ಬುಧವಾರ, ಮೇ 8, 2024
ಟಿ-20 ವಿಶ್ವಕಪ್ ಗೆ ಪ್ರಕಟಗೊಂಡ ಎಲ್ಲಾ ತಂಡದಲ್ಲಿ ಯಾರೆಲ್ಲಾ ಆಟಗಾರರಿದ್ದಾರೆ? ಬಲಿಷ್ಠ ತಂಡ ಯಾವುದು?-ಕರ್ನಾಟಕದಲ್ಲಿ ಸಂಜೆ 5 ಗಂಟೆವರೆಗೆ ಶೇಕಡಾ 66.05 ರಷ್ಟು ಮತದಾನ..!-ಕಳೆದ ಐದು ತಿಂಗಳಿಂದ ರಿಜಿಸ್ಟ್ರೇಷನ್ ಸರ್ವರ್ ಸಮಸ್ಯೆ ಮುಗಿಯದ ಕಥೆ!10 ನಿಮಿಷದ ಡಾಕ್ಯೂಮೆಂಟ್ಗೆ ಅಪ್ಲೋಡೆಗೆ ಬೇಕು ಮೂರರಿಂದ ನಾಲ್ಕು ದಿನ!!-ಮಂಜೇಶ್ವರ: ಕಾರು ಮತ್ತು ಅಂಬುಲೆನ್ಸ್ ನಡುವೆ ಭೀಕರ ಅಪಘಾತ; ಮೂವರು ಸಾವು.!-ಬಂಟ್ವಾಳ: ಮದುವೆ ಸಭಾಂಗಣವೊಂದರ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..!-Rain Alert: ರಾಜ್ಯದಲ್ಲಿ ಇಂದಿನಿಂದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ ನಿರೀಕ್ಷೆ.!-ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಲೀಕ್ ಆಗಲು ನನ್ನ ಪಾತ್ರವಿಲ್ಲ; ದೇವರಾಜೆಗೌಡರಿಂದ ಸುಳ್ಳು ಆರೋಪವೆಂದ ಡಿಕೆ ಶಿವಕುಮಾರ್-ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ-ಆಘಾತಕಾರಿ ಘಟನೆ; ಕ್ರಿಕೆಟ್‌ ಆಡುತ್ತಿದ್ದಾಗ ಖಾಸಗಿ ಅಂಗಕ್ಕೆ ಚೆಂಡು ಬಡಿದು ಬಾಲಕ ಸಾವು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಧಾರವಾಡ: ಸೀಟ್‌ ಬೆಲ್ಟ್‌ ಧರಿಸದೆ ಇಬ್ಬರು ಸ್ನೇಹಿತರು ಸಾವು

Twitter
Facebook
LinkedIn
WhatsApp
ಧಾರವಾಡ: ಸೀಟ್‌ ಬೆಲ್ಟ್‌ ಧರಿಸದೆ ಇಬ್ಬರು ಸ್ನೇಹಿತರು ಸಾವು

ಅಳ್ನಾವರ(ಸೆ.15):  ಕಾರಿನ ಸೀಟ್‌ ಬೆಲ್ಟ್‌ ಹಾಕಿದ್ದಕ್ಕೆ ನನ್ನ ಜೀವ ಉಳೀತು. ಇಲ್ಲ ಅಂದಿದ್ದರೆ ನನ್ನ ಇಬ್ಬರು ಸ್ನೇಹಿತರಿಗಿಂತ ಮೊದಲು ನನ್ನ ಪ್ರಾಣವೇ ಹೋಗತ್ತಿತ್ತು. ನನ್ನ ಗೆಳೆಯರಿಬ್ಬರು ಮೃತರಾಗಿದ್ದು ಇಂದಿಗೂ ದುಃಖ ನೀಡುತ್ತಿದೆ.
ಸೀಟ್‌ ಬೆಲ್ಟ್‌, ಹೆಲ್ಮೆಟ್‌ನ ಮಹತ್ವದ ಬಗ್ಗೆ ಹಲವಾರು ಬಾರಿ ಓದಿದ್ದೆ, ಸಾಮಾಜಿಕ ಜಾಲತಾಣದಲ್ಲೂ ಅರಿವು ಮೂಡಿಸಲಾಗುತ್ತಿದೆ. ಆದರೆ ಪದೇ ಪದೇ ಪ್ರಜ್ಞಾವಂತ, ವಿದ್ಯಾವಂತ ಜನರೇ ಸೀಟ್‌ ಬೆಲ್ಟ್‌ ಧರಿಸದೇ ವಾಹನ ಚಲಾಯಿಸುವುದರಿಂದ ಅವಘಡ ಸಂಭವಿಸಿದಾಗ ಪ್ರಾಣ ಹೋಗುತ್ತಿದೆ. ಕಾರ್‌ ಅಪಘಾತದಲ್ಲಿ ಸೀಟ್‌ ಬೆಲ್ಟ್‌ ಧರಿಸಿದ್ದ ನಾನೂ ಸೇರಿದಂತೆ ಮೂವರು ಉಳಿದೆವು. ನಮ್ಮ ಪ್ರಾಣ ಸ್ನೇಹಿತರಿಬ್ಬರು ಮೃತರಾದರು. ಎರಡು ತಿಂಗಳ ಹಿಂದೆ ಅಳ್ನಾವರ ಸಮೀಪದ ಗೋವಾ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತನ್ನ ಸ್ನೇಹಿತರನ್ನು ಕಳೆದುಕೊಂಡ ಪ್ರೇಮನಾಥ ಪಾಲಕರ ಮಾತಿದು.

ಧಾರವಾಡ: ಸೀಟ್‌ ಬೆಲ್ಟ್‌ ಧರಿಸದೆ ಇಬ್ಬರು ಸ್ನೇಹಿತರು ಸಾವು

ಈ ದುರಂತದಲ್ಲಿ ನನ್ನ ಬಾಲ್ಯ ಗೆಳೆಯ, ಪ್ರಾಣ ಸ್ನೇಹಿತ ವಿಠ್ಠಲ ಕಾಕಡೆ (27), ಅಳ್ನಾವರದ ಸಾಗರ ಬೀಡಿಕರ (28) ಸಾವನ್ನಪ್ಪಿದರು. ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಗರ ಬೀಡಿಕರ ಹೊಸದಾಗಿ ಟಾಟಾ ನೆಕ್ಸಾನ್‌ ಖರೀದಿಸಿ ತಿಂಗಳಾಗಿತ್ತು. ವರ್ಕ್ ಫ್ರಂ ಹೋಂ ಹಿನ್ನೆಲೆಯಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಹೀಗೆ ಒಂದು ದಿನ ಲಾಂಗ್‌ ಡ್ರೈವ್‌ ಹೋಗಲು ತೀರ್ಮಾನಿಸಿದ್ದೆವು. ಐವರು ಗೋವಾ ರಸ್ತೆಯಲ್ಲಿ ಹೋಗುತ್ತಿದ್ದೆವು. ಚಾಲಕ ಹಾಗೂ ಪಕ್ಕದ ಸೀಟ್‌ನಲ್ಲಿ ಮೃತರಾದ ಸ್ನೇಹಿತರು ಕುಳಿತಿದ್ದರು. ಇಬ್ಬರೂ ಸೀಟ್‌ ಬೆಲ್ಟ್‌ ಹಾಕಿರಲಿಲ್ಲ. ಹೀಗಾಗಿ ಅಪಘಾತವಾದಾಗ ಏರ್‌ಬ್ಯಾಗ್‌ ತೆರೆದುಕೊಳ್ಳದೆ ಗಂಭೀರ ಗಾಯಗೊಂಡು ಕಣ್ಣೆದುರೆ ಅಸುನೀಗಿದರು. ನಾನು ಚಾಲಕನ ಹಿಂಬದಿ ಸೀಟ್‌ ಬೆಲ್ಟ್‌ ಧರಿಸಿ ಕುಳಿತಿದ್ದರಿಂದ ಸಣ್ಣಪುಟ ಗಾಯಗಳು ಮಾತ್ರ ಆಗಿವೆ. ನನ್ನ ಕಣ್ಣೆದುರಿಗೇ ಪ್ರಾಣ ಸ್ನೇಹಿತರಿಬ್ಬರನ್ನು ಸಣ್ಣ ನಿರ್ಲಕ್ಷ್ಯದಿಂದ ಕಳೆದುಕೊಳ್ಳಬೇಕಾಯಿತು.

ಧಾರವಾಡ: ಸೀಟ್‌ ಬೆಲ್ಟ್‌ ಧರಿಸದೆ ಇಬ್ಬರು ಸ್ನೇಹಿತರು ಸಾವು

ಇನ್ನಿಬ್ಬರಿಗೆ ಸಹ ಸಣ್ಣಪುಟ್ಟಗಾಯಗಳಾಗಿವೆ. ಸವಾರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾತ್ರ ಸೀಟ್‌ಬೆಲ್ಟ್‌ ಮತ್ತು ಹೆಲ್ಮೇಟ್‌ ಧರಿಸುತ್ತಾರೆ. ಆದರೆ, ಅವುಗಳೇ ನಮ್ಮ ಪ್ರಾಣ ಕಾಪಾಡುತ್ತವೆ ಎಂಬುದಕ್ಕೆ ನಾನೇ ಸಾಕ್ಷಿ. ಆದರಿಂದ ಪ್ರತಿಯೊಬ್ಬರು ಸೀಟ್‌ ಬೆಲ್ಟ್‌, ಹೆಲ್ಮೇಟ್‌ ಧರಿಸಿ. ನಾನು ನನ್ನ ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ಇಂತಹ ಯಾತನೆ ಮತ್ತ್ಯಾರಿಗೂ ಬರುವುದು ಬೇಡ ಎನ್ನುವಾಗ ಮಾತು ಗದ್ಗದಿತವಾಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ!

ದ.ಕ. ಸಬ್ ರಿಜಿಸ್ಟರ್ ಗಳಲ್ಲಿ ಸಮಯಕ್ಕೆ ಸರಿಯಾಗಿ ಸಿಗದ ಸರ್ವರ್. ನಾಗರಿಕರು ಹೈರಾಣ! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಸರಿಯಾದ ಸಮಯಕ್ಕೆ ಸಬ್ ರಿಜಿಸ್ಟರ್ಗಳ ರಿಜಿಸ್ಟ್ರೇಷನ್

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!

ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ

ಅಂಕಣ