ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಟಿ20 ವಿಶ್ವಕಪ್ನ 24ನೇ ಪಂದ್ಯದಲ್ಲಿ ಬಲಿಷ್ಠ ಪಾಕಿಸ್ತಾನ್ (Pakistan vs Zimbabwe) ತಂಡಕ್ಕೆ ಸೋಲುಣಿಸಿ ಜಿಂಬಾಬ್ವೆ ತಂಡವು ಹೊಸ ಇತಿಹಾಸ ಬರೆದಿದೆ. ಪರ್ತ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ರಣರೋಚಕ ಪಂದ್ಯದಲ್ಲಿ ಜಿಂಬಾಬ್ವೆ ತಂಡವು 1 ರನ್ಗಳ ರೋಚಕ ಜಯ ಸಾಧಿಸಿತು. ಇತ್ತ ಐತಿಹಾಸಿಕ ಗೆಲುವು ದಕ್ಕುತ್ತಿದ್ದಂತೆ ಜಿಂಬಾಬ್ವೆ ತಂಡದ ಆಟಗಾರರು ಮೈದಾನದಲ್ಲಿ ಕುಣಿದು ಕುಪ್ಪಳಿಸಿದರು. ಆದರೆ ಅತ್ತ ಪಾಕಿಸ್ತಾನ್ ತಂಡದ ನಾಯಕ ಬಾಬರ್ ಆಜಂ ಡಗೌಟ್ನಲ್ಲಿ ಭಾವುಕರಾಗಿ ಕಂಡು ಬಂದರು. ಅಲ್ಲದೆ ಪಾಕ್ ನಾಯಕ ಕಣ್ಣು ಒರೆಸುತ್ತಿರುವ ಫೋಟೋಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕೊನೇ ಓವರ್ನಲ್ಲಿ ಪಾಕಿಸ್ತಾನ ತಂಡದ ಗೆಲುವಿಗೆ 11 ರನ್ ಬೇಕಿದ್ದವು. ಆದರೆ, ತಂಡಕ್ಕೆ ಗೆಲುವು ನೀಡಲು ಪಾಕ್ ತಂಡದ ಪಾಲಿಗೆ ವಿರಾಟ್ ಕೊಹ್ಲಿ ಇದ್ದಿರಲಿಲ್ಲವಷ್ಟೇ. ಮೊಹಮದ್ ವಾಸಿಂ ಹಾಗೂ ಟಿ20 ಯಲ್ಲಿ ಉತ್ತಮವಾಗಿಯೇ ಬ್ಯಾಟಿಂಗ್ ಮಾಡುವ ಮೊಹಮದ್ ನವಾಜ್ ಕ್ರೀಸ್ನಲ್ಲಿದ್ದರು. ಬ್ರಾಡ್ ಇವಾನ್ಸ್ ಎಸೆದ ಒದಲ ಎಸೆತದಲ್ಲಿ ಮೊಹಮದ್ ನವಾಜ್, ಮಿಡ್ಆಫ್ನತ್ತ ಬಾರಿಸಿ ಮೂರು ರನ್ ಕದ್ದರು. ಇದರಿಂದಾಗಿ ಕೊನೇ 5 ಎಸೆತಗಳಲ್ಲಿ 8 ರನ್ ಬಾರಿಸುವ ತೀರಾ ಸುಲಭದ ಸವಾಲು ಪಾಕ್ ಮುಂದೆ ಇತ್ತು. ಮೊಹಮದ್ ವಾಸಿಂ 2ನೇ ಎಸೆತದಲ್ಲಿ ಬ್ಯಾಕ್ ಕವರ್ನಲ್ಲಿ ಆಕರ್ಷಕ ಬೌಂಡರಿ ಕೂಡ ಸಿಡಿಸಿದರು. ಮೂರನೇ ಎಸೆತದಲ್ಲಿ, ವಾಸಿಂ 1 ರನ್ ಕದಿದ್ದರು.
ಕೊನೆಯ ಮೂರು ಎಸೆತಗಳಲ್ಲಿ ಪಾಕಿಸ್ತಾನಕ್ಕೆ 3 ರನ್ ಬೇಕಿತ್ತು. 4ನೇ ಎಸೆತದಲ್ಲಿ ಮೊಹಮದ್ ನವಾಜ್ ರನ್ ಬಾರಿಸಲು ವಿಫಲರಾದರು. 5ನೇ ಎಸೆತದಲ್ಲಿ ಮೊಹಮದ್ ನವಾಜ್, ಕ್ರೇಗ್ ಇರ್ವಿನ್ಗೆ ಕ್ಯಾಚ್ ನೀಡಿದಾಗ ಪಾಕಿಸ್ತಾನ ಆಘಾತ ಕಂಡಿತು. ಏಕೆಂದರೆ ಕೊನೇ ಎಸೆತದಲ್ಲಿ ಪಾಕಿಸ್ತಾನಕ್ಕೆ ಮೂರು ರನ್ ಬೇಕಿತ್ತು. ಬ್ಯಾಟಿಂಗ್ ಮಾಡಲು ಬಂದ ಶಾಹಿನ್ ಆಪ್ರಿಧಿ, ಕೊನೇ ಎಸೆತದಲ್ಲಿ ಕೇವಲ 1 ರನ್ ಕದ್ದರು. ಕನಿಷ್ಠ ಸ್ಕೋರ್ ಟೈ ಮಾಡುವ ಪ್ರಯತ್ನದಲ್ಲಿ ರನ್ಔಟ್ ಆದಾಗ ಜಿಂಬಾಬ್ವೆ ಸಂಭ್ರಮಕ್ಕೆ ಪಾರವೇ ಇರಲಿಲ್ಲ.
ಮೊದಲು ಬ್ಯಾಟಿಂಗ್ ಮಾಡಿದ ಜಿಂಬಾಬ್ವೆ ಪರವಾಗಿ ಅನುಭವಿ ಸೀನ್ ವಿಲಿಯಮ್ಸ್ 28 ಎಸೆತಗಳಲ್ಲಿ 31 ರನ್ ಬಾರಿಸಿದ್ದರು. ಉಳಿದಂತೆ ಯಾವೊಬ್ಬ ಬ್ಯಾಟ್ಸ್ಮನ್ ಕೂಡ 20 ರನ್ಗಳ ಗಡಿ ದಾಟಿರಲಿಲ್ಲ. ಮೊದಲ ವಿಕೆಟ್ಗೆ ಮ್ಯಾಧವೇರ್ ಹಾಗೂ ನಾಯಕ ಕ್ರೇಗ್ ಇರ್ವಿನ್ 42 ರನ್ ಜೊತೆಯಾಟವಾಡಿ ಬೇರ್ಪಟ್ಟ ಬಳಿಕ ಜಿಂಬಾಬ್ವೆ ಪರವಾಗಿ ಉತ್ತಮ ಜೊತೆಯಾಟ ದಾಖಲಾಗಲೇ ಇಲ್ಲ. ಒಂದು ಹಂತದಲ್ಲಿ ವಿಕೆಟ್ ನಷ್ಟವಿಲ್ಲದೆ 42 ರನ್ ಬಾರಿಸಿದ್ದ ಜಿಂಬಾಬ್ವೆ ಈ ಮೊತ್ತಕ್ಕೆ 53 ರನ್ ಕೂಡಿಸುವ ವೇಳೆಗೆ 7 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಕೊನೆಯಲ್ಲಿ ಬ್ರಾಡ್ ಎವಾನ್ಸ್ 15 ಎಸೆತಗಳಲ್ಲಿ ಒಂದು ಸಿಕ್ಸರ್ನೊಂದಿಗೆ 19 ರನ್ ಸಿಡಿಸಿ ತಂಡದ ಮೊತ್ತವನ್ನು130ರ ಗಡಿ ಮುಟ್ಟಿಸಿದ್ದರು.
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ
ಚಂಡಮಾರುತದಿಂದ ಹಾನಿಗೀಡಾದ ಮನೆಗಳು- 10,000
ಹಾನಿಗೊಳಗಾದ ಕೃಷಿ ಭೂಮಿ- 6,000 ಹೆಕ್ಟೇರ್
ನಾಶವಾದ ಸಿಗಡಿ ಫಾರ್ಮ್- 1,000
ನಿರಾಶ್ರಿತರಾದವರು- 10 ಲಕ್ಷ
ಶಿಬಿರಗಳಲ್ಲಿ ಆಶ್ರಯ ಪಡೆದವರು- 6,925
ಸ್ಥಳಾಂತರಗೊಂಡವರ ಸಂಖ್ಯೆ- 2 ಲಕ್ಷ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?