ಮಂಗಳವಾರ, ಮೇ 14, 2024
ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!-ಕೊನೆಗೂ ಹೆಚ್ ಡಿ ರೇವಣ್ಣಗೆ ಜಾಮೀನು ಮಂಜೂರು ; ಕೋರ್ಟ್ ಷರತ್ತುಗಳೇನು.?-ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್-ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಛಾಯಾಗ್ರಾಹಕ ಸುಷ್ಮಾ ಸ್ಟುಡಿಯೋ ವೀಡಿಯೋ ಮಾಲಕ “ಸುಬ್ಬು ಮೂಡುಬಿದಿರೆ’ ನಿಧನ

Twitter
Facebook
LinkedIn
WhatsApp
Subbu Moodbidri

ಮೂಡುಬಿದಿರೆ: ಸುಷ್ಮಾ ಸ್ಟುಡಿಯೋ ವೀಡಿಯೋ ಮಾಲಕ ಸುಬ್ರಹ್ಮಣ್ಯ ಯಾನೆ ಸುಬ್ಬು (55) (Subbu Moodbidri) ಜು. 26ರಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.

ಮೃತರು ಪತ್ನಿ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಹನ್ನೊಂದರ ಬಾಲಕನಾಗಿರುವಾಗಲೇ “ಪದ್ಮಶ್ರೀ ಸ್ಟುಡಿಯೋ’ದಲ್ಲಿ ಅರವಿಂದ ಕುಮಾರ್‌ ಅವರ ಶಿಷ್ಯರಾಗಿ, ಬಳಿಕ “ನವ್ಯ ಸ್ಟುಡಿಯೋ’ದ ಪಾಲುದಾರರಾಗಿ, 16 ವರ್ಷಗಳಿಂದ ತಮ್ಮದೇ ಆದ “ಸುಷ್ಮಾ ಸ್ಟುಡಿಯೋ’ ನಡೆಸತೊಡಗಿದ್ದ ಅವರು “ಸುಬ್ಬು ಮೂಡುಬಿದಿರೆ’ (Subbu Moodbidri) ಎಂದೇ ಪರಿಚಿತರು.

ಪತ್ರಿಕೆಗಳಿಗೆ ಹವ್ಯಾಸಿ ಛಾಯಾಚಿತ್ರಗ್ರಾಹಕರಾಗಿ, ಸಚಿತ್ರ ಕಥೆಗಳಿಗೆ ಹೊಂದುವ ಮಾಡೆಲ್‌ ಚಿತ್ರಗಳನ್ನು ಒದಗಿಸುತ್ತಿದ್ದ ಸುಬ್ಬು, ಓರ್ವ ಹವ್ಯಾಸಿ ರಂಗ ಕಲಾವಿದರೂ ಆಗಿದ್ದರು. ಎರಡೂವರೆ ದಶಕಗಳ ಹಿಂದೆ ಮೂಡುಬಿದಿರೆಯಲ್ಲಿ ಮೊದಲ ಕೇಬಲ್‌ ಟೀವಿ ಸುದ್ದಿಜಾಲ ಆಡ್ಲಾ ನ್ಯೂಸ್‌ ಆರಂಭವಾದಾಗ ಛಾಯಾಚಿತ್ರಗ್ರಾಹಕರಾಗಿ ಕರ್ತವ್ಯ ನಿರ್ವಹಿಸಿದ್ದರು.

ಬನ್ನಂಜೆ ಉಪನ್ಯಾಸ ರೆಕಾರ್ಡಿಂಗ್‌
“ಈ ಟೀವಿ’ಯಲ್ಲಿ ಬನ್ನಂಜೆ ಗೋವಿಂದಾಚಾರ್ಯರ ಸುಪ್ರಭಾತ ಕಾರ್ಯಕ್ರಮಕ್ಕಾಗಿ ನಿರಂತರ ಐದು ವರ್ಷಗಳ ಅವಧಿಗೆ ಬನ್ನಂಜೆಯವರ ನಿವಾಸದಲ್ಲಿ ತಾವೊಬ್ಬರೇ ಪ್ರವಚನಗಳ ರೆಕಾರ್ಡಿಂಗ್‌ ಅನ್ನು ನಡೆಸಿದ್ದರು.

ಅವರ ನಿಧನಕ್ಕೆ ದ.ಕ. ಜಿಲ್ಲಾ ಕಾರ್ಯನಿರತ ಛಾಯಾಚಿತ್ರಗ್ರಾಹಕರ ಸಂಘದ ಅಧ್ಯಕ್ಷ ರಾಜೇಶ್‌ ಶಾನುಭಾಗ್‌ ಮತ್ತಿತರ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

ಕಾಸರಗೋಡು: ಎಂಡಿಎಂಎ ಮಾದಕ ವಸ್ತು ಸಾಗಾಟದ ಸೂತ್ರಧಾರ ಅರೆಸ್ಟ್

ಕಾಸರಗೋಡು: ಬೆಂಗಳೂರು ಕೇಂದ್ರೀಕರಿಸಿ ಜಿಲ್ಲೆಗೆ ಎಂಡಿಎಂಎ ಮಾದಕ ವಸ್ತು ಸಾಗಾಟದ ಸೂತ್ರಧಾರ ನೋರ್ವನನ್ನು ಡಿವೈಎಸ್ಪಿ ಸಿ.ಕೆ ಸುನಿಲ್ ಕುಮಾರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಬಂಧಿತನನ್ನು ನೈಜೀರಿಯಾದ ಮೋಸೆಸ್ ಮೋ೦ಡೆ (33) ಎಂದು ಗುರುತಿಸಲಾಗಿದೆ.

ಆರೋಪಿಯನ್ನು ಗುರುವಾರ ಬೆಳಿಗ್ಗೆ ಬೆಂಗಳೂರಿನಿಂದ ಕಾಸರಗೋಡಿಗೆ ತಲುಪಿಸಲಾಗಿದೆ. ಈತನ ನೇತೃತ್ವದ ತಂಡವು ಕಾಸರಗೋಡು ಜಿಲ್ಲೆಗೆ ಹಲವಾರು ಬಾರಿ ಮಾದಕ ವಸ್ತು ತಲಪಿಸಿದ್ದು, ಮಾದಕ ವಸ್ತು ವ್ಯವಹಾರ ಬಗ್ಗೆ ಮಹತ್ವದ ಸುಳಿವು ಲಭಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವೈಭವ್ ಸಕ್ಸೆನಾ ತಿಳಿಸಿದ್ದಾರೆ.

ಈ ಹಿಂದೆ ಕೊಕೇನ್ ಸಾಗಾಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೋಸೆಸ್ ಮೋ೦ಡೆ ವಿರುದ್ಧ ಬೆಂಗಳೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಪ್ರಕರಣದಲ್ಲಿ ಜಾಮೀನು ಪಡೆದು ಬಿಡುಗಡೆ ಗೊಂಡಿದ್ದ ಈತ ಎಂಡಿಎಂಎ ಮಾದಕ ವಸ್ತು ವಹಿವಾಟು ನಡೆಸುತ್ತಿದ್ದನು ಎಂದು ಎಸ್ಪಿ ತಿಳಿಸಿದ್ದಾರೆ.

ಕಳೆದ ಏಪ್ರಿಲ್ ನಲ್ಲಿ ಬೇಕಲ ಠಾಣಾ ವ್ಯಾಪ್ತಿಯಲ್ಲಿ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೈಜೀರಿಯಾದ ಹಫ್ಸತ್ ರಿಯಾನಾತ್ ಎಂಬ ಯುವತಿಯನ್ನು ಬಂಧಿಸಲಾಗಿತ್ತು. ಈಕೆಯಿಂದ ಮಾಹಿತಿ ಪಡೆದಿದ್ದ ಪೊಲೀಸರು ತನಿಖೆ ನಡೆಸಿ ಬೆಂಗಳೂರಿನಿಂದ ಸಾಗಾಟದ ರೂವಾರಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಮಂಗಳೂರು