ಗುರುವಾರ, ಫೆಬ್ರವರಿ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ನಯನಾಡಿನ ಮಜಲು ಗದ್ದೆಯಲ್ಲಿ ನಡೆಯಿತು ಅದ್ದೂರಿ ಕೆಸರ್ಡೊಂಜಿ ದಿನ ಕಾರ್ಯಕ್ರಮ.

Twitter
Facebook
LinkedIn
WhatsApp

ನಯನಾಡಿನ ಶ್ರೀ ರಾಮ ಯುವಕ ಸಂಘದ ವತಿಯಿಂದ ದಿನಾಂಕ 14/11/2021 ರಂದು ನಯನಾಡಿನ ಮಜಲ್ ಗದ್ದೆಯಲ್ಲಿ ನಾಲ್ಕನೇ ವರ್ಷದ ಕೆಸರ್ ಡೊಂಜಿ ದಿನ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಿರಿ ಸುಂದರ ಪೂಜಾರಿ ವೇದಿಕೆಯಲ್ಲಿ ಯಂ. ತುಂಗಪ್ಪ ಬಂಗೇರರವರ ಅಧ್ಯಕ್ಷತೆಯಲ್ಲಿ , ಟಿ. ಹರೀಂದ್ರ ಪೈ ಶಶಾಂಕ್ ಕ್ಯಾಶ್ಯು ಫ್ಯಾಕ್ಟರಿ ಮಾಲಕರು ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಶ್ರೀಮತಿ ಸುಜಾತ ಉಮೇಶ್ ರ ಪ್ರಾರ್ಥನೆಯೊಂದೀಗೆ ಕಳಸೆಗೆ ಭತ್ತವನ್ನು ಹಾಕುವ ಮುಖೇನ ಸಭಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಸಂಘದ ಅಧ್ಯಕ್ಷ ಶೇಖರ ನಿನ್ನಿಕಲ್ಲು ಅತಿಥಿ ಅಭ್ಯಾಗತರನ್ನು ಸ್ವಾಗತಿಸಿದರು. ವೇದಿಕೆಯಲ್ಲಿದ್ದ ಅತಿಥಿಗಳಿಗೆ ಹಾಗೂ ಊರ ಬಂಧುಗಳಿಗೆ ಚಿತ್ರದುರ್ಗದ ಕೋಟೆಯಲ್ಲಿದ್ದ ಒನಕೆ ಓಬವ್ವ ಮೆಟ್ಟಿ ನಡೆದಾಡಿದ್ದ ನೆಲದ ಮಣ್ಣನ್ನು, ಉಳ್ಳಾಲದ ಅಬ್ಬಕ್ಕ ರಾಣಿಯು ನಡೆದಾಡಿದ ನೆಲದ ಮಣ್ಣನ್ನು ತಂದು ವೀರ ತಿಲಕವಾಗಿ ಕೊಡಲಾಯಿತು. ಕಾರ್ಯದರ್ಶಿ ರಾಘವೇಂದ್ರರು ವರದಿ ವಾಚನ ಮಾಡಿದರು.

ವೇದಿಕೆಯಲ್ಲಿ ಹರ್ಷಿಣಿ ಪುಷ್ಪಾನಂದ್, ಅಧ್ಯಕ್ಷರು ಪಿಲಾತಬೆಟ್ಟು ಗ್ರಾಮ ಪಂಚಾಯತ್, ಶ್ರೀ ಮತಿ ಅಮೃತಾ ಯಸ್. ಸೇವಾ ಪ್ರತಿನಿಧಿ ಧ. ಗ್ರಾ. ಯೋ. , ರಮೇಶ್ ಕುಡ್ಮೇರು, ಚಂದ್ರಶೇಖರ ಶೆಟ್ಟಿ, ಗೋಪಾಲ್ ಪೂಜಾರಿ, ಲಕ್ಷ್ಮಿನಾರಾಯಣ ಹೆಗ್ಡೆ ಉಪಾಧ್ಯಕ್ಷರು ಪಿಲಾತಬೆಟ್ಟು ಪಂಚಾಯತ್, ಜಾರಪ್ಪ ಪೂಜಾರಿ ಆಧ್ಯಕ್ಷರು ಶ್ರೀ ರಾಮ ಭಜನಾ ಮಂದಿರ, ಶಾರದಾ ಕೊಡೆಂಜಾರು, ಪಂಚಾಯತ್ ಸದಸ್ಯರು, ದಯಾನಂದ್ ನಿನ್ನಿಕಲ್ಲು, ಮೋಹನ ಹೆಗ್ಡೆ, ಯುವಕ ಸಂಘದ ಅಧ್ಯಕ್ಷರಾದ ಶೇಖರ ನಿನ್ನಿಕಲ್ಲು ಮುಂತಾದವರಿದ್ದರು. ವೇದಿಕೆಯಲ್ಲಿ ಊರಿನ ಏಳು ಮಂದಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಮಾಡಲಾಯಿತು. ಚಿನ್ನಯ ಹೆಗ್ಡೆ ನಿನ್ಯಾಲು, ಉಗ್ಗಪ್ಪ ಪೂಜಾರಿ ತಿಮರಡ್ಡ, ಅಣ್ಣು ಪೂಜಾರಿ ಮಿತ್ತಬೆಟ್ಟು, ಉಮೇಶ್ ಮೂಲ್ಯ ಕೊಡಂಗೆ, ಸುಧಾನಂದ ಶೆಣೈ, ಆಶಾ ಕಾರ್ಯಕರ್ತೆ ಪ್ರಮೀಳಾ ಮಿತ್ತಬೆಟ್ಟು, ಯುವ ಪ್ರತಿಭೆ ಯಶು ಸ್ನೇಹಗಿರಿ ರವರುಗಳನ್ನು ಗೌರವಿಸಲಾಯಿತು. ನಾಲ್ಕು ಬಡ ಕುಟುಂಬಗಳಿಗೆ ಆರ್ಥಿಕ ಸಹಾಯ ಧನ ನೀಡಲಾಯಿತು.

ಕೆಸರ್ ಗದ್ದೆಯಲ್ಲಿ ಪುಟಾಣಿ ಮಕ್ಕಳಿಂದ ಹಿಡಿದು ಹಿರಿಯರ ತನಕ ವಿವಿಧ ರೀತಿಯ ಕೆಸರ್ ಗದ್ದೆಯ ಆಟೋಟ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಬೆಳಗಿನ ಉಪಹಾರಕ್ಕೆ ಬೆಲ್ಲ ತೆಂಗಿನತುರಿ ಹಾಕಿದ ಕಡುಬು, ಬೇಂಗದ ಕಷಾಯ, ಮಧ್ಯಾಹ್ನ ದ ಊಟಕ್ಕೆ ಗಂಜಿ ಚಟ್ನಿ, ಬಾಳೆ ದಿಂಡಿನ ಪಲ್ಯ, ಪಾಯಸದ ಸವಿಯಿತ್ತು.
ಕೆಸರ್ದ ಕಂಡೊದ ಗೀತೆಯನ್ನು ಹಾಡಿದ ಯಶ್ವಂತ್ ಸ್ನೇಹಗಿರಿ, ರಾಘವ ಆಚಾರ್ಯ, ಅಶ್ವಿನಿ ರವಿ ಮಿತ್ತಬೆಟ್ಟುರವರನ್ನು ಗೌರವಿಸಲಾಯಿತು.
ಸಮಾರೋಪ ಸಮಾರಂಭದಲ್ಲಿ ಲಕ್ಷ್ಮೀನಾರಾಯಣ ಉಡುಪರು, ಪ್ರಕಾಶ್ ರಾವ್, ಸದಾಶಿವ ಹೆಗ್ಡೆ, ಸರೋಜಾ ಶೆಟ್ಟಿ, ಶಿಲ್ಪಾ ಐಶ್ವರ್ಯ ಪೈ, ಜಯಲಕ್ಷ್ಮಿ ಹೆಗ್ಡೆ, ವೆಂಕಪ್ಪ ಪೂಜಾರಿ, ಜಯರಾಂ ನಾಯ್ಯ್, ಕೀರ್ತೆಶ್ ಮೂರ್ಜೆ, ಚಂದ್ರ ಶೇಖರ ಹೆಗ್ಡೆ, ಯಕ್ಷಗಾನ ಕಲಾವಿದ ಶ್ರೀ ಸತೀಶ್ ಬಾಡಾರು , ಸಂಘದ ಕಾರ್ಯದರ್ಶಿ ರಾಘವೇಂದ್ರ ಮುಂತಾದವರಿದ್ದರು.

ಗದ್ದೆಯ ಮಾಲೀಕ ರಾದ ಶ್ರೀಮತಿ ಕಮಲಾ ಶೆಡ್ತಿ ಯವರನ್ನು ಗೌರವಿಸಿ, ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಬಹುಮಾನದ ಪಟ್ಟಿಯನ್ನು ಚಂದ್ರಶೇಖರ ಅಚ್ಚಿನಡ್ಕ, ಗಣೇಶ್ ಹೆಗ್ಡೆ ವಾಚಿಸಿದರು. ನಯನಾಡು ಶ್ರೀ ರಾಮ ಭಜನಾ ಮಂದಿರದಿಂದ ಹೊರಟ ಮೆರವಣಿಗೆಯಲ್ಲಿ ಚಿಣ್ಣರ ಬಗೆ ಬಗೆಯ ವೇಷಭೂಷಣದ ಜೊತೆಗೆ ಕಾಜಲ ವೆಂಕಪ್ಪ ಪೂಜಾರಿಯವರ ಕಂಬಳದ ಕೋಣಗಳು ಭಾಗವಹಿಸಿದ್ದವು. ಸಂಜೆ ರಾಷ್ಟ್ರ ಗೀತೆ ಯೊಂದೀಗೆ ಕಾರ್ಯಕ್ರಮಕ್ಕೆ ಮುಕ್ತಾಯ ಹಾಡಲಾಯಿತು.
ಶ್ರೀ ರಾಮ ಯುವಕ ಸಂಘದ ಜೊತೆಯಲ್ಲಿ ಕಾರ್ಯಕ್ರಮದ ಯಶ್ಸಸ್ವಿಗೆ ನಿವೇದಿತಾ ಮಾತೃಮಂಡಳಿ ಸದಸ್ಯರು, ಭಜನಾ ಮಂದಿರ ಸದಸ್ಯರು, ಊರ ಬಂಧುಗಳು ಸಹಕರಿಸಿದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು