ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ

Twitter
Facebook
LinkedIn
WhatsApp
ಕೋವಿಡ್ ಲಸಿಕೆಯಿಂದಲೇ ನನಗೆ ಹೃದಯಾಘಾತ ಸಂಭವಿಸಿರಬಹುದು? ನಟ ಶ್ರೇಯಸ್ ತಲ್ಪಾಡೆ

ಕಾರಣ, 2023ರಲ್ಲಿ ನಟ ಶ್ರೇಯಸ್ ತಲ್ಪಾಡೆಗೆ ‘ಕಾರ್ಡಿಯಾಕ್ ಅರೆಸ್ಟ್‌’ ಸಂಭವಿಸಿತ್ತು. ತಕ್ಷಣ ಆಸ್ಪತ್ರೆಗೆ ತೆರಳಿ ಟ್ರೀಟ್‌ಮೆಂಟ್ ತೆಗೆದುಕೊಂಡಿದ್ದರು. ಬಳಿಕ ಇಷ್ಟೂ ದಿನವೂ ತಮ್ಮ ಹೃದಯದ ಅನಾರೋಗ್ಯಕ್ಕೆ ಕಾರಣ, ಡಯೆಟ್, ಎಕ್ಸರಿಸೈಜ್ ಹಾಗೂ ಬೇರೇನೋ ಕಾರಣ ಎಂದುಕೊಂಡಿದ್ದ ನಟ ಶ್ರೇಯಸ್ ತಲ್ಪಾಡೆ ಅವರಿಗೆ ಈಗ ಸಣ್ಣ ಸಂಶಯ ಮೂಡಿದೆ ಎನ್ನಬಹುದು. ಏಕೆಂದರೆ, ಕೋವಿಡ್ ಉತ್ಪಾದನಾ ಕಂಪನಿಯೇ ‘ಅಡ್ಡ ಪರಿಣಾಮ’ದ ಬಗ್ಗೆ ಹೇಳಿದ್ದರಿಂದ, ತಮಗೆ ಕಳೆದ ವರ್ಷ ಸಂಭವಿಸಿರುವ ಹೃದಯ ಸಮಸ್ಯೆಗೆ ಕೋವಿ ಶೀಲ್ಡ್ ವ್ಯಾಕ್ಸಿನ್‌ ಕಾರಣವಾಗಿರಬಹುದೇ? ಎಂಬ ಪ್ರಶ್ನೆಯೀಗ ಅವರಿಗೆ ಮೂಡಿದೆ. 

‘ನಾನು ಸ್ಮೋಕ್ ಮಾಡುವುದಿಲ್ಲ, ನಾನು ರೆಗ್ಯಲರ್‌ ಆಗಿ ಡ್ರಿಂಕ್ಸ್ ಕೂಡ ಮಾಡುವುದಿಲ್ಲ. ನಾನು ತಿಂಗಳಿಗೊಮ್ಮೆ ಡ್ರಿಂಕ್ಸ್ ತೆಗೆದುಕೊಂಡರೂ ಅದು ತುಂಬಾ ಲಿಮಿಟ್‌ನಲ್ಲಿ ಇರುತ್ತದೆ. ನನ್ನ ಕೊಲೆಸ್ಟರಾಲ್ ಲೆವೆಲ್ ಕೂಡ ಸ್ವಲ್ಪವೇ ಹೈ ಇದ್ದು, ಅದನ್ನೀಗ ನಾರ್ಮಲ್ ಎನ್ನಲಾಗಿದೆ. ನನಗೆ ಡಯಾಬಟೀಸ್ ಇಲ್ಲ, ಹೈ ಬ್ಲಡ್ ಪ್ರೆಶರ್ ಇಲ್ಲ, ಸಾಧ್ಯವಾದಷ್ಟೂ ಎಚ್ಚರಿಕೆಯಿಂದ ಇದ್ದರೂ, ನನಗೆ ಹಾರ್ಟ್‌ ಪ್ರಾಬ್ಲಂ (Cardiac Arrest) ಬರಲು ಬೇರೇನು ಕಾರಣವಾಗಿರಬಹುದು?     ನನಗಂತೂ ಅರ್ಥವಾಗುತ್ತಿಲ್ಲ’ ಎಂದಿದ್ದಾರೆ ನಟ ಶ್ರೇಯಸ್ ತಲ್ಪಾಡೆ.     

ಕೋವಿಶೀಲ್ಡ್ ಬಗ್ಗೆ ಬಂದಿರುವ ವರದಿಯ ಸಣ್ಣ ಆರ್ಟಿಕಲ್ ಇನ್‌ಸರ್ಟ್‌ ಮಾಡಿ ಈ ಬಗ್ಗೆ ಹೇಳಿಕೊಂಡಿರುವ ನಟ ಶ್ರೇಯಸ್ ತಲ್ಪಾಡೆ, ‘ನಾವು ನಮ್ಮ ದೇಹದೊಳಗೆ ಏನನ್ನು ಸೇರಿಸಿಕೊಂಡಿದ್ದೇವೆ ಎಂಬುದು ನಿಜವಾಗಿಯೂ ನಮಗೆ ಗೊತ್ತಿಲ್ಲ. ಇದು ನಿಜವಾಗಿಯೂ ದುರದೃಷ್ಟಕರ ಹಾಗೂ ಆತಂಕ ಹುಟ್ಟಿಸುವಂಥದ್ದು. ಕೋವಿಡ್‌ಗಿಂತ ಮೊದಲು ನಾವು ಹೀಗೆ 30-40 ವರ್ಷ ವಯಸ್ಸಿನವರು ದಿಢೀರ್‌ ಸತ್ತಿದ್ದು ಹಾಗೂ ಹೃದಯ ಸಮಸ್ಯೆಗೆ ತುತ್ತಾದ ಘಟನೆಯನ್ನು ನೋಡಿದ್ದು ಕಡಿಮೆ’ ಎಂದಿದ್ದಾರೆ ನಟ ಶ್ರೇಯಸ್ ತಲ್ಪಾಡೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ