ಸೋಮವಾರ, ಮೇ 6, 2024
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

15 ವರ್ಷದ ಹುಡುಗಿಯನ್ನು ಶೂಟ್‌ ಮಾಡಿ ಕೊಂದ 9 ವರ್ಷದ ಬಾಲಕ..!

Twitter
Facebook
LinkedIn
WhatsApp
 15 ವರ್ಷದ ಹುಡುಗಿಯನ್ನು ಶೂಟ್‌ ಮಾಡಿ ಕೊಂದ 9 ವರ್ಷದ ಬಾಲಕ..!

ಅಮೆರಿಕದಲ್ಲಿ ಜನಸಂಖ್ಯೆಗಿಂತ ಗನ್‌ಗಳನ್ನು ಹೊಂದಿದವರ ಸಂಖ್ಯೆಯೇ ಹೆಚ್ಚಿದೆಯಂತೆ. ಅಷ್ಟು ಸುಲಭವಾಗಿ ಅಲ್ಲಿ ಶಸ್ತಾಸ್ತ್ರ ದೊರೆಯುತ್ತದೆ. ಇದರಿಂದ ನಾನಾ ಪರಿಣಾಮಗಳಾಗುತ್ತಿದ್ದರೂ ಆ ದೇಶದ ಕಾನೂನು ಮಾತ್ರ ಬಿಗಿಯಾಗುತ್ತಿಲ್ಲ. ಅದೇ ರೀತಿ, 9 ವರ್ಷದ ಬಾಲಕ ಕೂಲ್‌ ಡ್ರಿಂಕ್ಸ್‌ ವಿಚಾರಕ್ಕೆ ನಡೆದ ಜಗಳದಲ್ಲಿ 15 ವರ್ಷದ ಬಾಲಕಿಯನ್ನು ಗನ್‌ನಿಂದ ಶೂಟ್‌ ಮಾಡಿ ಹತ್ಯೆ ಮಾಡಿದ್ದಾನೆ ಎಂದು ವರದಿಯಾಗಿದೆ.

ಗ್ಯಾಟೊರೇಡ್‌ (Gatorade) ಎಂಬ ಕೂಲ್‌ ಡ್ರಿಂಕ್ಸ್‌  ಬಾಟಲ್‌ ವಿಚಾರಕ್ಕೆ ನಡಡೆದ ಜಗಳದಲ್ಲಿ ತಮ್ಮ ಹದಿಹರೆಯ ಹುಡುಗಿಯನ್ನು 9 ವರ್ಷದ ಬಾಲಕ ಕೊಲೆ ಮಾಡಿದ್ದಾನೆ ಎಂದು ಹುಡುಗಿಯ ಕುಟುಂಬ ಹೇಳಿಕೊಂಡಿದೆ. ಗುಂಡೇಟಿನಿಂದ ಗಾಯಗಳೊಳಾಗಿ 15 ವರ್ಷದ ನೈಕಾಯ್ಲಾ ಸ್ಟ್ರಾಡರ್‌ ಮನೆಯ ಮುಂಭಾಗ ಬಿದ್ದಿದ್ದಳು ಎಂದು ಕುಟುಂಬ ತಿಳಿಸಿದೆ. ಆಕೆಯನ್ನು ಆಸ್ಪತ್ರೆಗೆ  ಕರೆದೊಯ್ದರೂ, ಚಿಕಿತ್ಸೆ ಫಲಕಾರಿಯಾಗದೆ ಅಲ್ಲಿ ಮೃತಪಟ್ಟಿದ್ದಾಳೆ ಎಂದು ತಿಳಿದುಬಂದಿದೆ. ಅಮೆರಿಕದ  ಪಶ್ಚಿಮ ಬಾಲ್ಟಿಮೋರ್‌ನ 600 ಲಿನ್ನಾರ್ಡ್‌ ಸ್ಟ್ರೀಟ್‌ನಲ್ಲಿ ಈ ಘಟನೆ ನಡೆದಿದೆ. 

ಆ ಗನ್‌ ಬಾಲಕನ ಕುಟುಂಬ ಸದಸ್ಯರ ಹೆಸರಲ್ಲಿ ನೋಂದಣಿಯಾಗಿದೆ ಎಂಬುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದ್ದು, ಅವರು ಸೆಕ್ಯೂರಿಟಿ ಗಾರ್ಡ್‌  ಆಗಿ ಕೆಲಸ ಮಾಡುತ್ತಿದ್ದರು ಎಂದೂ ಹೇಳಲಾಗಿದೆ. ಇನ್ನು, ಅಮೆರಿಕದ ಮೇರಿಲ್ಯಾಂಡ್‌ (Maryland) ಕಾನೂನಿನ ಪ್ರಕಾರ ಬಾಲಕನ ವಯಸ್ಸಿನ ಆಧಾರದಲ್ಲಿ ಆತನಿಗೆ ಯಾವ ಶಿಕ್ಷೆಯನ್ನೂ ನೀಡುವಂತಿಲ್ಲ ಎಂದು ತಿಳಿದುಬಂದಿದೆ. ಆದರೆ, ಬಾಲಕನ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವಂತೆ ನೈಕಾಯ್ಲಾ ಸಂಬಂಧಿಕರು ಅಧಿಕಾರಿಗಳಿಗೆ ಮನವಿ ಮಾಡಿದ್ದು, ತನ್ನ ಮಗಳನ್ನು ಗ್ಯಾಟೊರೇಡ್‌ (ಕೂಲ್‌ ಡ್ರಿಂಕ್ಸ್‌) ಬಾಟಲ್‌ ವಿಚಾರವಾಗಿ ಉದ್ದೇಶಪೂರ್ವಕವಾಗಿ ತನ್ನ ಮಗಳನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.

ನೈಕಾಯ್ಲಾಗೆ ಮಂಗಳವಾರ ಚರ್ಚ್‌ನಲ್ಲಿ ಅವರ ಕುಟುಂಬದವರು ಹಾಗೂ ಗೆಳೆಯರು ನಮನ ಸಲ್ಲಿಸಿದ್ದು, ಅವಳ ಸಾವಿನ ಬಗ್ಗೆ ತನಿಖೆ ನಡೆಸಲು ಒತ್ತಾಯಿಸಿದರು. ಇನ್ನು, ಘಟನೆ ಬಗ್ಗೆ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೆ ನೀಡಿದ ಹದಿಹರೆಯ ಹುಡುಗಿಯ ತಂದೆ, ನನ್ನ ಮಗಳು ಸತ್ತು ಬಿದ್ದಿದ್ದನ್ನು ನೋಡಲು ನನಗೆ ಹೇಗೆ ಅನಿಸುತ್ತದೆ ಎಂಬುದನ್ನು ನಾನು ನಿಮಗೆ ವಿವರಿಸಲು ಸಾಧ್ಯವಾಗಲಿಲ್ಲ ಎಂದು ಹೇಳಿಕೊಂಡಿದ್ದಾರೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!

ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ

ಬಂಟ್ವಾಳ:ನೇತ್ರಾವತಿ ನದಿಗೆ ಕಾಲು ಜಾರಿ ಬಿದ್ದ ಪಿಯುಸಿ ವಿದ್ಯಾರ್ಥಿ

ಅಂಕಣ