ಭಾನುವಾರ, ಮೇ 5, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪತಂಜಲಿ ಆಯುರ್ವೇದ ಆಹಾರ ವ್ಯಾಪಾರವನ್ನು ಸುಮಾರು 690 ಕೋಟಿ ರೂಪಾಯಿಗೆ ರುಚಿ ಸೋಯಾ ಸ್ವಾಧೀನ!

Twitter
Facebook
LinkedIn
WhatsApp
ಪತಂಜಲಿ ಆಯುರ್ವೇದ ಆಹಾರ ವ್ಯಾಪಾರವನ್ನು ಸುಮಾರು 690 ಕೋಟಿ ರೂಪಾಯಿಗೆ ರುಚಿ ಸೋಯಾ ಸ್ವಾಧೀನ!

ಖಾದ್ಯ ತೈಲ (edible oil) ಪ್ರಮುಖ ಕಂಪೆನಿಯಾದ ರುಚಿ ಸೋಯಾ ಘೋಷಿಸಿರುವಂತೆ, ಪತಂಜಲಿ ಆಯುರ್ವೇದ ಆಹಾರ ವ್ಯಾಪಾರವನ್ನು ಸುಮಾರು 690 ಕೋಟಿ ರೂಪಾಯಿಗೆ ಸ್ವಾಧೀನ ಮಾಡಿಕೊಳ್ಳುವುದಾಗಿ ಹೇಳಿದೆ. ಇದು ರುಚಿ ಸೋಯಾವನ್ನು ಎಫ್‌ಎಂಸಿಜಿ ವರ್ಗಕ್ಕೆ ಬದಲಾಯಿಸಬಹುದು ಎಂದು ನಿರೀಕ್ಷಿಸಲಾಗಿದೆ. ನಿಯಂತ್ರಕ ಅನುಮೋದನೆಗಳ ನಂತರ ರುಚಿ ಸೋಯಾ ಇಂಡಸ್ಟ್ರೀಸ್ ಲಿಮಿಟೆಡ್ ಹೆಸರನ್ನು ಪತಂಜಲಿ ಫುಡ್ಸ್ ಲಿಮಿಟೆಡ್ ಎಂದು ಬದಲಾಯಿಸಲಾಗುತ್ತದೆ. ಸ್ವಾಧೀನಪಡಿಸಿಕೊಂಡಿರುವ ಆಹಾರ ವ್ಯಾಪಾರವು ತುಪ್ಪ, ಜೇನುತುಪ್ಪ, ಮಸಾಲೆಗಳು, ಜ್ಯೂಸ್​ಗಳು ಮತ್ತು ಹಿಟ್ಟು ಸೇರಿದಂತೆ 21 ಉತ್ಪನ್ನಗಳನ್ನು ಒಳಗೊಂಡಿದೆ. ರುಚಿ ಸೋಯಾವು ಪತಂಜಲಿ ಆಯುರ್ವೇದಕ್ಕೆ ವಾರ್ಷಿಕ ರಾಯಲ್ಟಿ ಪಾವತಿಸುತ್ತದೆ. ಕಂಪೆನಿಯ ಮೂಲಗಳ ಪ್ರಕಾರ, ವರ್ಗಾವಣೆ ಒಪ್ಪಂದದ ಅಡಿಯಲ್ಲಿ ಉತ್ಪನ್ನಗಳ ಒಟ್ಟು ವಹಿವಾಟಿನ ಶೇಕಡಾ 1ರಷ್ಟು ಅಂದಾಜಿಸಲಾಗಿದೆ.

ಇದು ಸಾಲ-ಮುಕ್ತ ವರ್ಗಾವಣೆಯಾಗಿದೆ ಮತ್ತು ರುಚಿ ಸೋಯಾ ಆಂತರಿಕ ಸಂಚಯದ ಮೂಲಕ ಸ್ವಾಧೀನಪಡಿಸಿಕೊಳ್ಳಲು ಹಣವನ್ನು ನೀಡುತ್ತದೆ ಎಂದು ಅವರು ಹೇಳಲಾಗಿದೆ. “ಆಹಾರ ವಿಭಾಗದ ಎಲ್ಲ ಸ್ಥಿರ ಆಸ್ತಿಗಳು ಮತ್ತು ಕುಸಿತದ ಮಾರಾಟ ಆಧಾರದ ಮೇಲೆ ಸಂಬಂಧಿಸಿದ ಪ್ರಸ್ತುತ ಆಸ್ತಿಗಳ ಆಧಾರದಲ್ಲಿ 690 ಕೋಟಿ ರೂಪಾಯಿಗಳ ನ್ಯಾಯಯುತ ಮಾರುಕಟ್ಟೆ ಮೌಲ್ಯದಲ್ಲಿ ಸ್ವಾಧೀನಪಡಿಸಿಕೊಳ್ಳಲಾಗಿದೆ,” ಎಂದು ಕಂಪೆನಿಯು ವಿನಿಮಯ ಕೇಂದ್ರದ ಫೈಲಿಂಗ್​ನಲ್ಲಿ ತಿಳಿಸಿದೆ. ಪತಂಜಲಿ ಆಯುರ್ವೇದ ಮಂಡಳಿಯು ಮೇ 9ರಿಂದ ಜಾರಿಗೆ ಬರುವಂತೆ ಈ ಆಹಾರ ವ್ಯವಹಾರವನ್ನು ರುಚಿ ಸೋಯಾ ಇಂಡಸ್ಟ್ರೀಸ್‌ಗೆ ವರ್ಗಾಯಿಸಲು ಅನುಮೋದನೆ ನೀಡಿದೆ. ಬುಧವಾರದ ವಹಿವಾಟಿನಲ್ಲಿ ರುಚಿ ಸೋಯಾ ಶೇರುಗಳು ಶೇ 10ರಷ್ಟು ಏರಿಕೆ ಕಂಡು, 1,192.15 ರೂಪಾಯಿಯಲ್ಲಿ ಕೊನೆಗೊಂಡಿತು.

Click here to support us

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಅಂಕಣ