ಮಾರ್ಚ್-ಏಪ್ರಿಲ್ ,ಮೇ ಬಹುತೇಕ ಮೂರು ತಿಂಗಳು ಭಾರತದ ಎಲ್ಲಾ ಪ್ರದೇಶಗಳಲ್ಲಿ ಕಾರ್ಯಕ್ರಮ ದ ಸಂಭ್ರಮ ಜೋರಾಗಿರುತ್ತದೆ. ಆದರೆ ಈ ಬಾರಿ ಕೊರೋನ ಈ ಸಂಭ್ರಮಕ್ಕೆ ತಡೆ ನೀಡಿದೆ ಎನ್ನಬಹುದು.
ಕಡಿಮೆ ಜನರ ಮೂಲಕ ಮದುವೆ ಹಾಗೂ ಇತರ ಕಾರ್ಯಕ್ರಮಗಳನ್ನು ನಡೆಸಬೇಕಾದ ಅನಿವಾರ್ಯತೆಯಲ್ಲಿ ಜನರಿದ್ದಾರೆ. ಇದರಿಂದಾಗಿ ಕಾರ್ಯಕ್ರಮದ ಸಂಭ್ರಮಕ್ಕೆ ತಡೆ ಬಿದ್ದಿದೆ. ಈ ಮೂರು ತಿಂಗಳಲ್ಲಿ ಕೋವಿಡ್ ಅತಿಯಾಗಿ ಇದ್ದ ಕಾರಣದಿಂದಾಗಿ ಬಹುತೇಕ ಕಾರ್ಯಕ್ರಮಗಳು ಸಪ್ಪೆಯಾಗಿ, ಸಂಭ್ರಮ ಇಲ್ಲದೆ ನಡೆದವು. ಬಹುತೇಕ ಮದುವೆ ಕಾರ್ಯಕ್ರಮಗಳಿಗೆ ಕಿರಿಕಿರಿಯು ಉಂಟಾಯಿತು. ಹಲವಾರು ಮಂದಿ ತಮ್ಮ ಕಾರ್ಯಕ್ರಮಗಳನ್ನು ಮುಂದೂಡಿದರು.
ಕೊರೋನಾ ಯುವಕರ ಸಂಭ್ರಮವನ್ನು ಸಂಪೂರ್ಣವಾಗಿ ಕಿತ್ತುಕೊಂಡಿತು ಎಂಬುದರಲ್ಲಿ ಎರಡು ಮಾತಿಲ್ಲ. ಸಂಭ್ರಮ ಮನುಷ್ಯನ ಜೀವನದ ಅವಿಭಾಜ್ಯ ಅಂಗ. ಜೀವನಕ್ಕೆ ಸಂಭ್ರಮ ಅಗತ್ಯ. ಲಸಿಕೆಯಿಂದ ಕೊರೋನಾ ವನ್ನು ಹೋಗಲಾಡಿಸಬಹುದು ಎಂಬ ಆಶಾಭಾವನೆ ಇದೆ. ಒಂದು ವೇಳೆ ಕೊರೋನ ಕಡಿಮೆಯಾದರೆ ಕಾರ್ಯಕ್ರಮಗಳಿಗೆ ಮತ್ತೆ ಕಳೆಕಟ್ಟುತ್ತದೆ. ಇದರಿಂದ ಸಂಭ್ರಮ ಮತ್ತೆ ನೆಲೆಸಬಹುದು. ಕೊರೋನಾ ಕಡಿಮೆಯಾಗಲಿ ಸಂಭ್ರಮ ಮತ್ತೆ ನಮ್ಮ ಜೀವನದಲ್ಲಿ ನೆಲೆಸಲಿ ಎಂಬುದೇ ನಮ್ಮ ಹಾರೈಕೆ.