ಹುಬ್ಬಳ್ಳಿ – ಇದನ್ನು ಜನ ಡೆಡ್ಲಿ ರೋಡ್ (Deadly Road) ಅಂತಾನೇ ಕರೀತಾರೆ. ಸಾವಿನ ರಸ್ತೆ ಅಂತ ಅಪಖ್ಯಾತಿಗೆ ಗುರಿಯಾಗಿರೋ ಈ ರಸ್ತೆ ನೂರಾರು ಜನರನ್ನು ಬಲಿ ಪಡೆದಿದೆ. ಕೆಲವೊಮ್ಮೆ ಸಾವಿನ ಸಂಖ್ಯೆ (Death Numbers) 14 ನ್ನೂ ದಾಟಿದೆ. ಕೇವಲ 26 ಕಿಲೋ ಮೀಟರ್ ಅಂತರದ ಈ ರಸ್ತೆ ಅಗಲೀಕರಣ ನಡೀತಾನೇ ಇಲ್ಲ. ಜನ ಸಾವಿನ ಮನೆ ಕದ ತಟ್ಟೋದೂ ನಿಂತಿಲ್ಲ. ಡೆಡ್ಲಿ ಗ್ಯಾಂಗ್ ಗೊತ್ತು. ಇದ್ಯಾವುದು ಡೆಡ್ಲಿ ರೋಡ್ ಅಂತೀರಾ. ಅಂಥದ್ದೊಂದು ಭಯಾನಕ ರಸ್ತೆ ಹುಬ್ಬಳ್ಳಿ – ಧಾರವಾಡ (hubballi – Dharwad) ಅವಳಿ ನಗರದ ನಡುವೆ ಇದೆ. ರಾಷ್ಟ್ರೀಯ ಹೆದ್ದಾರಿ (National Highway) ರೂಪದಲ್ಲಿರೋ ಬೈಪಾಸ್ ರಸ್ತೆ ಒಂದರ್ಥದಲ್ಲಿ ಸಾವಿನ ಮನೆಗೆ ಕರೆದೊಯ್ಯೋ ರಹದಾರಿಯಾಗಿದೆ. ಸ್ವಲ್ಪ ಯಾಮಾರಿದ್ರೂ ಯಮನ ಪಾದ ಸೇರೋದು ಗ್ಯಾರಂಟಿ.
ವರ್ಷಕ್ಕೆ ಏನಿಲ್ಲವೆಂದರೂ ಕನಿಷ್ಟ 50 ಸಾವು ಖಚಿತವಾಗಿದೆ. ಇನ್ನು ಗಾಯಾಳುಗಳ ಲೆಕ್ಕ ಹೇಳತೀರದು. ವಾಣಿಜ್ಯ ರಾಜಧಾನಿ ಅಂತಲೇ ಕರೆಸಿಕೊಂಡಿರೋ ಹುಬ್ಬಳ್ಳಿಗೆ ಹೊಂದಿಕೊಂಡಿದೆ ಈ ರಸ್ತೆ ನೂರಾರು ಜೀವಗಳನ್ನು ಬಲಿ ಪಡೆದಿದೆ.
12 ವರ್ಷದಲ್ಲಿ 390 ಬಲಿ
ಹುಬ್ಬಳ್ಳಿ – ಧಾರವಾಡ ನಡುವಿನ ಈ ರಸ್ತೆಯಲ್ಲಿ ಅದೆಷ್ಟೋ ಜನರ ಪ್ರಾಣಪಕ್ಷಿ ಹಾರಿಹೋಗಿದೆ. ಕಳೆದ 12 ವರ್ಷದಲ್ಲಿ 390 ಜೀವಗಳು ಬಲಿಯಾಗಿವೆ. 2021 ರಲ್ಲಿ ನಡೆದ ಒಂದೇ ಅಪಘಾತದಲ್ಲಿ 14 ಜನ ಸಾವಿಗೀಡಾಗಿದ್ದರು. ಮೊನ್ನೆಯಷ್ಟೇ ಇಲ್ಲಿ ಎಂಟು ಜನ ಸಾವನ್ನಪ್ಪಿ, 24 ಜನ ಗಾಯಗೊಂಡಿದ್ದರು.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?