ಶನಿವಾರ, ಮೇ 18, 2024
ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹರೇಕಳದಲ್ಲಿ ಪಿಯುಸಿ ಆರಂಭಿಸಬೇಕು.. ಇದು ನನ್ನ ಮುಂದಿನ ಕನಸು – ಹಾಜಬ್ಬ

Twitter
Facebook
LinkedIn
WhatsApp
ಹರೇಕಳದಲ್ಲಿ ಪಿಯುಸಿ ಆರಂಭಿಸಬೇಕು.. ಇದು ನನ್ನ ಮುಂದಿನ ಕನಸು – ಹಾಜಬ್ಬ

ಮಂಗಳೂರು: ನಾನು ಒಬ್ಬ ಬಡ ಸಾಮಾನ್ಯ ಮನುಷ್ಯ. ನಾನು ಇಲ್ಲಿಗೆ ಬರುತ್ತೇನೆ ಎಂದು ಕನಸು ಮನಸ್ಸಿನಲ್ಲೂ ಯೋಚಿಸಿದವನಲ್ಲ. ರಾಷ್ಟ್ರಪತಿ ಪದ್ಮಶ್ರೀ ಪುರಸ್ಕಾರ ಕೊಟ್ಟರು, ಪ್ರಧಾನಿ ನರೇಂದ್ರ ಮೋದಿ ಕೈ ಕುಲುಕಿದರು ಎಂದು ಹರೇಕಳ ಹಾಜಬ್ಬ ಭಾವುಕರಾಗಿ ಹೇಳಿದ್ದಾರೆ.

ದಿಲ್ಲಿಯಲ್ಲಿ ನನಗೆ ರಾಷ್ಟ್ರಪತಿಯವರು ರಾಷ್ಟ್ರದ ನಾಲ್ಕನೇ ಅತೀ ದೊಡ್ಡ ಪದ್ಮಶ್ರೀ ಪುರಸ್ಕಾರವನ್ನು ಕೊಟ್ಟು ಗೌರವಿಸಿದರು. ಬಳಿಕ ಅಧಿಕಾರಿಗಳ ಬೆಂಗಾವಲಿನೊಂದಿಗೆ ಚಹಾ ಕೂಟಕ್ಕೆ ತೆರಳಿದೆ. ಅಲ್ಲಿ ರಾಷ್ಟ್ರಪತಿ ರಾಮನಾಥ ಕೋವಿಂದ್, ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡ, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ವಿತ್ತ ಸಚಿವೆ ನಿರ್ಮಲಾ ಸೀತಾರಾಮ್ ಇದ್ದರು ಎಂದು ತಮ್ಮ ಪುರಸ್ಕಾರ ಸ್ವೀಕಾರದ ಅನುಭವವನ್ನು ಹಾಜಬ್ಬ ಹಂಚಿಕೊಂಡರು.
ನಾನು ಪುರಸ್ಕೃತ ಸರದಿಯಲ್ಲಿ ಪ್ರಧಾನಿ ಮುಂದೆ ಹೋದಾಗ, ಪಕ್ಕದಲ್ಲಿ ಕುಳಿತವರ ಜತೆ ಸ್ವತಃ ಪ್ರಧಾನಿ ಮೋದಿಯವರೇ ನನ್ನನ್ನು ಕುರಿತು ಇವರು ಮಂಗಳೂರಿನಲ್ಲಿ ಆರೇಂಜ್ ಸೇಲ್ ಮಾಡಿ ಶಾಲೆ ಕಟ್ಟಿದವರು ಎಂದು ನನ್ನ ಕೈ ಹಿಡಿದು ಕುಲುಕಿದರು. ನಾನು ಒಂದು ಕ್ಷಣ ಮೂಕವಿಸ್ಮಿತನಾದೆ. ತಕ್ಷಣ ಸಾವರಿಸಿಕೊಂಡು, ನಾನು ಸಂಸದ ನಳಿನ್ ಕುಮಾರ್ ಕಟೀಲ್ ಅವರ ಕ್ಷೇತ್ರದವ ಎಂದು ಕನ್ನಡದಲ್ಲಿ ಹೇಳಿದೆ. ಅವರು ಅಚ್ಛಾ ಹೈ.. ಅಚ್ಛಾ ಹೈ.. ಎಂದು ಮುಗುಳ್ನಕ್ಕು ಅಭಿನಂದಿಸಿದರು. ನನ್ನ ಕೈಯಲ್ಲಿ ಬ್ಯಾಂಡೇಜ್ ಕೂಡಾ ಇದೆ. ಪ್ರಧಾನಿ ನನ್ನ ಕೈ ಹಿಡಿದರೆಂದರೆ ಇದು ನನ್ನ ಪಾಲಿನ ದೊಡ್ಡ ಭಾಗ್ಯ. ಅಲ್ಲಿಂದ ಅಮಿತ್ ಶಾ ಅವರಿಗೂ ಕೃತಜ್ಞತೆ ಸಲ್ಲಿಸಿದೆ. ಮುಂದೆ ನಿರ್ಮಲಾ ಸೀತಾರಾಮ್ ಅವರ ಬಳಿಗೆ ಬಂದೆ. ಅವರ ಬಳಿ ಜನರು ಇರಲಿಲ್ಲ. ಹಾಗಾಗಿ ನಾನು ಅವರ ಜತೆ ಸ್ವಲ್ಪ ಹೊತ್ತು ಮಾತನಾಡಲು ಅವಕಾಶ ಸಿಕ್ಕಿತು ಎಂದರು.

ನಾನು ನಳಿನ್ ಕುಮಾರ್ ಕಟೀಲ್ ಅವರ ಕ್ಷೇತ್ರದವ ಎಂದು ಪರಿಚಯಿಸಿದಾಗ, ನಾನು ಕೂಡಾ ಕರ್ನಾಟಕದಿಂದ ಆಯ್ಕೆಯಾದವಳು ಎಂದು ನಿರ್ಮಲಾ ಹೇಳಿ, ಅಭಿನಂದಿಸಿದರು. ನಾನೊಬ್ಬ ಬಡವನಾಗಿ ನಿಮ್ಮಲ್ಲಿ ಒಂದು ಬೇಡಿಕೆ ಇಡುತ್ತಿದ್ದೇನೆ. ನೀವು ನನ್ನ ಮನವಿ ಸ್ವೀಕರಿಸಬೇಕು ಎಂದು ಹೇಳಿದೆ. ಹೇಳಿ, ಏನಾಗಬೇಕು ಎಂದಾಗ, ನನ್ನ ಊರಿನ ಬಡ ಮಕ್ಕಳಿಗೆ ಸರಕಾರಿ ಶಾಲೆ ಆಗಿದೆ. ಈಗ ಪದವಿಪೂರ್ವ ಕಾಲೇಜು ಬೇಕು. ಅದಕ್ಕಾಗಿ ಕೇಂದ್ರ ಸರಕಾರದಿಂದ ನೀವು ಒಂದು ಕೋಟಿ ರೂ. ಅನುದಾನ ಕೊಡಿಸಬೇಕು ಎಂದು ಬಾಯಿ ಬಿಟ್ಟು ಕೇಳಿದೆ. ಅದಕ್ಕವರು ಸಂಬಂಧ ಪಟ್ಟವರ ಜತೆ ಮಾತನಾಡುತ್ತೇನೆ ಎಂದರು. ಹರೇಕಳದ 1.33 ಎಕರೆ ಜಾಗದಲ್ಲಿ ಪಿಯುಸಿ ಆರಂಭಿಸಬೇಕು ಎಂಬುದು ನನ್ನ ಮುಂದಿನ ಕನಸು ಎಂದು ಹೇಳಿದರು.

ಸಂಸದರು, ಸಚಿವ ಕೋಟ ಶ್ರೀನಿವಾಸ ಪೂಜಾರಿ, ನನ್ನ ಕ್ಷೇತ್ರದ ಶಾಸಕ ಯು.ಟಿ.ಖಾದರ್, ನನ್ನನ್ನು ನಾಡಿಗೆ ಗುರುತಿಸಿದ ಮಾಧ್ಯಮ ಮಿತ್ರರು, ನನ್ನ ಶಾಲೆಗೆ ಸಹಕಾರ ಕೊಟ್ಟ ಎಲ್ಲರಿಗೂ ನಾನು ಚಿರ ಋಣಿ. ದಿಲ್ಲಿಯಲ್ಲಿ ವಸಂತ ಶೆಟ್ಟಿ ಬೆಳ್ಳಾರೆ ಸೇರಿದಂತೆ ಎಲ್ಲರೂ ಸಹಕಾರ ಕೊಡುತ್ತಿದ್ದಾರೆ. ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಪರವಾಗಿ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ನನ್ನ ಸಾಧನೆ ಏನೂ ಇಲ್ಲ. ಎಲ್ಲವೂ ನಿಮ್ಮದೇ ಎಂದು ಹೇಳಿದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು