ಗುರುವಾರ, ಮೇ 9, 2024
ಕೋವಿಶೀಲ್ಡ್‌ ಅಡ್ಡ ಪರಿಣಾಮ ಬಹಿರಂಗ ಆದ ಬೆನ್ನಲ್ಲೇ ಉತ್ಪಾದನೆ ಸ್ಥಗಿತಗೊಂಡಿದೆ ಎಂದ ಕಂಪೆನಿ..!-ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಯಾಮ್ ಪಿತ್ರೋಡಾ ರಾಜೀನಾಮೆ..!-ಶಾಕಿಂಗ್ ನ್ಯೂಸ್; ಚಿಕನ್‌ ಶವರ್ಮಾ ತಿಂದು 19 ವರ್ಷದ ಯುವಕ ಸಾವು..!-ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!-ಮದುವೆ ಆಗಲ್ಲ, ಆದರೆ ರಾಜಕೀಯಕ್ಕೆ ಹೋಗುವ ಆಸೆ ಇದೆ; ಸೋನು ಶ್ರೀನಿವಾಸ್ ಗೌಡ-ಬೆಳ್ತಂಗಡಿ ಮಾಜಿ ಶಾಸಕ ಕೆ. ವಸಂತ ಬಂಗೇರ ನಿಧನ..!-ರೋಹಿಣಿ ಸಿಂಧೂರಿ ಮತ್ತು ರೂಪ ಮೌದ್ಗಿಲ್ ಗೆ ನ್ಯಾಯಾಲಯ ಮಹತ್ವದ ಸಲಹೆ ; ಏನದು?-ಕೋವಿಶೀಲ್ಡ್ ಲಸಿಕೆ ಹಿಂಪಡೆದ ತಯಾರಕ ಕಂಪನಿ ಆಸ್ಟ್ರಾಜೆನಿಕಾ..!-ಹೆಚ್ ಡಿ ರೇವಣ್ಣಗೆ ಮೇ 14 ರವರೆಗೆ ನ್ಯಾಯಾಂಗ ಬಂಧನ ಮುಂದೂಡಿಕೆ..!-ಮಂಗಳೂರು: 21 ವರ್ಷದ ಕಾಲೇಜು ವಿದ್ಯಾರ್ಥಿನಿ ನಾಪತ್ತೆ...!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಳ್ತಂಗಡಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿ ಆರಂಭವಾಗಿದೆ ಹೊಸ ರಾಜಕೀಯ ಸಮೀಕರಣಗಳು!!

Twitter
Facebook
LinkedIn
WhatsApp
ಬೆಳ್ತಂಗಡಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿಆರಂಭವಾಗಿದೆ ಹೊಸ ರಾಜಕೀಯ ಸಮೀಕರಣಗಳು!!

ಬೆಳ್ತಂಗಡಿ ಬಿಜೆಪಿ ಹಾಗೂ ಕಾಂಗ್ರೆಸ್ ನಲ್ಲಿ ಹೊಸ ರಾಜಕೀಯ ಸಮೀಕರಣಗಳು ಆರಂಭವಾಗಿದೆ. ಕಾರಣ ಬಹಳ ಕುತೂಹಲಕಾರಿಯಾಗಿದೆ.

ಕಾಂಗ್ರೆಸ್ ಯುವನಾಯಕ ರಕ್ಷಿತ್ ಶಿವರಾಂ ಯಾವಾಗ ಕಿಟ್ ವಿತರಣೆಗೆ ಬೆಳ್ತಂಗಡಿಗೆ ಕಾಲಿಟ್ಟರು ,ಆ ದಿನದಿಂದ ಹೊಸ ರಾಜಕೀಯ ಸಮೀಕರಣಗಳ ಆರಂಭವಾಗಿದೆ.

ಒಂದು ಹಂತದಲ್ಲಿ ವಸಂತ ಬಂಗೇರ ರಾಜಕೀಯ ನಿವೃತ್ತಿಯ ಅಂಚಿನಲ್ಲಿ ಇದ್ದರು ಎನ್ನುತ್ತದೆ ಮಾಹಿತಿಗಳು. ಆದರೆ ರಕ್ಷಿತ್ ಶಿವರಾಂ ವಸಂತ ಬಂಗೇರ ಅವರೊಂದಿಗೆ ಹಾಗೂ ಎಂಎಲ್ಸಿ ಹರೀಶ್ ಕುಮಾರ್ ಅವರೊಂದಿಗೆ ಸರಿಯಾಗಿ ಮಾತುಕತೆ ಮಾಡದೆ ನೇರ ವಾಗಿ ಅಖಾಡಕ್ಕೆ ಬಂದಿರುವುದು ಹರೀಶ್ ಕುಮಾರ್ ಮತ್ತು ವಸಂತ ಬಂಗೇರ ರಲ್ಲಿ ಹೊಸ ರಾಜಕೀಯ ಯೋಚನೆ ಬರುವಂತೆ ಮಾಡಿದೆ ಎನ್ನುತ್ತದೆ ವರದಿಗಳು.

ಬೆಳ್ತಂಗಡಿ ಬಿಜೆಪಿ ಹಾಗೂ ಕಾಂಗ್ರೆಸ್‌ನಲ್ಲಿಆರಂಭವಾಗಿದೆ ಹೊಸ ರಾಜಕೀಯ ಸಮೀಕರಣಗಳು!!

ಇನ್ನೊಂದು ಕಡೆ ಶಾಸಕ ನಾಗುವ ಆಸೆ ಇಟ್ಟುಕೊಂಡಿರುವ ರಂಜನ್ ಗೌಡ ಅವರ ಆಕಾಂಕ್ಷೆಗೆ ರಕ್ಷಿತ್ ಎಂಟ್ರಿ ತಡೆಯೊಡ್ಡಬಹುದು ಎಂದು ವಿಶ್ಲೇಷಿಸಲಾಗುತ್ತದೆ. ಈಗ ಈ ಮೂವರು ನಾಯಕರು ಒಂದಾಗುವ ಸನ್ನಿವೇಶಗಳು ಕಾಂಗ್ರೆಸ್ ನಲ್ಲಿ ನಿರ್ಮಾಣವಾಗಿದೆ ಎನ್ನುತ್ತದೆ ಆಂತರಿಕ ವರದಿಗಳು.

ಒಂದು ಹಂತದಲ್ಲಿ ಒಂಟಿಸಲಗ ನಂತೆ ಮುನ್ನುಗ್ಗುತ್ತಿದ್ದ ಶಾಸಕ ಹರೀಶ್ ಪೂ೦ಜ ಈಗ ಹೊಸ ರಾಜಕೀಯ ಸಮೀಕರಣಕ್ಕೆ ಹೆಜ್ಜೆ ಇಡಬೇಕಾದ ಅನಿವಾರ್ಯತೆಗೆ ಸಿಕ್ಕಿದ್ದಾರೆ. ಹರೀಶ್ ಪೂಂಜಾ ಹೊಸ ಜಾತಿ ಸಮೀಕರಣದ ಭಾಗದಲ್ಲಿ ಕೆಲಸ ಮಾಡುವ ಒತ್ತಡಕ್ಕೆ ಸಿಲುಕಿದ್ದಾರೆ ಎನ್ನುತ್ತದೆ ಆಂತರಿಕ ವರದಿಗಳು. ಇದರಿಂದ ಪ್ರಬಲ ಜಾತಿಯ ಹೊಸ ನಾಯಕರನ್ನು ಸಿದ್ಧಮಾಡಿಕೊಂಡು ಪಕ್ಷವನ್ನು ಸಂಘಟಿಸುವ ಅನಿವಾರ್ಯತೆಗೆ ಹರೀಶ್ ಪೂಂಜಾ ಬಂದಿದ್ದಾರೆ ಎನ್ನುತ್ತಾರೆ ರಾಜಕೀಯ ವಿಶ್ಲೇಷಕರು.

ಬಿಜೆಪಿ ಬೆಳ್ತಂಗಡಿಯಲ್ಲಿ ಪ್ರಬಲವಾಗಿದ್ದರೂ ಹೊಸ ಸಮೀಕರಣಗಳು ಹೊಸ ರಾಜಕೀಯ ದಿಕ್ಕನ್ನು ತೋರಿಸುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಇದನ್ನ ಅರ್ಥಮಾಡಿಕೊಂಡಿರುವ ಬಿಜೆಪಿ ತನ್ನ ತಂತ್ರವನ್ನು ಬದಲಾಯಿಸಿದರೂ ಆಶ್ಚರ್ಯ ಏನಿಲ್ಲ. ಕಾಂಗ್ರೆಸ್ ಒಳಜಗಳ ಹಾಗೂ ಗುಂಪುಗಾರಿಕೆ ಬಿಜೆಪಿಗೆ ಅನುಕೂಲವಾಗಬಹುದು ಎಂದು ಅನಿಸಿಕೆ ವ್ಯಕ್ತಪಡಿಸುತ್ತಾರೆ ರಾಜಕೀಯ ವಿಶ್ಲೇಷಕರು. ಬೆಳ್ತಂಗಡಿ ಹೊಸ ರಾಜಕೀಯ ಸಮೀಕರಣದ ಕಡೆಗೆ ಸಾಗುತ್ತಿದೆ. ಆದರೆ ಯಾರು ಯಾರೊಂದಿಗೆ ಸೇರಿ ಹೊಸ ರಾಜಕಾರಣ ಮಾಡುತ್ತಾರೆ ಎಂಬುದನ್ನು ಜನತೆ ಕುತೂಹಲದಿಂದ ಕಾದು ನೋಡುತ್ತಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..!

ಅನುಭವಿ ರಾಜಕಾರಣಿ ಕೆ.ವಸಂತ ಬಂಗೇರವರ ಬೆಳ್ತಂಗಡಿ ಕ್ಷೇತ್ರದಲ್ಲಿ ಸೋಲು ಗೆಲುವಿನ ರಾಜಕೀಯ ಪಯಣ ಹೇಗಿತ್ತು..! Twitter Facebook LinkedIn WhatsApp ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯಲ್ಲೇ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದ ಕಾಂಗ್ರೆಸ್ ಮುಖಂಡ,

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು