ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಉಡುಪಿ: ಮಲ್ಪೆ ಬೀಚ್‌ನಲ್ಲಿ ಚಿನ್ನಕ್ಕಾಗಿ ಹುಡುಕಾಟ, ಕಡಲ ತೀರದಲ್ಲಿ ನಿಜಕ್ಕೂ ಗೋಲ್ಡ್‌ ಸಿಗುತ್ತಾ?

Twitter
Facebook
LinkedIn
WhatsApp
ಉಡುಪಿ: ಮಲ್ಪೆ ಬೀಚ್‌ನಲ್ಲಿ ಚಿನ್ನಕ್ಕಾಗಿ ಹುಡುಕಾಟ, ಕಡಲ ತೀರದಲ್ಲಿ ನಿಜಕ್ಕೂ ಗೋಲ್ಡ್‌ ಸಿಗುತ್ತಾ?

ಉಡುಪಿ(ಜು.16):  ಉಡುಪಿಯ ಮಲ್ಪೆ ಬೀಚ್‌ನಲ್ಲಿ ದಿನಬೆಳಗಾದರೆ ನೂರಾರು ಜನ ಚಿನ್ನದ ಹುಡುಕಾಟ ನಡೆಸುತ್ತಿದ್ದಾರೆ. ಅಲೆಗಳು ತಂದು ಹಾಕಿದ ಕಸದ ನಡುವೆ, ಚಿನ್ನದ ಆಭರಣಗಳು ಸಿಗುತ್ತೆ ಅನ್ನೋ ಆಸೆಯೊಂದಿಗೆ ದಿನವೂ ಚಿನ್ನದ ಬೇಟೆಯಾಡುತ್ತಾರೆ!   ಮಳೆಗಾಲ ಕರಾವಳಿಯ ಚಿತ್ರಣವನ್ನೇ ಬದಲಿಸಿ ಬಿಡುತ್ತದೆ. ಸಮುದ್ರದ ಅಲೆಗಳಂತೂ ಹೊಸ ಅಬ್ಬರದೊಂದಿಗೆ ತೀರ ಪ್ರದೇಶಕ್ಕೆ ಅಪ್ಪಳಿಸುತ್ತವೆ. ಈ ವೇಳೆ  ಕಡಲ ಅಡಿಯಲಿದ್ದ ಕಸದ ರಾಶಿ ತೀರ ಪ್ರದೇಶಕ್ಕೆ ಬಂದು ಬೀಳೋದು ಸಾಮಾನ್ಯ!  

ವಿಶ್ವ ಪ್ರಸಿದ್ಧ ಮಲ್ಪೆ ಬೀಚ್‌ಗೆ ಈಗೊಮ್ಮೆ ಬಂದು ನೋಡಿ, ಎಲ್ಲಿ ನೋಡಿದರೂ ಲೋಡುಗಟ್ಟಲೆ ಕಸದ ರಾಶಿ. ಆದರೆ ಈ ಕಸದ ನಡುವೆ, ಅಪರೂಪಕಮ್ಮೆ ಚಿನ್ನವೂ  ಸಿಗುತ್ತೆ! ಇದೇ ಆಸೆಯಲ್ಲಿ ಕಡಲ ತಡಿಯ ಜನ ಕಸದಿಂದ ರಸ ಹುಡುಕುವ ಕೆಲಸ ಮಾಡುತ್ತಿರುತ್ತಾರೆ.

ಇಷ್ಟಕ್ಕೂ ಚಿನ್ನ ಬರೋದು ಎಲ್ಲಿಂದ?

ಸಮುದ್ರ ತನ್ನ ಒಡಲಲ್ಲಿ ಏನನ್ನೂ ಇರಿಸಿಕೊಳ್ಳುವುದಿಲ್ಲ ಅನ್ನೋ ಮಾತಿದೆ. ಅದರಂತೆ ನಾವು ಸಮುದ್ರಕ್ಕೆ ಹಾಕಿದ ಕಸವೆಲ್ಲ ತೀರಪ್ರದೇಶಕ್ಕೆ ಬಂದು ಬೀಳೋದು ಸಾಮಾನ್ಯ. ಅದೇ ರೀತಿ ಲಕ್ಷಾಂತರ ಜನರು ಭೇಟಿ ಕೊಡುವ ಮಲ್ಪೆ ಸಮುದ್ರದಲ್ಲಿ, ಈಜಾಟ ಮೋಜು-ಮಸ್ತಿಯ ವೇಳೆ ಅನೇಕ ಮಂದಿ ತಮ್ಮ ಚಿನ್ನಾಭರಣ ಕಳೆದುಕೊಳ್ಳುತ್ತಾರೆ. ಹೀಗೆ ಕಳೆದು ಹೋದ ಚಿನ್ನದ ಆಭರಣಗಳು ಕಡಲ ಅಡಿ ಸೇರುತ್ತಂತೆ.

ಮಳೆಗಾಲದಲ್ಲಿ ತೂಫಾನ್ ಎದ್ದಾಗ, ಕಡಲು ಅಡಿಮೇಲಾಗುತ್ತದೆ. ಆಳದಲ್ಲಿರುವ ವಸ್ತುಗಳೆಲ್ಲ ಮೇಲಕ್ಕೆ ತೇಲಿ ಬರುತ್ತವೆ. ಹೀಗೆ ಕಸದರಾಶಿಯೇ ಸಮುದ್ರ ಬದಿಗೆ ಬಂದು ಬೀಳುತ್ತದೆ. ಕಸದ ಜೊತೆ ಕಡಲು ಪಾಲಾದ ಚಿನ್ನಾಭರಣಗಳು ಕೂಡ ತೀರ ಪ್ರದೇಶಕ್ಕೆ ತೇಲಿ ಬರುತ್ತಂತೆ. ಈ ರೀತಿ ಹುಡುಕಾಟ ನಡೆಸಿದ ಕೆಲವರಿಗೆ ಅಪರೂಪಕ್ಕೊಮ್ಮೆ ಚಿನ್ನದ ಆಭರಣ ಸಿಕ್ಕಿದ್ದೂ ಇದೆಯಂತೆ. 

ಯಾರಿಗಾದರೂ ಚಿನ್ನ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ! ಜನರಂತೂ ಕಳೆದ ಅನೇಕ ವರ್ಷಗಳಿಂದ ಮಳೆಗಾಲದಲ್ಲಿ ಚಿನ್ನದ ಭೇಟಿ ನಡೆಸುತ್ತಲೇ ಇದ್ದಾರೆ. ಕಡಲಲ್ಲಿ ತೂಫಾನ್ ಎದ್ದರೆ ಸಾಕು; ಅನೇಕ ಮಂದಿ ಬೀಚ್‌ನಲ್ಲಿ ಹುಡುಕಾಟ ಆರಂಭಿಸುತ್ತಾರೆ. ಈ ರೀತಿ ಹುಡುಕಾಟ ನಡೆಸಿದ ಯಾರು ಕೂಡ ನಮಗೆ ಚಿನ್ನ ಸಿಕ್ಕಿದೆ ಎಂದು ಹೇಳಿಲ್ಲ. ಹಾಗಂತ ಚಿನ್ನದ ಹುಡುಕಾಟವೇನೂ ನಿಂತಿಲ್ಲ. ಈಗಲೂ ದಿನ ಬೆಳಗಾದರೆ ಜನ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಇಂದಲ್ಲ ನಾಳೆ ಚಿನ್ನ ಸಿಕ್ಕೇ ಸಿಗುತ್ತೆ ಎಂದು ಹುಡುಕಾಟ ನಡೆಸುತ್ತಾರೆ.

ಮಲ್ಪೆ ಬೀಚ್‌ಗೆ ನಿರ್ಬಂಧ

ಮಳೆಗಾರದಲ್ಲಿ ಮಲ್ಪೆ ಕಡಲು ಅಪಾಯಕಾರಿಯಾಗಿ ವರ್ತಿಸುತ್ತದೆ. ಹಾಗಾಗಿ ಯಾವುದೇ ಪ್ರವಾಸಿಗರೂ ಇಲ್ಲಿ ಭೇಟಿ ನೀಡಿದಂತೆ ಸಮುದ್ರದ ಉದ್ದಕ್ಕೂ ಬಲೆಯ ಬೇಲಿ ಹಾಕಲಾಗಿದೆ. ಬಲೆಯ ಹೊರಮಗ್ಗಲಲ್ಲಿ ನಿಂತು ಸಮುದ್ರವನ್ನು ನೋಡಬೇಕು. ಹಾಗಾಗಿ ಚಿನ್ನ ಸಿಗುತ್ತೆ ಅಂತ ಯಾರೂ ಮಲ್ಪೆ ಬೀಚ್‌ಗೆ ಬರೋದಕ್ಕೆ ಹೋಗಬೇಡಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ