ಸೋಮವಾರ, ಮೇ 20, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಧಾರವಾಡ: ಸೀಟ್‌ ಬೆಲ್ಟ್‌ ಧರಿಸದೆ ಇಬ್ಬರು ಸ್ನೇಹಿತರು ಸಾವು

Twitter
Facebook
LinkedIn
WhatsApp
ಧಾರವಾಡ: ಸೀಟ್‌ ಬೆಲ್ಟ್‌ ಧರಿಸದೆ ಇಬ್ಬರು ಸ್ನೇಹಿತರು ಸಾವು

ಅಳ್ನಾವರ(ಸೆ.15):  ಕಾರಿನ ಸೀಟ್‌ ಬೆಲ್ಟ್‌ ಹಾಕಿದ್ದಕ್ಕೆ ನನ್ನ ಜೀವ ಉಳೀತು. ಇಲ್ಲ ಅಂದಿದ್ದರೆ ನನ್ನ ಇಬ್ಬರು ಸ್ನೇಹಿತರಿಗಿಂತ ಮೊದಲು ನನ್ನ ಪ್ರಾಣವೇ ಹೋಗತ್ತಿತ್ತು. ನನ್ನ ಗೆಳೆಯರಿಬ್ಬರು ಮೃತರಾಗಿದ್ದು ಇಂದಿಗೂ ದುಃಖ ನೀಡುತ್ತಿದೆ.
ಸೀಟ್‌ ಬೆಲ್ಟ್‌, ಹೆಲ್ಮೆಟ್‌ನ ಮಹತ್ವದ ಬಗ್ಗೆ ಹಲವಾರು ಬಾರಿ ಓದಿದ್ದೆ, ಸಾಮಾಜಿಕ ಜಾಲತಾಣದಲ್ಲೂ ಅರಿವು ಮೂಡಿಸಲಾಗುತ್ತಿದೆ. ಆದರೆ ಪದೇ ಪದೇ ಪ್ರಜ್ಞಾವಂತ, ವಿದ್ಯಾವಂತ ಜನರೇ ಸೀಟ್‌ ಬೆಲ್ಟ್‌ ಧರಿಸದೇ ವಾಹನ ಚಲಾಯಿಸುವುದರಿಂದ ಅವಘಡ ಸಂಭವಿಸಿದಾಗ ಪ್ರಾಣ ಹೋಗುತ್ತಿದೆ. ಕಾರ್‌ ಅಪಘಾತದಲ್ಲಿ ಸೀಟ್‌ ಬೆಲ್ಟ್‌ ಧರಿಸಿದ್ದ ನಾನೂ ಸೇರಿದಂತೆ ಮೂವರು ಉಳಿದೆವು. ನಮ್ಮ ಪ್ರಾಣ ಸ್ನೇಹಿತರಿಬ್ಬರು ಮೃತರಾದರು. ಎರಡು ತಿಂಗಳ ಹಿಂದೆ ಅಳ್ನಾವರ ಸಮೀಪದ ಗೋವಾ ರಸ್ತೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ತನ್ನ ಸ್ನೇಹಿತರನ್ನು ಕಳೆದುಕೊಂಡ ಪ್ರೇಮನಾಥ ಪಾಲಕರ ಮಾತಿದು.

ಧಾರವಾಡ: ಸೀಟ್‌ ಬೆಲ್ಟ್‌ ಧರಿಸದೆ ಇಬ್ಬರು ಸ್ನೇಹಿತರು ಸಾವು

ಈ ದುರಂತದಲ್ಲಿ ನನ್ನ ಬಾಲ್ಯ ಗೆಳೆಯ, ಪ್ರಾಣ ಸ್ನೇಹಿತ ವಿಠ್ಠಲ ಕಾಕಡೆ (27), ಅಳ್ನಾವರದ ಸಾಗರ ಬೀಡಿಕರ (28) ಸಾವನ್ನಪ್ಪಿದರು. ಅವರು ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸಾಗರ ಬೀಡಿಕರ ಹೊಸದಾಗಿ ಟಾಟಾ ನೆಕ್ಸಾನ್‌ ಖರೀದಿಸಿ ತಿಂಗಳಾಗಿತ್ತು. ವರ್ಕ್ ಫ್ರಂ ಹೋಂ ಹಿನ್ನೆಲೆಯಲ್ಲಿ ಮನೆಯಲ್ಲಿ ಕೆಲಸ ಮಾಡುತ್ತಿದ್ದ. ಹೀಗೆ ಒಂದು ದಿನ ಲಾಂಗ್‌ ಡ್ರೈವ್‌ ಹೋಗಲು ತೀರ್ಮಾನಿಸಿದ್ದೆವು. ಐವರು ಗೋವಾ ರಸ್ತೆಯಲ್ಲಿ ಹೋಗುತ್ತಿದ್ದೆವು. ಚಾಲಕ ಹಾಗೂ ಪಕ್ಕದ ಸೀಟ್‌ನಲ್ಲಿ ಮೃತರಾದ ಸ್ನೇಹಿತರು ಕುಳಿತಿದ್ದರು. ಇಬ್ಬರೂ ಸೀಟ್‌ ಬೆಲ್ಟ್‌ ಹಾಕಿರಲಿಲ್ಲ. ಹೀಗಾಗಿ ಅಪಘಾತವಾದಾಗ ಏರ್‌ಬ್ಯಾಗ್‌ ತೆರೆದುಕೊಳ್ಳದೆ ಗಂಭೀರ ಗಾಯಗೊಂಡು ಕಣ್ಣೆದುರೆ ಅಸುನೀಗಿದರು. ನಾನು ಚಾಲಕನ ಹಿಂಬದಿ ಸೀಟ್‌ ಬೆಲ್ಟ್‌ ಧರಿಸಿ ಕುಳಿತಿದ್ದರಿಂದ ಸಣ್ಣಪುಟ ಗಾಯಗಳು ಮಾತ್ರ ಆಗಿವೆ. ನನ್ನ ಕಣ್ಣೆದುರಿಗೇ ಪ್ರಾಣ ಸ್ನೇಹಿತರಿಬ್ಬರನ್ನು ಸಣ್ಣ ನಿರ್ಲಕ್ಷ್ಯದಿಂದ ಕಳೆದುಕೊಳ್ಳಬೇಕಾಯಿತು.

ಧಾರವಾಡ: ಸೀಟ್‌ ಬೆಲ್ಟ್‌ ಧರಿಸದೆ ಇಬ್ಬರು ಸ್ನೇಹಿತರು ಸಾವು

ಇನ್ನಿಬ್ಬರಿಗೆ ಸಹ ಸಣ್ಣಪುಟ್ಟಗಾಯಗಳಾಗಿವೆ. ಸವಾರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಮಾತ್ರ ಸೀಟ್‌ಬೆಲ್ಟ್‌ ಮತ್ತು ಹೆಲ್ಮೇಟ್‌ ಧರಿಸುತ್ತಾರೆ. ಆದರೆ, ಅವುಗಳೇ ನಮ್ಮ ಪ್ರಾಣ ಕಾಪಾಡುತ್ತವೆ ಎಂಬುದಕ್ಕೆ ನಾನೇ ಸಾಕ್ಷಿ. ಆದರಿಂದ ಪ್ರತಿಯೊಬ್ಬರು ಸೀಟ್‌ ಬೆಲ್ಟ್‌, ಹೆಲ್ಮೇಟ್‌ ಧರಿಸಿ. ನಾನು ನನ್ನ ಸ್ನೇಹಿತರನ್ನು ಕಳೆದುಕೊಂಡಿದ್ದೇನೆ. ಇಂತಹ ಯಾತನೆ ಮತ್ತ್ಯಾರಿಗೂ ಬರುವುದು ಬೇಡ ಎನ್ನುವಾಗ ಮಾತು ಗದ್ಗದಿತವಾಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ