ನವದೆಹಲಿ (ಡಿ. 10): ಹಿರಿಯ ನಟಿ ಬಹು ವರ್ಷಗಳ ಕಾಲ ಟಿವಿ ಧಾರವಾಹಿಗಳ ಮೂಲಕ ಜನರನ್ನು ರಂಜಿಸಿದ್ದ ವೀಣಾ ಕಪೂರ್ ಹತ್ಯೆಯಾಗಿದೆ. ಮುಂಬೈನಲ್ಲಿ ಆಸ್ತ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸ್ವತಃ ಪುತ್ರನೇ ವೀಣಾ ಕಪೂರ್ ಅವರನ್ನು ದಾರುಣವಾಗಿ ಕೊಲೆ ಮಾಡಿದ ಘಟನೆ ನಡೆದಿದೆ. ವಿಲೆ ಪಾರ್ಲೆ ಪ್ರದೇಶದಲ್ಲಿ ಈ ಬರ್ಬರ ಕೃತ್ಯ ವರದಿಯಾಗಿದ್ದು, ಆಸ್ತಿ ವಿವಾದದ ವಿಚಾರವಾಗಿ ಸಿಟ್ಟಾಗಿದ್ದ ಆಕೆಯ ಪುತ್ರ, ಬೇಸ್ಬಾಲ್ ಬ್ಯಾಟ್ನಿಂದ ಆಕೆಯ ತಲೆಗೆ ಹೊಡೆದು ಸಾಯಿಸಿದ್ದಾರೆ. ಬಳಿಕ ಆಕೆಯ ಶವವನ್ನು ಸಮೀಪದ ನದಿಯಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜುಹು ಪೊಲೀಸ್ ಈಗಾಗಲೇ ಆರೋಪಿಯಾಗಿರುವ ಪುತ್ರ 43 ವರ್ಷದ ಸಚಿನ್ ಕಪೂರ್ರನ್ನು ಬಂಧಿಸಿದ್ದಾರೆ. ಅದರೊಂದಿಗೆ ಮನೆಯ ಕೆಲಸಗಾರನಾಗಿದ್ದ 25 ವರ್ಷದ ಚೋಟು ಅಲಿಯಾಸ್ ಲಾಲುಕುಮಾರ್ ಮಂಡಲ್ನಲ್ಲಿ ಬಂಧನ ಮಾಡಿದ್ದಾರೆ. ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ, ಕಲ್ಪತರು ಸೊಸೈಟಿಯ ಭದ್ರತಾ ಮೇಲ್ವಿಚಾರಕರು ಜುಹು ಪೊಲೀಸರನ್ನು ಸಂಪರ್ಕಿಸಿ, ವೃದ್ಧೆ ವೀಣಾ ಕಪೂರ್ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದರು.
ದೂರಿನ ಆಧಾರದ ಮೇಲೆ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು, ಮೃತ ವೀಣಾ ಕಪೂರ್ ಅವರ ಮೊಬೈಲ್ ಸ್ಥಳವು ಅವರ ಕಟ್ಟಡದ ಬಳಿ ದೊರೆತಿದ್ದರೆ, ಅವರ ಮಗನ ಸ್ಥಳ ಪನ್ವೇಲ್ನಲ್ಲಿ ದಾಖಲಾಗಿತ್ತು. ಮರುದಿನ ಪೊಲೀಸರು ಸಚಿನ್ ಕಪೂರ್ ಮತ್ತು ಆತನ ಸೇವಕನನ್ನು ಠಾಣೆಗೆ ಕರೆಸಿ ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.
ವಿಚಾರಣೆ ವೇಳೆ ಆರೋಪಿ ಸಚಿನ್ ಕಪೂರ್ ತನ್ನ ತಾಯಿಯ ತಲೆಗೆ ಬೇಸ್ಬಾಲ್ ಬ್ಯಾಟ್ನಿಂದ ಹಲವು ಬಾರಿ ಹೊಡೆದಿದ್ದಾಗಿ ಹೇಳಿದ್ದಾನೆ. ಆ ಕ್ಷಣದಲ್ಲಿ ಬಂದ ಕೋಪದಿಂದ ನಾನು ತಾಯಿಯನ್ನು ಕೊಂದಿದ್ದಾಗಿ ಬಹಿರಂಗಪಡಿಸಿದ್ದಾರೆ. ತನ್ನ ಹಾಗೂ ತಾಯಿಯ ನಡುವೆ ಆಸ್ತಿಯ ವಿಚಾರವಾಗಿ ಯಾವಾಗಲೂ ಗಲಾಟೆ ನಡೆಯುತ್ತಿತ್ತು ಎಂದು ಆತ ತಿಳಿಸಿದ್ದು, ಆಕೆ ಸಾವು ಕಂಡ ಬಳಿಕ ಶವವನ್ನು ರಾಯಗಢ್ ಜಿಲ್ಲೆಯಲ್ಲಿ ನದಿಯಲ್ಲಿ ಎಸೆದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.
ಮಹಿಳೆಯ ಹಿರಿಯ ಮಗ ಅಮೆರಿಕದಲ್ಲಿ ನೆಲೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302,201 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?