ದೆಹಲಿ: ಸಿಖ್ ಧರ್ಮದ 9 ನೇ ಗುರು, ಗುರು ತೇಗ್ ಬಹಾದೂರ್ (Guru Tegh Bahadur) ಅವರ 400 ಜಯಂತ್ಯುತ್ಸವ ಅಂಗವಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) ರಾಜಧಾನಿಯ ಕೆಂಪುಕೋಟೆಯ (Red Fort) ಆವರಣದಿಂದ ದೇಶವನ್ನು ಉದ್ದೇಶಿಸಿ ಮಾತಾಡಿದರು. ಸೂರ್ಯಾಸ್ತದ ಬಳಿಕ ಕೆಂಪುಕೋಟೆಯಿಂದ ಭಾಷಣ ಮಾಡಿದ ಭಾರತದ ಮೊಟ್ಟ ಮೊದಲ ಪ್ರಧಾನಿ ಮೋದಿ ಅವರಾಗಿದ್ದಾರೆ. ಗುರು ತೇಗ್ ಬಹಾದೂರ ಅವರನ್ನು ಗಲ್ಲಿಗೇರಿಸುವಂತೆ ಮೊಘಲ್ ಸಾಮ್ರಾಟ ಔರಂಗಜೇಬ್ ಇದೇ ಕೋಟೆಯಿಂದ ಆಜ್ಞೆ ಹೊರಡಿಸಿದ್ದರಿಂದ ಪ್ರಧಾನಿ ಮೋದಿ ಈ ಸ್ಥಳವನ್ನು ತಮ್ಮ ಭಾಷಣಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ.
‘ಈ ಪವಿತ್ರ ಸಂದರ್ಭದಲ್ಲಿ ಎಲ್ಲ ಹತ್ತು ಸಿಖ್ ಗುರುಗಳ ಪಾದಗಳಿಗೆ ವಂದಿಸುತ್ತೇನೆ,’ ಎಂದು ಮಾತು ಆರಂಭಿಸಿದ ಪ್ರಧಾನಿಗಳು, ‘ಭಾರತ ದೇಶವು ನಮ್ಮ ಗುರುಗಳು ತೋರಿಸಿದ ಮಾರ್ಗದಲ್ಲಿ ಸಂಪೂರ್ಣ ಸಂಕಲ್ಪ ಮತ್ತು ಬದ್ಧತೆಯೊಂದಿಗೆ ಮುನ್ನಡೆಯುತ್ತಿರುವುದು ನನ್ನಲ್ಲಿ ಆನಂದವನ್ನುಂಟು ಮಾಡಿದೆ. ಎಲ್ಲರಿಗೂ ಪ್ರಕಾಶ ಪೂರಬ್ನ ಹಾರ್ದಿಕ ಶುಭಾಶಯಗಳು,’ ಎಂದರು.
‘ಕೆಂಪು ಕೋಟೆಯನ್ನು ನೋಡುತ್ತಿದ್ದರೆ ನನಗೆ ಗುರು ತೇಗ್ ಬಹಾದೂರ್ ಅವರ ಬಲಿದಾನ ನೆನೆಪಿಗೆ ಬರುತ್ತವೆ. ಔರಂಗಜೇಬನ ದಮನಕಾರಿ ನೀತಿಗಳ ನಡುವೆ ಗುರು ತೇಗ್ ಬಹಾದೂರ ಅವರು ಹಿಂದ್ ಕಾ ಚಾದರ್ ಆಗಿ ಉದ್ಭವಿಸಿದರು ಮತ್ತು ಅವನ ವಿರುದ್ಧ ಅಚಲ ಬಂಡೆಯಂತೆ ನಿಂತರು. ಔರಂಗಜೇಬ ಅನೇಕ ಭಾರತೀಯರ ತಲೆಗಳನ್ನು ಕಡಿದು ಹಾಕಿದ್ದಕ್ಕೆ ಈ ಕೆಂಪುಕೋಟೆ ಸಾಕ್ಷಿಯಾಗಿದೆ, ಆದರೆ ಅವನ ಕ್ರೌರ್ಯ, ನರಮೇಧ ನಮ್ಮ ವಿಶ್ವಾಸವನ್ನು ಕದಡುವಲ್ಲಿ ವಿಫಲವಾಗಿದೆ, ಎಂದು ಪ್ರಧಾನಿ ಮೋದಿ ಹೇಳಿದರು.
ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು Twitter Facebook LinkedIn WhatsApp ಬಂಟ್ವಾಳ: ಪಿಲಾತ್ತಬೆಟ್ಟು ಗ್ರಾಮದ ಅತ್ಯಂತ ಗ್ರಾಮೀಣ ಭಾಗದ ಆದರೆ ಪಕೃತಿ ರಮಣೀಯ ಪರಿಸರದಲ್ಲಿರುವ ಸರಕಾರಿ
ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡದ ಅಪ್ಪಟ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?