ಅಪಘಾತದಲ್ಲಿ ಮೃತಪಟ್ಟ KSRTC ಸಿಬ್ಬಂದಿ ಕುಟುಂಬಕ್ಕೆ 1ಕೋಟಿ ರೂಪಾಯಿ ನೆರವು, ಚೆಕ್ ವಿತರಿಸಿದ ಶ್ರೀರಾಮುಲು
ಬೆಂಗಳೂರು: ಅಪಘಾತದಲ್ಲಿ ಮೃತಪಟ್ಟ KSRTC ಚಾಲಕನ ಕುಟುಂಬಕ್ಕೆ ಸಚಿವ ಬಿ. ಶ್ರೀರಾಮುಲು ನೆರವು ನೀಡಿದ್ದು, 1 ಕೋಟಿ ರೂ. ಪರಿಹಾರದ ಚೆಕ್ ವಿತರಣೆ ಮಾಡಿದ್ದಾರೆ. ಡಿಪೋದ ಚಾಲಕ ಕಂ ನಿರ್ವಾಹಕರಾಗಿದ್ದ J.S.ಉಮೇಶ್ ಇತ್ತೀಚೆಗೆ ಅಪಘಾತದಲ್ಲಿ ಮೃತ್ತಪಟ್ಟಿದ್ದರು. ಇನ್ಶೂರೆನ್ಸ್ ಕೋಟಾ ಮೂಲಕ ಒಂದು ಕೋಟಿ ರೂ. ಮತ್ತು ಕೆಎಸ್ಆರ್ಟಿಸಿ ನಿಗಮದಿಂದ ಪ್ರತ್ಯೇಕವಾಗಿ 13 ಲಕ್ಷ ರೂ. ಪರಿಹಾರವನ್ನು ಶಾಂತಿನಗರದ KSRTC ಕೇಂದ್ರ ಕಚೇರಿಯಲ್ಲಿ ಉಮೇಶ್ ಕುಟುಂಬವನ್ನ ಕರೆಸಿ ಚೆಕ್ ವಿತರಣೆ ಮಾಡಲಾಗಿದೆ. ಅಲ್ಲಿಗೆ ಮಾತಿಗೆ ತಕ್ಕಂತೆ ಚಿತ್ರದುರ್ಗ ಕೆಎಸ್ಆರ್ಟಿಸಿ ನಿಗಮ ನಡೆದುಕೊಂಡಿದೆ.
ಚಿತ್ರದುರ್ಗ ಡಿಪೋಗೆ ಸೇರಿದ್ದ ಚಾಲಕ ಕಮ್ ನಿರ್ವಾಹಕ ಉಮೇಶ್ ಅಪಘಾತದಲ್ಲಿ ನಿಧನರಾಗಿದ್ದರು. ಬಸ್ ಚಾಲನೆ ಮಾಡುವ ವೇಳೆ ನಡೆದ ಅಪಘಾತ ಜೀವ ಕಳೆದುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಇನ್ಶ್ಯೂರೆನ್ಸ್ ಕೋಟಾ ಮೂಲಕ ಒಂದು ಕೋಟಿ ರೂಪಾಯಿ ಚೆಕ್ ಅನ್ನು ಸಚಿವರು ಮೃತ ಉಮೇಶ್ ಕುಟುಂಬಕ್ಕೆ ವಿತರಣೆ ಮಾಡಿದ್ದಾರೆ. ಇಂದು ಶಾಂತಿನಗರ KSRTC ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುನೈಟೆಡ್ ಇಂಡಿಯಾ ಇನ್ಸೂರೆನ್ಸ್, ಮತ್ತು ಎಸ್ಬಿಐ ಬ್ಯಾಂಕ್ನಿಂದ ನೆರವುವನ್ನು ಉಮೇಶ್ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.