ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ವಿಶೇಷ ಲೇಖನ--ಕೊರೋನಾ ಮತ್ತು ಭವಿಷ್ಯದ ಚಿಂತನೆ

Twitter
Facebook
LinkedIn
WhatsApp
ವಿಶೇಷ ಲೇಖನ–ಕೊರೋನಾ ಮತ್ತು ಭವಿಷ್ಯದ ಚಿಂತನೆ.
ಇಡೀ ಪ್ರಪಂಚವನ್ನು ಕೊರೋನಾ ಎಂಬ ಮಹಾಮಾರಿ ಇನ್ನಿಲ್ಲದಂತೆ ಕಾಡಿದೆ. ಅದು ಯಾವೊಂದು ದೇಶವನ್ನು ಬಿಟ್ಟಿಲ್ಲ. ಪ್ರಪಂಚದ ಮಾನವಕುಲ ಕೊರೋನಾ ವಿಪತ್ತಿನಿಂದ ಭಾದೆಗೆ ಒಳಗಾಗಿದೆ. ಮನುಷ್ಯ ಸಹಜವಾಗಿ ಮನುಷ್ಯ ಭವಿಷ್ಯದ ಬಗ್ಗೆ ಚಿಂತನೆ ನಡೆಸುತ್ತಾನೆ. ಭವಿಷ್ಯದ ಚಿಂತನೆ ಅವನನ್ನು ಉತ್ಸಾಹದಿಂದ ಜೀವನ ನಡೆಸುವಂತೆ ಪ್ರೇರೇಪಿಸುತ್ತದೆ. ಆದರೆ ಕೊರೋನಾ ಎಂಬ ಮಹಾಮಾರಿ ಮನುಷ್ಯನ ಭವಿಷ್ಯದ ಚಿಂತನೆಗೆ ಬಹುದೊಡ್ಡ ಸವಾಲನ್ನು ಎತ್ತಿದೆ. ಭವಿಷ್ಯದ ಬಗ್ಗೆ ನೂರಾರು ಪ್ರಶ್ನೆಗಳು ಏಳುವಂತೆ ಮಾಡಿದೆ. ಹಲವಾರು ಮಂದಿ ತಮ್ಮ ಭವಿಷ್ಯದ ಬಗ್ಗೆ ಆತಂಕಿತರಾಗಿರುವ ಬಗ್ಗೆ ನಾವು ನೋಡಬಹುದು. ಆದರೆ ಮಾನವಕುಲದ ಹುಟ್ಟು ,ವಿಕಸನ ವನ್ನು ನಾವು ಸೂಕ್ಷ್ಮವಾಗಿ ಗಮನಿಸುವುದಾದರೆ, ಮನುಷ್ಯ ತನ್ನ ವಿಕಸನದ ಪ್ರತಿಹಂತದಲ್ಲೂ ಸವಾಲುಗಳನ್ನು ಎದುರಿಸಿದ್ದಾನೆ. ಆ ಸವಾಲುಗಳನ್ನು ಎದುರಿಸಿ ಇಂದಿನ ಆಧುನಿಕ ನಾಗರಿಕ ಮನುಷ್ಯನ ಎನಿಸಿಕೊಂಡಿದ್ದಾನೆ.

ಸವಾಲು ಮನುಷ್ಯನಿಗೆ ಹೊಸದರಲ್ಲ. ಸವಾಲು ಇದ್ದಾಗಲೇ, ಮನುಷ್ಯ ಹೊಸತನಕ್ಕೆ ತೆರೆದುಕೊಳ್ಳುತ್ತಾರೆ. ಸಂಶೋಧನೆಗೆ ತೊಡಗಿಕೊಳ್ಳುತ್ತಾನೆ. ಹೊಸ ಆವಿಷ್ಕಾರದ ಬಗ್ಗೆ ಗಮನಹರಿಸುತ್ತಾನೆ. ಒಂದು ವೇಳೆ ಸವಾಲು ಇಲ್ಲದೆ ಹೋದರೆ, ಆತ ನಿಂತ ನೀರಾಗುತ್ತಾನೆ. ಈ ದೃಷ್ಟಿಯಲ್ಲಿ ಮನುಷ್ಯನಿಗೆ ಸವಾಲನ್ನು ಎದುರಿಸುವ ಬುದ್ಧಿವಂತಿಕೆ ಅನಾದಿಕಾಲದಿಂದಲೂ ಬಂದಿದೆ. ಆದರೆ ಭವಿಷ್ಯದ ಬಗ್ಗೆ ಆತಂಕಿತನಾದರೆ ಭವಿಷ್ಯದ ಯೋಜನೆಗಳನ್ನು ಹಮ್ಮಿಕೊಳ್ಳಲು ಸಾಧ್ಯವೇ? ಸಾಧ್ಯವೇ ಇಲ್ಲ. ಕೊರೋನ ಕಾರಣವನ್ನು ಮುಂದಿಟ್ಟುಕೊಂಡು ಭವಿಷ್ಯದ ಬಗ್ಗೆ ಯೋಜನೆಗಳನ್ನು ಹಾಕಿಕೊಳ್ಳದೆ ಇರುವುದು ಮೂರ್ಖತನ ಎನಿಸಬಹುದು. ನಮ್ಮ ಭವಿಷ್ಯದ ಯೋಜನೆಗಳನ್ನು ಸ್ವಲ್ಪಮಟ್ಟಿಗೆ ಮುಂದೂಡಬಹುದು. ಆದರೆ ಭವಿಷ್ಯದ ಯೋಜನೆಗಳನ್ನು ಇಲ್ಲದಂತೆ ಮಾಡಿದರೆ ಜೀವನಕ್ಕೆ ಅರ್ಥವಿರುವುದಿಲ್ಲ. ಸವಾಲುಗಳನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಈ ನೆಲೆಯಲ್ಲಿ ಭವಿಷ್ಯದ ಚಿಂತನೆ ಇದ್ದರೆ ಮಾತ್ರ ನಮ್ಮ ಜೀವನ ಸುಖಮಯವಾದ ಜೀವನ, ಸಂತೋಷಮಯ ವಾಗಿರಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಭವಿಷ್ಯದ ಚಿಂತನೆ ಮತ್ತು ಕನಸು ಕಾಣುವುದನ್ನು ಬಿಡಬಾರದು. ಬಿಟ್ಟರೆ ಈ ಮಹಾಮಾರಿಯ ಸವಾಲನ್ನು ಎದುರಿಸಲು ಸಾಧ್ಯವಿಲ್ಲ. ಭವ್ಯ ಬದುಕಿನ ಭವಿಷ್ಯದ ಚಿಂತನೆ ನಮ್ಮ ಮನದಲ್ಲಿ ಇರಲಿ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕಲೆ-ಸಾಹಿತ್ಯ

ಸಂಭ್ರಮ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು