ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ತ್ರಿಶ್ಶೂರ್: ಯಾವುದೋ ಸಂದರ್ಭದಲ್ಲಿ ಬೇರ್ಪಟ್ಟ ಕೆಲವು ಸಂಬಂಧಗಳು, ಇನ್ಯಾವುದೋ ರೂಪದಲ್ಲಿ ಬೆಸೆಯುವ ಅಪರೂಪದ ಆಪ್ತ ಕಥನಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಪಕ್ಕದ ಕೇರಳದಲ್ಲಿ ಅಂತಹದ್ದೊಂದು ವಿಶೇಷ ಘಟನೆ ನಡೆದಿದೆ. ಒಂದು ಕಾಲದಲ್ಲಿ ಸಹಪಾಠಿಗಳಾಗಿದ್ದ ಇಬ್ಬರು, ಸ್ನೇಹಿತರ ಒತ್ತಾಸೆ ಮೇರೆಗೆ 35 ವರ್ಷಗಳ ಬಳಿಕ ಮದುವೆಯಾಗಿದ್ದಾರೆ. ಅಂದಹಾಗೆ, ಈ ನವದಂಪತಿಯ ಅಂದಾಜು ವಯಸ್ಸು 51.
1986-87ರ ಸಂದರ್ಭದಲ್ಲಿ, 10ನೇ ತರಗತಿ ಓದುತ್ತಿದ್ದ ಹರಿದಾಸನ್ ಕೆಎಸ್ಯು ನಾಯಕತ್ವ ವಹಿಸಿದ್ದರೆ, ಅವರ ಸಹಪಾಠಿ ಸುಮತಿ ಎಸ್ಎಫ್ಐ ಕಾರ್ಯಕರ್ತೆಯಾಗಿದ್ದರು. ಸಾಮಾಜಿಕ ಚಟುವಟಿಕೆಗಳಿಂದ ಕಲೆಯ ಕಡೆ ಆಕರ್ಷಿತರಾದ ಕಲಾಮಂಡಲಂ ಹರಿದಾಸನ್, ಈಗ ‘ತಿಮಿಲಾ’ (ಕೇರಳದ ಚಂಡೆ ಮಾದರಿಯ ವಾದ್ಯ) ಪರಿಣತ. ಸುಮತಿ ಮಾತ್ರ ತಮ್ಮ ಹೋರಾಟದ ಹಾದಿಯಲ್ಲೇ ಸಾಗಿ ಸಿಪಿಎಂನ ಪಣ್ಣಿತಾಡಂ ಶಾಖೆಯ ಸದಸ್ಯೆಯಾಗಿದ್ದಾರೆ. ಜತೆಗೆ ಚೌವನ್ನೂರ್ ಬ್ಲಾಕ್ ಪಂಚಾಯತ್ನ ಮಾಜಿ ಅಧ್ಯಕ್ಷೆಯೂ ಹೌದು. ಅವರಿಬ್ಬರ ವಿವಾಹ ಸೋಮವಾರ ನೆರವೇರಿದೆ.
ಮಾಮೂಲಿ ಪ್ರೇಮ ಕಥೆಯಾಗಿದ್ದರೆ ಅವರ ಮದುವೆ ಅಷ್ಟೇನು ಗಮನ ಸೆಳೆಯುತ್ತಿರಲಿಲ್ಲ. ಅವರಿಬ್ಬರ ಮದುವೆಯ ಪ್ರಸ್ತಾಪ ಮಾಡಿದ್ದು ಅವರ ಮಾಜಿ ಸಹಪಾಠಿಗಳು ಎನ್ನುವುದು ವಿಶೇಷ.
ಮರಾಠಂಕೂಡು ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳ ವಾಟ್ಸಾಪ್ ಗ್ರೂಪ್, ಈ ಇಬ್ಬರು ಮಾಜಿ ಸಹಪಾಠಿಗಳನ್ನು ಬೆಸೆದಿದೆ. ಮೂರು ವರ್ಷಗಳ ಹಿಂದೆ, ಹಳೆಯ ವಿದ್ಯಾರ್ಥಿಗಳು ವಾಟ್ಸಾಪ್ ಗ್ರೂಪ್ ಮೂಲಕ ಮತ್ತೆ ಜತೆಗೂಡಿದ್ದರು. ಅವರಲ್ಲಿ ಹರಿದಾಸನ್ ಮತ್ತು ಸುಮತಿ ಇಬ್ಬರೂ ಮದುವೆಯಾಗದೆ ಉಳಿದಿರುವುದು ಮತ್ತು ಒಂಟಿ ಜೀವನ ನಡೆಸುತ್ತಿರುವುದು ಅವರ ಗಮನಕ್ಕೆ ಬಂದಿತ್ತು.
ಕೆಲವು ತಿಂಗಳ ಹಿಂದೆ ಅವರ ಮಾಜಿ ಸಹಪಾಠಿ ಸತೀಶನ್, ಒಬ್ಬರೂ ಜತೆಗೂಡಿ ಹೊಸ ಜೀವನ ಆರಂಭಿಸಬಹುದು ಎಂಬ ಆಲೋಚನೆ ಮುಂದಿಟ್ಟಿದ್ದರು. ಇದಕ್ಕೆ ಅವರ ಸ್ನೇಹಿತರಿಂದ ಬೆಂಬಲ ವ್ಯಕ್ತವಾಗಿತ್ತು. ಆದರೆ, ಮದುವೆ ಬಗ್ಗೆ ಯೋಚನೆಯೇ ಇಲ್ಲ ಎಂದು ಅವರಿಬ್ಬರೂ ಅದನ್ನು ನಿರಾಕರಿಸಿದ್ದರು. ಅಷ್ಟಾದರೂ ಸ್ನೇಹಿತರು ಪಟ್ಟುಬಿಡಲಿಲ್ಲ. ತಾವೆಲ್ಲ ಮದುವೆಯಾಗಿ ಸಂಸಾರ ಜಂಜಾಟದಲ್ಲಿ ಹೆಣಗಾಡುತ್ತಿರುವಾಗ, ವಯಸ್ಸು ಮೀರುತ್ತಿದ್ದರೂ ಮದುವೆಯಾಗದೆ ಇವರಿಬ್ಬರು ಆರಾಮಾಗಿ ಇದ್ದಾರಲ್ಲ ಎಂಬ ಹೊಟ್ಟೆಕಿಚ್ಚು ಕೂಡ ಇದಕ್ಕೆ ಕಾರಣ ಇರಬಹುದು!
ಅದೇನೇ ಇದ್ದರೂ ಮಾಜಿ ಗೆಳೆಯರ ಒತ್ತಾಸೆ ಮೇರೆಗೆ ಅವರಿಬ್ಬರೂ ಕುನ್ನಬರುಕಾವು ದೇವಿ ದೇವಸ್ಥಾನದಲ್ಲಿ ಕುಟುಂಬದವರು ಮತ್ತು ಸ್ನೇಹಿತರ ಸಮ್ಮುಖದಲ್ಲಿ ಹಸೆಮಣೆ ಏರಿದ್ದಾರೆ. ಸುಮಾರು 250 ಮಂದಿ ಉಪಸ್ಥಿತರಿದ್ದರು. ಇದು ಅವರ ಸ್ನೇಹಿತರ ಬಳಗಕ್ಕೆ ಕನಸೊಂದು ನನಸಾದ ಸಂಭ್ರಮದ ಕ್ಷಣವಾಗಿತ್ತು.
“ಇದನ್ನು ನಿರೀಕ್ಷಿಸಿರಲಿಲ್ಲ. ನಾವು ಜತೆಯಾಗಿ ಓದಿದ್ದರಿಂದ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದೇವೆ. ಹೀಗಾಗಿ ಮದುವೆಯಾಗಲು ಒಪ್ಪಿಕೊಂಡಿದ್ದೆವು. ರಾಜಕೀಯ ಮತ್ತು ವೈಯಕ್ತಿಕ ಜೀವನ ಎರಡೂ ವಿಭಿನ್ನ. ಅವರೆಡನ್ನೂ ನಾನು ಬೆರೆಸುವುದಿಲ್ಲ” ಎಂದು ಸುಮತಿ ಹೇಳಿದ್ದಾರೆ.
“ನಾನು ಎಂದಿಗೂ ಮದುವೆ ಬಗ್ಗೆ ಆಲೋಚಿಸಿಯೇ ಇರಲಿಲ್ಲ. ಆದರೆ ಒಂಟಿಯಾಗಿ ಜೀವನ ನಡೆಸುತ್ತಿರುವುದರ ಬಗ್ಗೆ ನನಗೆ ಬೇಸರವಿತ್ತು. ಈಗ ಸ್ನೇಹಿತರು ಮತ್ತು ಕುಟುಂಬದವರ ಸಹಾಯದಿಂದ ಸಂಗಾತಿ ದೊರೆತಿದ್ದಾಳೆ” ಎಂದು ಹರಿದಾಸನ್ ಸಂತಸ ವ್ಯಕ್ತಪಡಿಸಿದ್ದಾರೆ. ಹರಿದಾಸನ್ ಬಲಪಂಥೀಯ ನಿಲುವು ಹೊಂದಿದ್ದರೆ, ಸುಮತಿ ಎಡಪಂಥೀಯ ಸಿದ್ಧಾಂತದಲ್ಲಿ ನಂಬಿಕೆ ಇರಿಸಿದವರಾಗಿದ್ದಾರೆ.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?