ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕತ್ರಿನಾ ಕೈಫ್ ನಟ ವಿಕ್ಕಿ ಕೌಶಲ್ರೊಂದಿಗೆ ವರ್ಷಾಂತ್ಯಕ್ಕೆ ಹಸೆಮಣೆ ಏರಲಿದ್ದಾರೆಂಬ ಸುದ್ದಿ ಇದೀಗ ಸದ್ದು ಮಾಡುತ್ತಿದೆ. ತಮ್ಮ ವಿವಾಹದ ಬಗ್ಗೆ ವಿಕ್ಕಿ ಆಗಲೀ ಅಥವಾ ಕತ್ರಿನಾ ಆಗಲಿ ಇದುವರೆಗೆ ಬಾಯಿ ಬಿಡದಿದ್ದರೂ ಹೀಗೊಂದು ಸುದ್ದಿ ಬಾಲಿವಡ್ ಅಂಗಳದಲ್ಲಿ ಓಡಾಡುತ್ತಿದೆ. ಈ ವರ್ಷದ ಡಿಸೆಂಬರ್ನಲ್ಲಿ ರಾಜಸ್ತಾನದ ವೈಭವಯುತ ಕೋಟೆ-ಸಹಿತವಿರುವ ರೆಸಾರ್ಟ್ ಒಂದರಲ್ಲಿ ಇವರಿಬ್ಬರೂ ವಿವಾಹವಾಗಲಿದ್ದಾರೆ ಎನ್ನಲಾಗಿದೆ.
ವರದಿಗಳ ಪ್ರಕಾರ ಕತ್ರಿನಾ ಹಾಗೂ ವಿಕ್ಕಿ ಇವರಿಬ್ಬರೂ ಸದ್ದಿಲ್ಲದೇ ತಮ್ಮ ವಿವಾಹ ಸಮಾರಂಭದ ತಯಾರಿಯಲ್ಲಿ ತೊಡಗಿದ್ದು ಇತ್ತೀಚಿನ ವರದಿಗಳ ಪ್ರಕಾರ ತಮ್ಮ ವಿವಾಹಕ್ಕೆ ಆಗಮಿಸಲಿರುವ ಅತಿಥಿಗಳು ತಮ್ಮ-ತಮ್ಮ ಮೊಬೈಲ್ ಫೋನ್ಗಳನ್ನು ಸಮಾರಂಭ ಸ್ಥಳಕ್ಕೆ ತರಬಾರದೆನ್ನುವ ನಿಯಮವನ್ನು ವಿಧಿಸಿದ್ದಾರೆ. ಈ ವಿವಾಹವನ್ನು ಸಂಘಟಿಸಲಿರುವ ಸಂಸ್ಥೆಗೆ ಈ ಬಗ್ಗೆ ಆದೇಶವನ್ನು ನೀಡಿದ್ದಾರೆ ಎನ್ನಲಾಗಿದ್ದು ತಮ್ಮ ವಿವಾಹ ಸಮಾರಂಭದ ಚಿತ್ರಗಳಾಗಲೀ ಅಥವಾ ವಿಡಿಯೋಗಳಾಗಲೀ ಅವರ ಗಮನಕ್ಕೆ ಬಾರದೇ ಯಾವುದೇ ಸಾಮಾಜಿಕ ಜಾಲತಾಣಗಳಲ್ಲೂ ಕಾಣಿಸಿಕೊಳ್ಳಬಾರೆದೆಂದು ತಾಕೀತು ಮಾಡಿದ್ದಾರೆ ಎನ್ನಲಾಗಿದೆ. ಭದ್ರತೆ ಹಾಗೂ ಖಾಸಗಿತನವನ್ನು ಸುನಿಶ್ಚಿತಗೊಳಿಸಕೊಳ್ಳಲೆಂದೇ ಒಂದು ತಂಡವನ್ನೂ ಇವರು ನಿಯೋಜಿಸಿಕೊಂಡಿದ್ದಾರೆಂದೂ ಹೇಳಲಾಗಿದೆ.
ಇವರಿಬ್ಬರ ಕುಟುಂಬಗಳಲ್ಲದೇ ಅನೇಕ ಬಾಲಿವುಡ್ನ ಪ್ರತಿಷ್ಠಿತರು ಆಗಮಿಸುವ ಸಮಾರಂಭ ಇದಾಗಿದ್ದು ಈ ನಿಯಮವನ್ನು ಎಲ್ಲರೂ ತಪ್ಪದೇ ಪಾಲಿಸಬೇಕೆಂದು ಸೂಚಿಸಲಾಗಿದೆ.
ಇದಕ್ಕೂ ಮುನ್ನ ವಿವಾಹವಾದ ಪ್ರಿಯಾಂಕ ಛೋಪ್ರಾ-ನಿಕ್ ಜೊನಾಸ್ ಹಾಗೂ ದೀಪಿಕಾ ಪಡುಕೋಣೆ-ರಣ್ವೀರ್ ಸಿಂಗ್ ಸಹ ತಮ್ಮ-ತಮ್ಮ ವಿವಾಹಗಳ ಸಂದರ್ಭದಲ್ಲಿ ಇದೇ ವಿಧಾನವನ್ನು ಅನುಸರಿಸಿದ್ದರು.
ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ತಮ್ಮ ವಿವಾಹ ಸಮಾರಂಭದ ವ್ಯವಸ್ಥೆಗಳನ್ನು ಸದ್ದಿಲ್ಲದೇ ಮಾಡಿಕೊಳ್ಳುತ್ತಿದ್ದಾರೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?