ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.!
ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನೆಟ್ಟಿಬೈಲು ನಿವಾಸಿ ವಿನಾಯಕ ಭಟ್ (32) ಅವರು ತೀವ್ರ ಜ್ವರ ಬಾಧೆಯಿಂದ ಮೃತಪಟ್ಟಿದ್ದಾರೆ. ಅವರು ಸುಮಾರು ಹತ್ತು
ನಾಗಮಂಗಲ: ಕೆಆರ್ಎಸ್ ಅಣೆಕಟ್ಟೆ ಬಿರುಕು ಬಿಟ್ಟಿದೆ ಎಂದು ಸುಳ್ಳು ಹೇಳಿ ವಿವಾದ ಸೃಷ್ಟಿಸಿರುವ ಸಂಸದೆ ಸುಮಲತಾ ವಿರುದ್ಧ ಸರ್ಕಾರ ಇಷ್ಟೊತ್ತಿಗೆ ಕ್ರಮಕೈಗೊಳ್ಳಬೇಕಿತ್ತು ಎಂದು ಶಾಸಕ ಸುರೇಶ್ ಗೌಡ ಹೇಳಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣೆಕಟ್ಟೆ ಬಿರುಕು ಬಿಡುತ್ತಿದೆ ಎನ್ನುವುದು ತಮಾಷೆ ಮಾತಲ್ಲ. ಅದು ಬಿರುಕು ಬಿಟ್ಟರೆ ಜನ ಉಳಿಯಲು ಸಾಧ್ಯವೆ? ಈ ಹೇಳಿಕೆ ನಿಜಕ್ಕೂ ಘೋರ ಅಪರಾಧ. ಸಂಸದರ ವಿರುದ್ಧ ಸರ್ಕಾರ ಈವರೆಗೂ ಯಾಕೆ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.
ನೀರಾವರಿ ಇಲಾಖೆ, ಸರ್ಕಾರ ಬಿರುಕು ಬಿಟ್ಟಿಲ್ಲಾ ಎಂದು ಸ್ಪಷ್ಟನೆ ನೀಡಿದೆ. ಇವರು ಮಾತ್ರ ಬಿರುಕು ಬಿಟ್ಟಿದೆ ಎನ್ನುತ್ತಿದ್ದಾರೆ. ಎಲ್ಲೋ ಸಂಸದರು ಕನಸು ಕಾಣುತ್ತಿರಬೇಕು. ಯಾವುದೋ ಸಿನಿಮಾದಲ್ಲಿ ನೋಡಿ, ಮುಂದೆ ಬಿರುಕು ಬಿಡಬಹುದು ಅಂತಾ ಕನಸು ಕಂಡಿರಬೇಕು ಎಂದು ವ್ಯಂಗ್ಯವಾಡಿದರು.
ಒಬ್ಬ ಜನ ಸಾಮಾನ್ಯ ಕೆಆರ್ಎಸ್ ಅಣೆಕಟ್ಟೆ ಹೊಡೆದಿದೆ ಎಂದು ಹೇಳಿದ್ದರೆ ಸುಮ್ಮನೆ ಬಿಡುತ್ತಿದ್ದರಾ? ಮೊದಲು ಜೈಲಿಗೆ ಹಾಕುತ್ತಿದ್ದರು. ಆದರೆ, ಸಂಸದರ ವಿಚಾರದಲ್ಲಿ ಯಾಕೆ ತಾರತಮ್ಯ? ಒಬ್ಬ ಸಾಮಾನ್ಯ ಈ ರೀತಿ ಹೇಳಿದ್ದರೆ ಸರ್ಕಾರ ಕೂಡಲೇ ಆತನ ವಿರುದ್ಧ ಕ್ರಮಕೈಗೊಳ್ಳುತ್ತಿತ್ತು ಎಂದು ಅವರು ಹೇಳಿದ್ದಾರೆ.
ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನೆಟ್ಟಿಬೈಲು ನಿವಾಸಿ ವಿನಾಯಕ ಭಟ್ (32) ಅವರು ತೀವ್ರ ಜ್ವರ ಬಾಧೆಯಿಂದ ಮೃತಪಟ್ಟಿದ್ದಾರೆ. ಅವರು ಸುಮಾರು ಹತ್ತು
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?