ಶುಕ್ರವಾರ, ಮೇ 17, 2024
ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!-ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ರೇವಣ್ಣ ಪ್ಲೈಟ್ ಹತ್ತದೆ ಮತ್ತೆ ವಿದೇಶದಲ್ಲಿ; ಎಸ್ಐಟಿ ಮುಂದಿನ ನಡೆ ಏನು.?-ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೇಸ್‌ಬಾಲ್‌ ಬ್ಯಾಟ್‌ನಲ್ಲಿ ತಲೆಗೆ ಹೊಡೆದು ನಟಿ ವೀಣಾ ಕಪೂರ್‌ ಕೊಲೆ ಮಾಡಿದ ಪುತ್ರ!

Twitter
Facebook
LinkedIn
WhatsApp
ಬೇಸ್‌ಬಾಲ್‌ ಬ್ಯಾಟ್‌ನಲ್ಲಿ ತಲೆಗೆ ಹೊಡೆದು ನಟಿ ವೀಣಾ ಕಪೂರ್‌ ಕೊಲೆ ಮಾಡಿದ ಪುತ್ರ!

ನವದೆಹಲಿ (ಡಿ. 10): ಹಿರಿಯ ನಟಿ ಬಹು ವರ್ಷಗಳ ಕಾಲ ಟಿವಿ ಧಾರವಾಹಿಗಳ ಮೂಲಕ ಜನರನ್ನು ರಂಜಿಸಿದ್ದ ವೀಣಾ ಕಪೂರ್‌ ಹತ್ಯೆಯಾಗಿದೆ. ಮುಂಬೈನಲ್ಲಿ ಆಸ್ತ ವಿಚಾರವಾಗಿ ನಡೆದ ಗಲಾಟೆಯಲ್ಲಿ ಸ್ವತಃ ಪುತ್ರನೇ ವೀಣಾ ಕಪೂರ್‌ ಅವರನ್ನು ದಾರುಣವಾಗಿ ಕೊಲೆ ಮಾಡಿದ ಘಟನೆ ನಡೆದಿದೆ.  ವಿಲೆ ಪಾರ್ಲೆ ಪ್ರದೇಶದಲ್ಲಿ ಈ ಬರ್ಬರ ಕೃತ್ಯ ವರದಿಯಾಗಿದ್ದು, ಆಸ್ತಿ ವಿವಾದದ ವಿಚಾರವಾಗಿ ಸಿಟ್ಟಾಗಿದ್ದ ಆಕೆಯ ಪುತ್ರ, ಬೇಸ್‌ಬಾಲ್‌ ಬ್ಯಾಟ್‌ನಿಂದ ಆಕೆಯ ತಲೆಗೆ ಹೊಡೆದು ಸಾಯಿಸಿದ್ದಾರೆ. ಬಳಿಕ ಆಕೆಯ ಶವವನ್ನು ಸಮೀಪದ ನದಿಯಲ್ಲಿ ಎಸೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಜುಹು ಪೊಲೀಸ್‌ ಈಗಾಗಲೇ ಆರೋಪಿಯಾಗಿರುವ ಪುತ್ರ 43 ವರ್ಷದ ಸಚಿನ್‌ ಕಪೂರ್‌ರನ್ನು ಬಂಧಿಸಿದ್ದಾರೆ. ಅದರೊಂದಿಗೆ ಮನೆಯ ಕೆಲಸಗಾರನಾಗಿದ್ದ 25 ವರ್ಷದ ಚೋಟು ಅಲಿಯಾಸ್‌ ಲಾಲುಕುಮಾರ್ ಮಂಡಲ್‌ನಲ್ಲಿ ಬಂಧನ ಮಾಡಿದ್ದಾರೆ. ಪೊಲೀಸರ ಪ್ರಕಾರ, ಮಂಗಳವಾರ ರಾತ್ರಿ, ಕಲ್ಪತರು ಸೊಸೈಟಿಯ ಭದ್ರತಾ ಮೇಲ್ವಿಚಾರಕರು ಜುಹು ಪೊಲೀಸರನ್ನು ಸಂಪರ್ಕಿಸಿ, ವೃದ್ಧೆ ವೀಣಾ ಕಪೂರ್ ನಾಪತ್ತೆಯಾಗಿದ್ದಾರೆ ಎಂದು ತಿಳಿಸಿದ್ದರು.

ಬೇಸ್‌ಬಾಲ್‌ ಬ್ಯಾಟ್‌ನಲ್ಲಿ ತಲೆಗೆ ಹೊಡೆದು ನಟಿ ವೀಣಾ ಕಪೂರ್‌ ಕೊಲೆ ಮಾಡಿದ ಪುತ್ರ!

ದೂರಿನ ಆಧಾರದ ಮೇಲೆ, ಪೊಲೀಸರು ತನಿಖೆಯನ್ನು ಪ್ರಾರಂಭಿಸಿದರು, ಮೃತ ವೀಣಾ ಕಪೂರ್ ಅವರ ಮೊಬೈಲ್ ಸ್ಥಳವು ಅವರ ಕಟ್ಟಡದ ಬಳಿ ದೊರೆತಿದ್ದರೆ, ಅವರ ಮಗನ ಸ್ಥಳ ಪನ್ವೇಲ್‌ನಲ್ಲಿ ದಾಖಲಾಗಿತ್ತು. ಮರುದಿನ ಪೊಲೀಸರು ಸಚಿನ್‌ ಕಪೂರ್‌ ಮತ್ತು ಆತನ ಸೇವಕನನ್ನು ಠಾಣೆಗೆ ಕರೆಸಿ ಕಟ್ಟುನಿಟ್ಟಾಗಿ ವಿಚಾರಣೆ ನಡೆಸಿದಾಗ ಇಬ್ಬರೂ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ.

ವಿಚಾರಣೆ ವೇಳೆ ಆರೋಪಿ ಸಚಿನ್ ಕಪೂರ್ ತನ್ನ ತಾಯಿಯ ತಲೆಗೆ ಬೇಸ್‌ಬಾಲ್ ಬ್ಯಾಟ್‌ನಿಂದ ಹಲವು ಬಾರಿ ಹೊಡೆದಿದ್ದಾಗಿ ಹೇಳಿದ್ದಾನೆ. ಆ ಕ್ಷಣದಲ್ಲಿ ಬಂದ ಕೋಪದಿಂದ ನಾನು ತಾಯಿಯನ್ನು ಕೊಂದಿದ್ದಾಗಿ ಬಹಿರಂಗಪಡಿಸಿದ್ದಾರೆ. ತನ್ನ ಹಾಗೂ ತಾಯಿಯ ನಡುವೆ ಆಸ್ತಿಯ ವಿಚಾರವಾಗಿ ಯಾವಾಗಲೂ ಗಲಾಟೆ ನಡೆಯುತ್ತಿತ್ತು ಎಂದು ಆತ ತಿಳಿಸಿದ್ದು, ಆಕೆ ಸಾವು ಕಂಡ ಬಳಿಕ ಶವವನ್ನು ರಾಯಗಢ್‌ ಜಿಲ್ಲೆಯಲ್ಲಿ ನದಿಯಲ್ಲಿ ಎಸೆದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ.

ಮಹಿಳೆಯ ಹಿರಿಯ ಮಗ ಅಮೆರಿಕದಲ್ಲಿ ನೆಲೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪೊಲೀಸರು ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 302,201 ಮತ್ತು 34 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ