ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಪುನೀತ್ ರಾಜ್ ಕುಮಾರ್ ಇನ್ನಿಲ್ಲವಾಗಿ ಮೂರು ದಿನ ಕಳೆದಿದೆ. ಹಗಲು ರಾತ್ರಿಯ ಪರಿವೇ ಇಲ್ಲದೇ ೨೦ ಲಕ್ಷಕ್ಕೂ ಅಧಿಕ ಅಭಿಮಾನಿಗಳು ಪುನೀತ್ ಅಂತಿಮ ದರ್ಶನ ಪಡೆದಿದ್ದಾರೆ. ಆದರೆ ತಮಿಳು ಚಿತ್ರರಂಗ ಮಾತ್ರ ಪುನೀತ್ ಮರೆತಿದ್ದು ಇದಕ್ಕೆ ನಟಭಯಂಕರ ಪ್ರಥಮ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಟ್ವೀಟ್ ಮಾಡಿರೋ ಬಿಗ್ ಬಾಸ್ ಖ್ಯಾತಿಯ ನಟ ಪ್ರಥಮ್, ಅಪ್ಪು ಸರ್ ಸತ್ತ 3 ದಿನ ಮಣ್ಣಾದ್ರು. ತಮಿಳಿನಿದ ಕಲಾವಿದರು ಅಂತಿಮ ದರ್ಶನಕ್ಕೆ ಬಂದ್ರಾ ಅಂತ ಪ್ರಶ್ನಿಸಿದ್ದಾರೆ.
ಮಾತ್ರವಲ್ಲ, ರಜನಿಕಾಂತ್ ಗೆ ಹುಶಾರಿಲ್ಲ ಒಕೆ, ಮಿಕ್ಕವರು ಏನು ಕಿತ್ತಾಕ್ತಿದ್ರಿ ? ಎಂದು ಪ್ರಶ್ನೆ ಮಾಡಿದ್ದಾರೆ. ಅಲ್ಲದೇ ನಮ್ಮವರಿಗೆ ಸ್ವಾಭಿಮಾನ ಇದ್ದರೇ ಅವ್ರ ಸಿನಿಮಾ ನೋಡ್ಬೇಡಿ ಹಾಗೇ ಕರ್ನಾಟಕದಲ್ಲಿ ರಿಲೀಸ್ ಮಾಡಬೇಡಿ ಎಂದು ಪ್ರಥಮ್ ತಾಕೀತು ಮಾಡಿದ್ದಾರೆ. ರಜನಿಕಾಂತ್, ಆಕ್ಟರ್ ವಿಜಯ್,ಕಮಲ್ ಹಾಸನ್,ರಾಘವ್ ಲಾರೇನ್ಸ್ ಹಾಗೂ ಅಜಿತ್ ರನ್ನು ಟ್ಯಾಗ್ ಮಾಡಿದ್ದಾರೆ.
ಅಪ್ಪು ಸರ್ ಸತ್ತ 3ನೇ ದಿನ ಮಣ್ಣಾದ್ರು!
ತಮಿಳಿನ ಕಲಾವಿದರು ಅಂತಿಮದರ್ಶನಕ್ಕೆ ಬಂದ್ರಾ?@rajinikanth ಗೆ ಹುಶಾರಿಲ್ಲ OK,ಮಿಕ್ಕವರು ಏನ್ ಕಿತ್ತಾಕ್ತಿದ್ರಿ?@actorvijay @Suriya_offl @ikamalhaasan, #ರಾಘವಲಾರೆನ್ಸ್? #ಅಜಿತ್?
ನಮ್ಮವರಿಗೆ ಸ್ವಾಭಿಮಾನ ಇದ್ರೆ ಅವ್ರ ಸಿನಿಮಾ ನೋಡ್ಬೇಡಿ!ಹಾಗೇ ಕರ್ನಾಟಕದಲ್ಲಿ release ಮಾಡ್ಬೇಡಿ!😡
— Olle Hudga Pratham (@OPratham) October 31, 2021
ಪುನೀತ್ ನಿಧನದ ಹಿನ್ನೆಲೆಯಲ್ಲಿ ತಮಿಳು ಸೇರಿದಂತೆ ಸೌತ್ ಇಂಡಸ್ಟ್ರಿಯ ಹಲವು ಖ್ಯಾತ ನಟರು ಆಗಮಿಸಿ ಪುನೀತ್ ರಾಜ್ ಕುಮಾರ್ ಅಂತಿಮ ದರ್ಶನ ಪಡೆದು ಕೊಂಡಿದ್ದಾರೆ. ಆದರೆ ತಮಿಳು ನಟರು ಮಾತ್ರ ಪುನೀತ್ ರಿಗೆ ಕೊನೆಯ ಸಲ ಗೌರವ ಸಲ್ಲಿಸಲು ಬಾರದೇ ಇರೋದು ಪ್ರಥಮ್ ಆಕ್ರೋಶಕ್ಕೆ ಕಾರಣವಾಗಿದೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?