ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಉಡುಪಿ: ಮಲ್ಪೆ ಬೀಚ್‌ನಲ್ಲಿ ಚಿನ್ನಕ್ಕಾಗಿ ಹುಡುಕಾಟ, ಕಡಲ ತೀರದಲ್ಲಿ ನಿಜಕ್ಕೂ ಗೋಲ್ಡ್‌ ಸಿಗುತ್ತಾ?

Twitter
Facebook
LinkedIn
WhatsApp
ಉಡುಪಿ: ಮಲ್ಪೆ ಬೀಚ್‌ನಲ್ಲಿ ಚಿನ್ನಕ್ಕಾಗಿ ಹುಡುಕಾಟ, ಕಡಲ ತೀರದಲ್ಲಿ ನಿಜಕ್ಕೂ ಗೋಲ್ಡ್‌ ಸಿಗುತ್ತಾ?

ಉಡುಪಿ(ಜು.16):  ಉಡುಪಿಯ ಮಲ್ಪೆ ಬೀಚ್‌ನಲ್ಲಿ ದಿನಬೆಳಗಾದರೆ ನೂರಾರು ಜನ ಚಿನ್ನದ ಹುಡುಕಾಟ ನಡೆಸುತ್ತಿದ್ದಾರೆ. ಅಲೆಗಳು ತಂದು ಹಾಕಿದ ಕಸದ ನಡುವೆ, ಚಿನ್ನದ ಆಭರಣಗಳು ಸಿಗುತ್ತೆ ಅನ್ನೋ ಆಸೆಯೊಂದಿಗೆ ದಿನವೂ ಚಿನ್ನದ ಬೇಟೆಯಾಡುತ್ತಾರೆ!   ಮಳೆಗಾಲ ಕರಾವಳಿಯ ಚಿತ್ರಣವನ್ನೇ ಬದಲಿಸಿ ಬಿಡುತ್ತದೆ. ಸಮುದ್ರದ ಅಲೆಗಳಂತೂ ಹೊಸ ಅಬ್ಬರದೊಂದಿಗೆ ತೀರ ಪ್ರದೇಶಕ್ಕೆ ಅಪ್ಪಳಿಸುತ್ತವೆ. ಈ ವೇಳೆ  ಕಡಲ ಅಡಿಯಲಿದ್ದ ಕಸದ ರಾಶಿ ತೀರ ಪ್ರದೇಶಕ್ಕೆ ಬಂದು ಬೀಳೋದು ಸಾಮಾನ್ಯ!  

ವಿಶ್ವ ಪ್ರಸಿದ್ಧ ಮಲ್ಪೆ ಬೀಚ್‌ಗೆ ಈಗೊಮ್ಮೆ ಬಂದು ನೋಡಿ, ಎಲ್ಲಿ ನೋಡಿದರೂ ಲೋಡುಗಟ್ಟಲೆ ಕಸದ ರಾಶಿ. ಆದರೆ ಈ ಕಸದ ನಡುವೆ, ಅಪರೂಪಕಮ್ಮೆ ಚಿನ್ನವೂ  ಸಿಗುತ್ತೆ! ಇದೇ ಆಸೆಯಲ್ಲಿ ಕಡಲ ತಡಿಯ ಜನ ಕಸದಿಂದ ರಸ ಹುಡುಕುವ ಕೆಲಸ ಮಾಡುತ್ತಿರುತ್ತಾರೆ.

ಇಷ್ಟಕ್ಕೂ ಚಿನ್ನ ಬರೋದು ಎಲ್ಲಿಂದ?

ಸಮುದ್ರ ತನ್ನ ಒಡಲಲ್ಲಿ ಏನನ್ನೂ ಇರಿಸಿಕೊಳ್ಳುವುದಿಲ್ಲ ಅನ್ನೋ ಮಾತಿದೆ. ಅದರಂತೆ ನಾವು ಸಮುದ್ರಕ್ಕೆ ಹಾಕಿದ ಕಸವೆಲ್ಲ ತೀರಪ್ರದೇಶಕ್ಕೆ ಬಂದು ಬೀಳೋದು ಸಾಮಾನ್ಯ. ಅದೇ ರೀತಿ ಲಕ್ಷಾಂತರ ಜನರು ಭೇಟಿ ಕೊಡುವ ಮಲ್ಪೆ ಸಮುದ್ರದಲ್ಲಿ, ಈಜಾಟ ಮೋಜು-ಮಸ್ತಿಯ ವೇಳೆ ಅನೇಕ ಮಂದಿ ತಮ್ಮ ಚಿನ್ನಾಭರಣ ಕಳೆದುಕೊಳ್ಳುತ್ತಾರೆ. ಹೀಗೆ ಕಳೆದು ಹೋದ ಚಿನ್ನದ ಆಭರಣಗಳು ಕಡಲ ಅಡಿ ಸೇರುತ್ತಂತೆ.

ಮಳೆಗಾಲದಲ್ಲಿ ತೂಫಾನ್ ಎದ್ದಾಗ, ಕಡಲು ಅಡಿಮೇಲಾಗುತ್ತದೆ. ಆಳದಲ್ಲಿರುವ ವಸ್ತುಗಳೆಲ್ಲ ಮೇಲಕ್ಕೆ ತೇಲಿ ಬರುತ್ತವೆ. ಹೀಗೆ ಕಸದರಾಶಿಯೇ ಸಮುದ್ರ ಬದಿಗೆ ಬಂದು ಬೀಳುತ್ತದೆ. ಕಸದ ಜೊತೆ ಕಡಲು ಪಾಲಾದ ಚಿನ್ನಾಭರಣಗಳು ಕೂಡ ತೀರ ಪ್ರದೇಶಕ್ಕೆ ತೇಲಿ ಬರುತ್ತಂತೆ. ಈ ರೀತಿ ಹುಡುಕಾಟ ನಡೆಸಿದ ಕೆಲವರಿಗೆ ಅಪರೂಪಕ್ಕೊಮ್ಮೆ ಚಿನ್ನದ ಆಭರಣ ಸಿಕ್ಕಿದ್ದೂ ಇದೆಯಂತೆ. 

ಯಾರಿಗಾದರೂ ಚಿನ್ನ ಸಿಕ್ಕಿದೆಯೋ ಇಲ್ಲವೋ ಗೊತ್ತಿಲ್ಲ! ಜನರಂತೂ ಕಳೆದ ಅನೇಕ ವರ್ಷಗಳಿಂದ ಮಳೆಗಾಲದಲ್ಲಿ ಚಿನ್ನದ ಭೇಟಿ ನಡೆಸುತ್ತಲೇ ಇದ್ದಾರೆ. ಕಡಲಲ್ಲಿ ತೂಫಾನ್ ಎದ್ದರೆ ಸಾಕು; ಅನೇಕ ಮಂದಿ ಬೀಚ್‌ನಲ್ಲಿ ಹುಡುಕಾಟ ಆರಂಭಿಸುತ್ತಾರೆ. ಈ ರೀತಿ ಹುಡುಕಾಟ ನಡೆಸಿದ ಯಾರು ಕೂಡ ನಮಗೆ ಚಿನ್ನ ಸಿಕ್ಕಿದೆ ಎಂದು ಹೇಳಿಲ್ಲ. ಹಾಗಂತ ಚಿನ್ನದ ಹುಡುಕಾಟವೇನೂ ನಿಂತಿಲ್ಲ. ಈಗಲೂ ದಿನ ಬೆಳಗಾದರೆ ಜನ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ. ಇಂದಲ್ಲ ನಾಳೆ ಚಿನ್ನ ಸಿಕ್ಕೇ ಸಿಗುತ್ತೆ ಎಂದು ಹುಡುಕಾಟ ನಡೆಸುತ್ತಾರೆ.

ಮಲ್ಪೆ ಬೀಚ್‌ಗೆ ನಿರ್ಬಂಧ

ಮಳೆಗಾರದಲ್ಲಿ ಮಲ್ಪೆ ಕಡಲು ಅಪಾಯಕಾರಿಯಾಗಿ ವರ್ತಿಸುತ್ತದೆ. ಹಾಗಾಗಿ ಯಾವುದೇ ಪ್ರವಾಸಿಗರೂ ಇಲ್ಲಿ ಭೇಟಿ ನೀಡಿದಂತೆ ಸಮುದ್ರದ ಉದ್ದಕ್ಕೂ ಬಲೆಯ ಬೇಲಿ ಹಾಕಲಾಗಿದೆ. ಬಲೆಯ ಹೊರಮಗ್ಗಲಲ್ಲಿ ನಿಂತು ಸಮುದ್ರವನ್ನು ನೋಡಬೇಕು. ಹಾಗಾಗಿ ಚಿನ್ನ ಸಿಗುತ್ತೆ ಅಂತ ಯಾರೂ ಮಲ್ಪೆ ಬೀಚ್‌ಗೆ ಬರೋದಕ್ಕೆ ಹೋಗಬೇಡಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್‌ ಚಂಡಮಾರುತದ ಪರಿಣಾಮ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist