ಸಾಗರ್ (ಮಧ್ಯ ಪ್ರದೇಶ): ಮಧ್ಯ ಪ್ರದೇಶ ರಾಜ್ಯದ ಸಾಗರ್ ಜಿಲ್ಲೆಯಲ್ಲಿ ಒಂದು ಶಾಕಿಂಗ್ ಘಟನೆ ನಡೆದಿದೆ. ಸಂಬಂಧಿ ಯುವತಿಯೊಬ್ಬಳ ಸಾವಿನಿಂದ ಮನನೊಂದ ಯುವಕ, ಆಕೆಯ ಚಿತೆಯ ಮೇಲೆ ಹಾರಿ ಪ್ರಾಣ ಬಿಟ್ಟಿದ್ಧಾನೆ..!
ಯುವಕನ ಹತ್ತಿರದ ಸಂಬಂಧಿಯಾಗಿದ್ದ ಯುವತಿಯ ಸಾವಿನಿಂದ ಯುವಕ ತುಂಬಾನೇ ಬೇಸರಗೊಂಡಿದ್ದ ಎಂದು ತಿಳಿದು ಬಂದಿದೆ. ಆತ ಚಿತೆಗೆ ಹಾರುವ ಮುನ್ನ ಅದಕ್ಕೆ ನಮಸ್ಕರಿಸುತ್ತಿದ್ದ ಎಂದು ಕೆಲವು ಪ್ರತ್ಯಕ್ಷದರ್ಶಿಗಳು ಹೇಳಿದ್ಧಾರೆ.
ಮಧ್ಯ ಪ್ರದೇಶ ರಾಜ್ಯದ ಸಾಗರ್ ಜಿಲ್ಲೆಯ ಮಜಗಾವ್ ಎಂಬ ಗ್ರಾಮದ ಯುವತಿ ಜ್ಯೋತಿ ದಾಗಾ ಅವರು ಬಾವಿಯೊಂದರ ಪಕ್ಕ ನಡೆದುಕೊಂಡು ಹೋಗುವಾಗ ಅಚಾನಕ್ಕಾಗಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದರು. ಇದರಿಂದ ಯುವಕ ತೀವ್ರ ಆಘಾತಕ್ಕೆ ಒಳಗಾಗಿದ್ದ. ಯುವತಿಯ ಸಂಬಂಧಿಕರು ಆಕೆಯ ಅಂತ್ಯಕ್ರಿಯೆ ನೆರವೇರಿಸಿ ಚಿತೆಗೆ ಬೆಂಕಿ ಇಟ್ಟ ಬಳಿಕ ತಮ್ಮ ಮನೆಗಳಿಗೆ ವಾಪಸ್ ಹೋಗುತ್ತಿದ್ದರು. ಆದರೆ, ಯುವತಿಯ ಸಂಬಂಧಿ ಯುವಕ ಕರಣ್ ಮಾತ್ರ ಸ್ಮಶಾನದಲ್ಲೇ ಇದ್ದ. ಹೊತ್ತಿ ಉರಿಯುತ್ತಿದ್ದ ಚಿತೆಯ ಬಳಿಯಲ್ಲೇ ನಿಂತಿದ್ದ.
ಗ್ರಾಮಸ್ಥರೂ ಕೂಡಾ ಆತ ಚಿತೆಯ ಬಳಿ ನಿಂತಿದ್ದನ್ನು ಗಮನಿಸಿದರು. ನೋವಿನಲ್ಲಿ ಇರಬಹುದು ಎಂದು ಭಾವಿಸಿದ್ದರು. ಆದರೆ, 21 ವರ್ಷ ವಯಸ್ಸಿನ ಯುವಕ ನೋಡ ನೋಡುತ್ತಲೇ ಚಿತೆಗೆ ಹಾರಿಬಿಟ್ಟ. ಈ ವಿಚಾರ ತಿಳಿದ ಕುಟುಂಬಸ್ಥರು ಸ್ಥಳಕ್ಕ ಧಾವಿಸುವಷ್ಟರಲ್ಲಿ ತುಂಬಾನೇ ತಡವಾಗಿತ್ತು. ಸಾಕಷ್ಟು ಸುಟ್ಟ ಗಾಯಗಳಿಂದ ನರಳುತ್ತಿದ್ದ ಯುವಕ, ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲೇ ಸಾವನ್ನಪ್ಪಿದ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಮಜಗಾವ್ ಗ್ರಾಮದ ಸರಪಂಚ್ ಭರತ್ ಸಿಂಗ್ ಘೋಸಿ ಅವರು ನೀಡಿದ ದೂರಿನ ಮೇರೆಗೆ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಸದ್ಯ ಈ ಪ್ರಕರಣದ ಕುರಿತ ವಿಚಾರಣೆ ನಡೆಯುತ್ತಿದೆ. ತನಿಖೆ ಸಂಪೂರ್ಣ ಆದ ಬಳಿಕ ಸಮಗ್ರ ಮಾಹಿತಿ ನೀಡೋದಾಗಿ ಇಲ್ಲಿನ ಸ್ಥಳೀಯ ಬಹೇರಿಯಾ ಪೊಲೀಸ್ ಠಾಣೆಯ ಮುಖ್ಯಸ್ಥ ದಿವ್ಯ ಪ್ರಕಾಶ್ ತ್ರಿಪಾಠಿ ತಿಳಿಸಿದ್ದಾರೆ.
ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.! Twitter Facebook LinkedIn WhatsApp ಬಂಟ್ವಾಳ: ಬಿ.ಸಿ.ರೋಡ್ ನೇತ್ರಾವತಿ ಸೇತುವೆಯ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ
ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನೆಟ್ಟಿಬೈಲು ನಿವಾಸಿ ವಿನಾಯಕ ಭಟ್ (32) ಅವರು ತೀವ್ರ ಜ್ವರ ಬಾಧೆಯಿಂದ ಮೃತಪಟ್ಟಿದ್ದಾರೆ. ಅವರು ಸುಮಾರು ಹತ್ತು
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?