ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸುಳ್ಯಕ್ಕೆ ಸಮೀಪದಲ್ಲಿದೆ ರಾಣಿಪುರಂ ಎಂಬ ಅದ್ಭುತ ಪ್ರವಾಸಿ ಹಿಲ್ ಸ್ಟೇಷನ್!!

Twitter
Facebook
LinkedIn
WhatsApp
ಸುಳ್ಯಕ್ಕೆ ಸಮೀಪದಲ್ಲಿದೆ ರಾಣಿಪುರಂ ಎಂಬ ಅದ್ಭುತ ಪ್ರವಾಸಿ ಹಿಲ್ ಸ್ಟೇಷನ್!!

ರಾಣಿಪುರಂ ಹಿಲ್ ಸ್ಟೇಷನ್ ಸುಳ್ಯಕ್ಕೆ 30 ಕಿಲೋಮೀಟರ್ ದೂರದಲ್ಲಿ ಇದೆ ಎಂಬುದನ್ನು ನಾವು ನಂಬಲುಸಾಧ್ಯ ಇಲ್ಲ. ಸುಳ್ಯದಿಂದ ಅಲೆಟ್ಟಿ ಮಾರ್ಗವಾಗಿ ಕರಿಕೆ ಪಾಣತ್ತೂರು ಮೂಲಕ ರಾಣಿಪುರಂ ತಲುಪಬಹುದು.


ಕಾಸರಗೋಡು ಜಿಲ್ಲೆಯಲ್ಲಿರುವ ರಾಣಿಪುರಂ ಅದ್ಭುತ ಪ್ರವಾಸಿ ತಾಣ. ಇಂತಹ ಅದ್ಭುತ ಪ್ರವಾಸಿತಾಣ ಇದುವರೆಗೂ ಪ್ರವಾಸಿಗರಿಗೆ ಹೆಚ್ಚಿನ ಮಟ್ಟದಲ್ಲಿ ಪ್ರಚಾರ ವಾಗಿರಲಿಲ್ಲ. ಆದರೆ ಈಗ ಅದು ಬೆಳಕಿಗೆ ಬರುತಿದೆ. ಭಾಗಮಂಡಲದಿಂದ ಕೇವಲ 35 ಕಿಲೋಮೀಟರ್ ದೂರದಲ್ಲಿ ರಾಣಿಪುರಂ ಇದೆ. ಮಡಿಕೇರಿಯಿಂದ 65km ದೂರದಲ್ಲಿ ರಾಣಿಪುರಂ ಇದೆ.

ಸಮುದ್ರಮಟ್ಟದಿಂದ 780 ಮೀಟರ್ ಎತ್ತರದಲ್ಲಿರುವ ರಾಣಿಪುರಂನ ತುತ್ತತುದಿಯಲ್ಲಿ ನಾವು ಸಮುದ್ರವನ್ನು ವೀಕ್ಷಿಸಬಹುದಾಗಿದೆ. ಅದ್ಭುತ ಪ್ರಕೃತಿ ಸೌಂದರ್ಯದ ಈ ಪ್ರವಾಸಿತಾಣ ಸಾವಿರಾರು ಮರಗಿಡಗಳಿಗೆ ಆಶ್ರಯ ತಾಣವಾಗಿದೆ.


ಯಾವ ಪ್ರದೇಶದಲ್ಲಿ ಕಾಣಸಿಗದ ಸುಂದರ ಪ್ರಕೃತಿಯ ಅನುಭವ ಇಲ್ಲಿ ನಮಗೆ ಸಿಗುತ್ತದೆ. ಚಾರಣ ಮಾಡುವವರಿಗೆ ಇದು ಹೇಳಿ ಮಾಡಿದ ಸ್ಥಳ. ಸೂರ್ಯಾಸ್ತ ಮತ್ತು ಸೂರ್ಯ ಉಗಮದ ಅದ್ಭುತ ದೃಶ್ಯಗಳನ್ನು ವೀಕ್ಷಿಸಬಹುದಾಗಿದೆ.

ಸುಳ್ಯಕ್ಕೆ ಸಮೀಪದಲ್ಲಿದೆ ರಾಣಿಪುರಂ ಎಂಬ ಅದ್ಭುತ ಪ್ರವಾಸಿ ಹಿಲ್ ಸ್ಟೇಷನ್!!

ಯಾವ ಪರ್ವತದ ತುತ್ತತುದಿಗೆ ಅಷ್ಟು ಸುಲಭದಲ್ಲಿ ತಲುಪಲು ಸಾಧ್ಯವಿಲ್ಲ. ಆದರೆ ರಾಣಿಪುರ0 ತುತ್ತತುದಿಗೆ ಸುಲಭದಲ್ಲಿ ತಲುಪಬಹುದಾಗಿದೆ. ಅಂತಹ ವ್ಯವಸ್ಥೆಗಳನ್ನು ಕೇರಳ ಪ್ರವಾಸೋದ್ಯಮ ಇಲಾಖೆ ಮಾಡಿದೆ. ನಾವು ಕಾಸರಗೋಡ ಮುಖಾಂತರವೂ ರಾಣಿಪುರ ನ್ನು ತಲುಪಬಹುದು.


ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಪ್ರದೇಶಕ್ಕೆ ಇದು ಬಹಳ ಹತ್ತಿರದಲ್ಲಿದೆ. ಮಾನ್ಸೂನ್ ಪ್ರವಾಸಕ್ಕೆ ಹೇಳಿಮಾಡಿಸಿದ ಸ್ಥಳ ರಾಣಿಪುರಂ.

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ