ನವದೆಹಲಿ: ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ ನೂತನ ಸಾಮಾಜಿಕ ಜಾಲತಾಣ ನಿಯಮದ ವಿರುದ್ಧ ಸಾಮಾಜಿಕ ಜಾಲತಾಣ ದ ವಾಟ್ಸಪ್ ಕೋರ್ಟ್ ಮೆಟ್ಟಿಲೇರಿದೆ. ದೆಹಲಿ ಹೈಕೋರ್ಟಿನ ಮುಂದೆ ಅರ್ಜಿ ಸಲ್ಲಿಸಿದ್ದ ವಾಟ್ಸಾಪ್ ಮುಂದಿನ ಆದೇಶದವರೆಗೆ ಕೇಂದ್ರ ಸರ್ಕಾರ ಕೈಗೊಳ್ಳುವ ಯಾವುದೇ ಕ್ರಮದ ವಿರುದ್ಧ ತಡೆ ನೀಡಬೇಕೆಂದು ಮನವಿ ಮಾಡಿದೆ. ಮೂರನೇ ಪಾರ್ಟಿಗೆ ಉಪಯೋಗಿಸುವ ನಾಗರಿಕರ ವೈಯಕ್ತಿಕ ದಾಖಲೆಗಳನ್ನು ನೀಡಬಾರದು ಎಂಬ ಕೇಂದ್ರ ಸರಕಾರದ ನೀತಿಯ ಬಗ್ಗೆ ವಾಟ್ಸಪ್ ಸ್ಪಷ್ಟ ನಿಲುವು ತಾಳಿಲ್ಲ.
ಈ ಮೊದಲು ವಾಟ್ಸಪ್ ತನ್ನ ಉಪಯೋಗದ ನೀತಿಗಳು ಮತ್ತು ವೈಯಕ್ತಿಕ ನೀತಿಗಳ ಬಗ್ಗೆ ಹೊಸ ನೀತಿಯನ್ನು ಜಾರಿಗೆ ತರುವುದಾಗಿ ಘೋಷಿಸಿತು. ಆದರೆ ಯಾವುದೇ ಹೊಸ ನೀತಿಯನ್ನು ವಾಟ್ಸಾಪ್ ಜಾರಿಗೆ ತಂದಿಲ್ಲ. ಆದರೆ ಕೇಂದ್ರ ಸರಕಾರ ಈ ಎಲ್ಲ ಸಾಮಾಜಿಕ ಜಾಲತಾಣಗಳಿಗೆ ಗಡು ವಿಧಿಸಿದ್ದು ಅದು ನಿನ್ನೆಗೆ ಕೊನೆಗೊಂಡಿದೆ. ಈ ನಡುವೆ ಸರ್ಕಾರದ ಆದೇಶವನ್ನು ಪಾಲಿಸದ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರ್ಕಾರ ನಿಷೇಧ ಹೇರುತ್ತದೆ ಎಂಬ ವರದಿ ಈಗ ಬಳಕೆದಾರರಲ್ಲಿ ಆತಂಕ ಸೃಷ್ಟಿ ಮಾಡಿದೆ.