ಶುಕ್ರವಾರ, ಮೇ 3, 2024
ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಚುನಾವಣೆ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತದೆ ; ಸಿ.ಟಿ ರವಿ-ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.!-ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಏಸುರಾಜ್ ಕ್ರಿಶ್ಚಿಯನ್ ಎಂಬ ಆರೋಪ ಸುಳ್ಳು; ರಾಮಲಿಂಗಾ ರೆಡ್ಡಿ-ರಾಮಲಿಂಗೇಶ್ವರ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾವು ಸಂವಿಧಾನ ಬದಲಾವಣೆ ಮಾಡುವುದಿಲ್ಲ; ಬಿಜೆಪಿ ಶಾಸಕ ಶಿವರಾಜ್​ ಪಾಟೀಲ್-ಅಮೇಠಿ ಬದಲು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ನಾನಿನ್ನು ಬದುಕಿದ್ದೀನಿ, ನೋಡ್ತೀನಿ, ಹೋರಾಟ ಮಾಡ್ತೀನಿ: ಹೆಚ್​.ಡಿ.ದೇವೇಗೌಡ

Twitter
Facebook
LinkedIn
WhatsApp
ನಾನಿನ್ನು ಬದುಕಿದ್ದೀನಿ, ನೋಡ್ತೀನಿ, ಹೋರಾಟ ಮಾಡ್ತೀನಿ: ಹೆಚ್​.ಡಿ.ದೇವೇಗೌಡ

ತುಮಕೂರು: ನನಗೆ ಕಾಲು ನೋವು ಇದೆ ಅಂತ ಪ್ರಧಾನಮಂತ್ರಿಗಳೇ ಕರೆದುಕೊಂಡು ಹೋಗುತ್ತಾರೆ. ಇಂತಹ ಗೌರವವನ್ನ ಸಂಪಾದನೆ ಮಾಡೋ ಯೋಗ್ಯತೆ ಅವರಿಗೆ ಇದೆಯಾ ಎಂದು ವಿರೋಧ ಪಕ್ಷದ ನಾಯಕರ ವಿರುದ್ಧ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡರು ಕಿಡಿಕಾರಿದ್ದಾರೆ.
ಹೇರೂರಿನಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಹೆಚ್​ಡಿಡಿ, ನಮ್ಮ ಸಮಾಜವನ್ನ‌ ಒಡೆದು, ನಮ್ಮ ಶಕ್ತಿಯನ್ನ‌ ನಾಶ ಮಾಡಲಿಕ್ಕೆ‌ ಹೊರಟಿದ್ದಾರೆ. ನಾನು‌ ಜೀವಂತವಾಗಿರುವವರೆಗೂ ಅದು ಆಗಬಾರದು. ನನ್ನ‌ ಸಮಾಜ ಒಡೆಯುತ್ತಿರೋದಕ್ಕೆ ನೋವಿದೆ. ಬೇರೆಯವರ ಉದ್ದಾರಕ್ಕೆ ನಮ್ಮ ಶಕ್ತಿ ಹಾಕುತ್ತಿದ್ದೇವೆ. ಸಾಮಾನ್ಯವಾದ ಬುಡುಬುಡುಕೆ, ದೊಂಬಿದಾಸನೂ ಸಹ ಜಿ.ಪಂ. ಸದಸ್ಯನಾಗಿದ್ದಾನೆ. ಎಲ್ಲಾ ಸಮಾಜಕ್ಕೂ ನಾನು ಶಕ್ತಿ ತುಂಬಿದೆ. ಒಬ್ಬ ರೈತನ ಮಗ 15 ಸ್ಥಾನ‌ ಗೆದ್ದಿದ್ದಾನೆ ಅಂದರೆ ಅದು ಜನರಿಂದಲೇ.

ನಿಮ್ಮ‌ ಮುಂದೆ ಮತ್ತೆ ಬಂದು ಅನಿಲ್​ನ ನಿಲ್ಲಿಸಿದ್ದೇನೆ. ಅವನನ್ನ‌ ಸೋಲಿಸಲುn ಏನೇನೂ ಷಡ್ಯಂತ್ರ ನಡೆಯುತ್ತಿದೆ, ನಿಮಗೆಲ್ಲಾ ಗೊತ್ತಿದೆ. ಇಲ್ಲಿಗೆ ಬಿಡಲ್ಲ. ದೇವೇಗೌಡ ಮಂಡಿನೋವು ಅಂತ ಸುಮ್ಮನೇ ಕೂರಲ್ಲ. ಈ ದೇಶದ ರಾಜಕಾರಣವನ್ನ ಬಿಡಲ್ಲ. ಯಾರ್ಯಾರು ಏನೇನು ಮಾಡುತ್ತಾರೆಂದು ನನಗೆ ಗೊತ್ತು. ಅವರ ಗರ್ವ, ಅಹಂಕಾರವನ್ನ ಮುರಿಯೋದಕ್ಕೆ ನಿಮ್ಮ ಮುಂದೆ ನಿಂತು ಮಾತನಾಡ್ತಿದ್ದೀನಿ. ವೀರಣ್ಣಗೌಡನನ್ನ ಗೆಲ್ಲಿಸಿದ ಪುಣ್ಯಾತ್ಮರು ಗುಬ್ಬಿಯವರು. ನಿಮ್ಮನ್ನ ನಾನೂ ಮರೆಯುತ್ತೇನಾ..? ಎಂದರು.
ಈ ದೇಶದಲ್ಲಿ ದೇವೇಗೌಡರು ಏನಾದ್ರೂ ಹಣ ಮಾಡಿದ್ದಾನೆ ಅಂದರೆ, ನಾನು ಈ ರಾಷ್ಟ್ರದಲ್ಲಿ ತಲೆಯೆತ್ತಿ ನಿಲ್ಲೋದಿಲ್ಲ. ನನ್ನ ಸೋಲಿಗೆ ನನ್ನನ್ನು ಅಣಕ ಮಾಡುತ್ತಾರೆ, ನನಗೆ ನೋವಿದೆ. ಪಕ್ಷ ಕಟ್ಟಿ ಮತ್ತೆ ಅಧಿಕಾರಕ್ಕೆ ಬರುತ್ತೇನೆ. ಒಂದು ಬ್ಯಾಂಕಿನ ಮುಖ್ಯಸ್ಥರಾಗಿದ್ದೀರಾ? ಅಲ್ಲಿ ಏನೇನು ನಡೆದಿದೆ ಅನ್ನೋ ಪ್ರಶ್ನೆ ನಮಗೆ ಬೇಡ. ನಾನಿನ್ನು ಬದುಕಿದ್ದೀನಿ, ನೋಡ್ತೀನಿ, ಹೋರಾಟ ಮಾಡ್ತೀನಿ. ಎಂತೆಂತವರನ್ನೋ ಜಯಿಸಿದ್ದೀನಿ. ನನ್ನ ಸೋಲಿಸಲು ನೀರು ಬಿಡಲ್ಲ ಅನ್ನೋ ಕೀಳುಮಟ್ಟದ ಅಪಪ್ರಚಾರ ನಡೆಯಿತು. ನನಗೆ ಅವತ್ತು ಏನು ಅವಮಾನ ಆಯಿತು.
ನಮ್ಮ ಮುಖಂಡರಿಗೆ ಹೇಳುತ್ತೇನೆ ಬರಿ ಹಣ ಮುಖ್ಯ ಅಲ್ಲ. ದೇವೇಗೌಡರಿಗೆ 89 ವರ್ಷ ಅಂತ ಯೋಚನೆ ಮಾಡಬೇಡಿ. ನಾನು ಮತ್ತೆ ಇಡೀ ರಾಜ್ಯದಲ್ಲಿ ಹೋರಾಟ ಮಾಡಿ ಪಕ್ಷವನ್ನ ಅಧಿಕಾರಕ್ಕೆ ತರುತ್ತೇನೆ. ತುಮಕೂರಿನಲ್ಲಿ ಅನಿಲ್ ಗೆಲ್ಲಿಸೋ ಮುಖಾಂತರ ಪಕ್ಷ ಉಳಿಸಿ, ಕೈಮುಗಿದು ಕೇಳಿಕೊಳ್ಳುತ್ತೇನೆ. ದೇವೇಗೌಡರು ನೀರು ಕೊಡಲ್ಲ ಅಂತಾ ಅಪಪ್ರಚಾರ ಮಾಡಿದರೂ ನಾವು ಬಿಡುವುದಿಲ್ಲ. ಮತ್ತೆ ಈ ತುಮಕೂರಿನಲ್ಲಿ ಎದ್ದು ನಿಲ್ತೇವೆ. ದೇವೇಗೌಡರಿಗೆ ಈ ಕ್ಷೇತ್ರ ಪಣವಾಗಿದೆ ಎಂದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!

ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!

ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.! Twitter Facebook LinkedIn WhatsApp ಬಂಟ್ವಾಳ: ಬಿ.ಸಿ.ರೋಡ್ ನೇತ್ರಾವತಿ ಸೇತುವೆಯ‌ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಸಂಭವಿಸಿದ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು