ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಒಡಿಶಾದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಬಾಲಸೋರ್ ಜಿಲ್ಲೆಯ ನೀಲಗಿರಿಯಲ್ಲಿ ಮದುವೆ ಸಮಾರಂಭದಲ್ಲಿ ಡಿಜೆ ಮತ್ತು ಪಟಾಕಿ ಸಿಡಿಸಿದ ಪರಿಣಾಮ 63 ಕೋಳಿಗಳು ಹೃದಯಾಘಾತದಿಂದ ಸಾವನ್ನಪ್ಪಿವೆ. ಈ ಸಂಬಂಧ ಕೋಳಿ ಫಾರ್ಮ್ ಮಾಲೀಕ ರಂಜಿತ್ ಕುಮಾರ್ ಫರಿದಾ ಎಫ್ಐಆರ್ ದಾಖಲಿಸಿದ್ದಾರೆ.
ಭಾನುವಾರ ಮಧ್ಯರಾತ್ರಿ 11.30ರ ಸುಮಾರಿಗೆ ನನ್ನ ಕೋಳಿ ಫಾರಂ ಸಮೀಪದಲ್ಲಿ ಮದುವೆ ಮರೆವಣಿಗೆ ಸಾಗಿ ಹೋಗಿದೆ. ಈ ವೇಳೆ ಸಮಾರಂಭದಲ್ಲಿ ಡಿಜೆ ನುಡಿಸುತ್ತಿದ್ದರು. ಅಲ್ಲದೇ ಪಟಾಕಿ ಸಿಡಿಸುತ್ತಿದ್ದರು. ಬ್ಯಾಂಡ್ ವಾದಕರಿಗೂ ಧ್ವನಿ ತಗ್ಗಿಸುವಂತೆ ಮನವಿ ಮಾಡಿದರೆ ವರನ ಸ್ನೇಹಿತರು ಜಗಳವಾಡಿದರು.
ಮರುದಿನ ಬೆಳಗ್ಗೆ ಕೋಳಿಗಳು ಸಾವನ್ನಪ್ಪಿದ್ದು, ವೈದ್ಯರು ಪರೀಕ್ಷಿಸಿ ಹೃದಯಾಘಾತದಿಂದ ಪ್ರಾಣ ಕಳೆದುಕೊಂಡಿವೆ ಅಂತಾ ತಿಳಿಸಿದ್ದಾರೆ ಎಂದು ಫಾರ್ಮ್ ಮಾಲೀಕ ತಿಳಿಸಿದ್ದಾರೆ. ಮಾರನೇ ದಿನ ಫಾರ್ಮ್ ಮಾಲೀಕ ಫರಿದಾ ಮದುವೆ ಮನೆ ಬಂದು ಪರಿಹಾರ ಕೇಳಿದ್ದರು. ಪರಿಹಾರ ನೀಡಲು ನಿರಾಕರಿಸಿದ ಬಳಿಕ ಫರಿದಾ ನೀಲಗಿರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಿದ್ದಾರೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?