ಮಂಗಳವಾರ, ಮೇ 14, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸಂಚಾರಿ ವಿಜಯ್ ಸಿನಿಮಾ ಅಂತ್ಯವಲ್ಲ ಆರಂಭ ಜನವರಿಯಲ್ಲಿ ತೆರೆಗೆ

Twitter
Facebook
LinkedIn
WhatsApp
ಬಿಗ್​ಬಾಸ್​ ತೆಲುಗು ಸೀಸನ್​ 5 ವಿನ್ನರ್​ ಆಗಿ ಸನ್ನಿ ಘೋಷಣೆ

ಬೆಂಗಳೂರು : ಅಳಿವುದು ಕಾಯ ಉಳಿವುದು ಕೀರ್ತಿ ಎಂಬಂತೆ ವ್ಯಕ್ತಿ ಅಳಿದರೂ, ಮಡಿದರೂ ಆತನ ಕೆಲಸ ಎಲ್ಲರಿಂದಲೂ ಸ್ಮರಿಸಲ್ಪಡುತ್ತದೆ. ಅದರಲ್ಲೂ ಕಲಾವಿದರಿಗಂತೂ ಸಾವೇ ಇಲ್ಲ ಎನ್ನುವ ಮಾತಿದೆ. ಇಂಥ ಸಾಲಿಗೆ ಸೇರುವ ಕಲಾವಿದ ಕನ್ನಡದ ಪ್ರತಿಭಾನ್ವಿತ ಯುವ ನಟ ಸಂಚಾರಿ ವಿಜಯ್ (Sanchari Vijay). ಹಲವು ವಿಭಿನ್ನ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಭರವಸೆ ಮೂಡಿಸಿದ್ದ ನಾಯಕ ನಟ ಸಂಚಾರಿ ವಿಜಯ್ ತಮ್ಮ ಮೊದಲ ಚಿತ್ರದಲ್ಲೇ ರಾಷ್ಟ್ರ ಪ್ರಶಸ್ತಿ ಪಡೆದುಕೊಂಡ ನಟ. ಬಾಳಿ ಬದುಕ ಬೇಕಿದ್ದ ಕಾಲದಲ್ಲೇ, ಒಂದಾದ ಮೇಲೊಂದು ಸಿನಿಮಾ ಶೂಟಿಂಗ್ ಬಾಕಿ ಇರುವಾಗಲೇ ರಸ್ತೆ ಅಪಘಾತ ಸ್ಯಾಂಡಲ್ ವುಡ್ ನ ಭರವಸೆಯ ಯುವ ನಾಯಕನನ್ನು ಬಲಿತೆಗೆದುಕೊಂಡಿತು.

ಸಂಚಾರಿ ವಿಜಯ್ ನಿಧನದ ವೇಳೆಗೆ ಅವರ ಹಲವು ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದರೇ ಒನ್ನು ಕೆಲ ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದವು. ಆದರೆ ಎಲ್ಲವನ್ನು ಅರ್ಧದಲ್ಲಿಯೇ ಬಿಟ್ಟು ನಟ ಸಂಚಾರಿ ವಿಜಯ್ ನಿಶದ್ಧವಾಗಿ ಹೋಗಿದ್ದರು. ಈಗ ಅವರ ನಟನೆಯ ಕೊನೆಯ ಚಿತ್ರ ಅಂತ್ಯವಲ್ಲ ಆರಂಭ ಗಣರಾಜ್ಯೋತ್ಸವ ದಂದು ರಿಲೀಸ್ ಆಗಲಿದೆ. ಈ ವಿಚಾರವನ್ನು ಸಂಚಾರಿ ವಿಜಯ್ ಸ್ನೇಹಿತ ಹಾಗೂ ಸಿನಿಮಾದ ನಿರ್ದೇಶಕ ಡಾ.ಎನ್.ಬಿ.ಜಯಪ್ರಕಾಶ್ ಹೇಳಿದ್ದಾರೆ.

ಮೊದಲ ಬಾರಿಗೆ ಕನ್ನಡ ಸಿನಿಮಾವೊಂದು ಆನ್ ಲೈನ್ ನಲ್ಲೇ ತೆರೆ ಕಾಣಲಿದೆ.ಮನೆಯಲ್ಲೇ ಎಲ್ಲರೂ ಕುಳಿತು ನೋಡಬಹುದಾದ ಈ ಚಿತ್ರ ಸೆಲ್ಪ್ ಕಾನ್ಸಿಡೆನ್ಸ್ ಹೆಚ್ಚಿಸುವ ಕಥಾವಸ್ತು ಒಳಗೊಂಡಿದೆ ಎಂದು ಅವರು ವಿವರಣೆ ನೀಡಿದ್ದಾರೆ‌. ಆನ್ ಲೈನ್ ನಲ್ಲಿ ಸಿನಿಮಾ ವೀಕ್ಷಣೆ ಬುಕ್ ಮಾಡಿಕೊಂಡ್ರೇ ಪಾಸ್ ವರ್ಡ್ ನೀಡಲಾಗುತ್ತದೆ. ಇದನ್ನು ಬಳಸಿ ಎಲ್ಲರೂ ಮನೆಯಲ್ಲೇ ಕುಳಿತು ಸಿನಿಮಾ ನೋಡಲು ಅವಕಾಶ ಸಿಗಲಿದೆ.
ಕ್ಲೌಡ್ ಫಂಡಿಂಗ್ ಮೂಲಕ ನಿರ್ಮಿಸಲಾಗಿರುವ ಈ ಸಿನಿಮಾದ ವೀಕ್ಷಣೆ ಮಾಡುವಂತೆ ನಿರ್ದೇಶಕರು ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಈ ಸಿನಿಮಾ ಪ್ರದರ್ಶನ ದಿಂದ ಸಂಗ್ರಹವಾಗುವ ಹಣವನ್ನು ವಿಧವೆಯರ ಪುನಶ್ವೇತನಕ್ಕೆ ಬಳಸಲು ಚಿತ್ರತಂಡ ನಿರ್ಧರಿಸಿದೆ. ಸಂಚಾರಿ ವಿಜಯ್ ಕೊನೆಯಾಸೆ ಅಂತೆಯೇ ವಿಧವೆಯರ ಬದುಕಿಗಾಗಿ ಈ ಹಣವನ್ನು ಬಳಸಲು ಚಿತ್ರತಂಡ ನಿರ್ಧರಿಸಿದೆ ಎಂಬ ಮಾಹಿತಿಯನ್ನು ನಿರ್ದೇಶಕರು ಮಾಧ್ಯಮಗಳ ಜೊತೆ ಶೇರ್ ಮಾಡಿದ್ದಾರೆ.
ಜನವರಿ ೨೬ ರಂದು ತೆರೆಗೆ ಬರಲಿರೋ ಸಿನಿಮಾವನ್ನು ನೋಡಲು ಸಂಚಾರಿ ವಿಜಯ್ ಅಭಿಮಾನಿಗಳು ಕಾತರರಾಗಿ ಕಾಯ್ತಿದ್ದಾರೆ. 1983 ರಲ್ಲಿ ಜನಿಸಿದ್ದ ಸಂಚಾರಿ ವಿಜಯ್ ತಮ್ಮ ಕಲಾಬದುಕಿನಲ್ಲಿ ಯಶಸ್ಸು ಪಡೆಯುತ್ತಿರುವಾಗಲೇ ಜೂನ್ 15, 2021 ರಸ್ತೆ ಅಪಘಾತದಲ್ಲಿ ಗಾಯಗೊಂಡು ಚಿಕಿತ್ಸೆ ಫಲಕಾರಿಯಾಗದೇ ನಗರದ ಅಪೋಲೋ ಹಾಸ್ಪಿಟಲ್ ನಲ್ಲಿ ನಿಧನರಾದರು.‌

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

100 ಶೇಕಡ ಫಲಿತಾಂಶ - ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು

ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು Twitter Facebook LinkedIn WhatsApp ಬಂಟ್ವಾಳ: ಪಿಲಾತ್ತಬೆಟ್ಟು ಗ್ರಾಮದ ಅತ್ಯಂತ ಗ್ರಾಮೀಣ ಭಾಗದ ಆದರೆ ಪಕೃತಿ ರಮಣೀಯ ಪರಿಸರದಲ್ಲಿರುವ ಸರಕಾರಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು