ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಚಿಕ್ಕಮಗಳೂರು: ಕಪಾಲಿ ಬೆಟ್ಟವನ್ನೇ ಪರಿವರ್ತನೆ ಮಾಡಿದ ಪಾರ್ಟಿಗಳಿಂದ ಇನ್ನೇನೂ ನಿರೀಕ್ಷೆ ಸಾಧ್ಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕಾಂಗ್ರೆಸ್ ವಿರುದ್ದ ಕಿಡಿಕಾರಿದ್ದಾರೆ.
ಸುದ್ದಿರಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರ ಬರುತ್ತೆ ಅನ್ನೋದು ತಿರುಕನ ಕನಸು. ಸೋನಿಯಾ ಗಾಂಧಿಗೆ ಪ್ರೀತಿ ಆಗೋದೆಲ್ಲ ಮಾತನಾಡ್ತಾರೆ. ಕೆಪಿಸಿಸಿ ಅಧ್ಯಕ್ಷರು ಮತ್ತು ವಿಪಕ್ಷ ನಾಯಕರು ಕಾಂಪಿಟೇಷನ್ನಲ್ಲಿ ಮಾತನಾಡ್ತಾರೆ. ಯಾಕೆ ಮಾತನಾಡ್ತಾರೆ ಅಂದ್ರೆ, ಅವರಿಗೆ ಸೋನಿಯಾ ಗಾಂಧಿ ಮೆಚ್ಚಿಸಬೇಕು. ಕಪಾಲಿ ಬೆಟ್ಟವನ್ನು ಪರಿವರ್ತಿಸಿದ್ದಕ್ಕೆ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದರು. ಕಪಾಲಿ ಬೆಟ್ಟವನ್ನೇ ಪರಿವರ್ತನೆ ಮಾಡಿದ ಪಾರ್ಟಿಗಳಿಂದ ಇನ್ನೇನೂ ನಿರೀಕ್ಷೆ ಸಾಧ್ಯ.
ಮತಾಂತರ ಕಾಯ್ದೆಗೆ ಕಾಂಗ್ರೆಸ್ ವಿರೋಧವಾಗಿ ಮಾತನಾಡಿ, ಹಿಂದೂಗಳು ಮತಾಂತರವಾದರೆ ಕಾಂಗ್ರೆಸ್ನವರ ವೋಟ್ ಬ್ಯಾಂಕ್ ಜಾಸ್ತಿಯಾಗುತ್ತೆ ಎಂಬ ಷಡ್ಯಂತ್ರನಾ? ಎಲ್ಲಿವರೆಗೂ ಮುಸ್ಲಿಂ ಅಲ್ಪ ಸಂಖ್ಯಾತರಾಗಿರುತ್ತಾರೋ, ಅಲ್ಲಿವರೆಗೂ ಕಾಂಗ್ರೆಸ್ಗೆ ಮತ. ಮುಸ್ಲಿಮರು ಬಹುಸಂಖ್ಯಾತರು ಆದ ದಿನ ಅವರೆಲ್ಲರೂ ಎಂಐಎಂ, ಎಸ್ಡಿಪಿಐ, ಪಿಎಫ್ಐ, ಮುಸ್ಲಿಂ ಲೀಗ್ಗಳ ವೋಟ್ ಬ್ಯಾಂಕ್ ಆಗ್ತಾರೆ.
ಮುಸ್ಲಿಮರು ಬಹುಸಂಖ್ಯಾತರಾಗುತ್ತಿದ್ದಂತೆ ಯಾವ ಜಾತ್ಯಾತೀತತೆನೂ ಇಲ್ಲ, ಯಾವ ಕಾಂಗ್ರೆಸ್ ಇಲ್ಲ. ಮತಾಂತರಕ್ಕೆ ಕುಮ್ಮಕ್ಕು ನೀಡುವ ಹೇಳಿಕೆಯಿದೆ. ಅವರಿಂದ ಇನ್ನೇನೂ ನಿರೀಕ್ಷೆ ಮಾಡೋಕೆ ಸಾಧ್ಯ ಎಂದು ಹೇಳಿದರು.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?