲು ಗ್ರಾಮಕ್ಕೆ ಬರಲೇಬೇಕು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು

ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು

ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು Twitter Facebook LinkedIn WhatsApp ಬಂಟ್ವಾಳ: ರಿಕ್ಷಾ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ರಿಕ್ಷಾ ಪಲ್ಟಿಯಾಗಿ ಪ್ರಯಾಣಿಕನೋರ್ವ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು