ಭಾನುವಾರ, ಫೆಬ್ರವರಿ 23, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ವಿಶ್ವಕಪ್ 2023: ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಮ್ಯಾನೇಜರ್‌ ಆಗಿ ಕಾರ್ಯ ನಿರ್ವಹಿಸಿದ ಮಂಗಳೂರಿನ ಕಿನ್ನಿಗೋಳಿ ಯುವತಿ!

Twitter
Facebook
LinkedIn
WhatsApp
ವಿಶ್ವಕಪ್ 2023: ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಮ್ಯಾನೇಜರ್‌ ಆಗಿ ಕಾರ್ಯ ನಿರ್ವಹಿಸಿದ ಮಂಗಳೂರಿನ ಕಿನ್ನಿಗೋಳಿ ಯುವತಿ!

ಮಂಗಳೂರು: ಆತಿಥೇಯ ಭಾರತವನ್ನು ಮಣಿಸಿ 6ನೇ ಬಾರಿ ವಿಶ್ವಕಪ್‌ ಟ್ರೋಫಿ ತನ್ನದಾಗಿಸಿಕೊಂಡ ಆಸ್ಟ್ರೇಲಿಯ ತಂಡದ ಯಶಸ್ಸಿನಲ್ಲಿ ಕರಾವಳಿ ಮೂಲದ ಯುವತಿಯೊಬ್ಬರು ಮಹತ್ವದ ಪಾತ್ರ ವಹಿಸಿರುವ ಸುದ್ದಿ ರೋಮಾಂಚನ ಮೂಡಿಸಿದೆ.

ಮಂಗಳೂರಿನ ಕಿನ್ನಿಗೋಳಿ ಸಮೀ ಪದ ಐವಿ ಮತ್ತು ವ್ಯಾಲೆಂಟೈನ್‌ ರೊಸಾ ರಿಯೊ ದಂಪತಿ ಪುತ್ರಿ ಊರ್ಮಿಳಾ ರೊಸಾರಿಯೊ ಅವರು ಆಸ್ಟ್ರೇಲಿಯ ಕ್ರಿಕೆಟ್‌ ತಂಡದ ಮ್ಯಾನೇಜರ್‌ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಬಾಲ್ಯ ದಿಂದಲೇ ಕ್ರೀಡಾಕ್ಷೇತ್ರದತ್ತ ಆಸಕ್ತಿ ಹೊಂದಿದ್ದ ಊರ್ಮಿಳಾ ಅವರು ಈ ಹಿಂದೆ ಕತಾರ್‌ ಟೆನಿಸ್‌ ಫೆಡರೇಷನ್‌ನಲ್ಲಿ 3 ವರ್ಷಗಳ ಕಾಲ ಕೆಲಸ ನಿರ್ವಹಿಸಿದ್ದರು. 

ಬಳಿಕ ಆಸ್ಟ್ರೇಲಿಯದ ಅಡಿಲೇಡ್‌ ಕ್ರಿಕೆಟ್‌ ತಂಡದೊಂದಿಗೆ ಸುಮಾರು 3 ವರ್ಷಗಳ ಕಾಲ ಕೆಲಸ ನಿರ್ವಹಿಸಿದರು. ಬಳಿಕ ಆಸ್ಟ್ರೇಲಿಯ ಮಹಿಳಾ ಕ್ರಿಕೆಟ್‌ ತಂಡದ ಮ್ಯಾನೇಜರ್‌ ಆಗಿ ಆಯ್ಕೆಗೊಂಡರು. ಕಳೆದ ಸೆಪ್ಟೆಂಬರ್‌ ತಿಂಗಳಿನಿಂದ ಆಸ್ಟ್ರೇಲಿಯ ಪುರುಷ ಕ್ರಿಕೆಟ್‌ ತಂಡದ ಹೊಣೆ ಹೊತ್ತಿದ್ದಾರೆ.

ಹೀಗೆ ಆಸ್ಟ್ರೇಲಿಯ ತಂಡ ವಿಶ್ವಕಪ್‌ ಗೆಲ್ಲುವಲ್ಲಿ ಕರಾವಳಿಯ ಊರ್ಮಿಳಾ ರೊಸಾರಿಯೊ ಅವರ ಪಾಲೂ ಇದೆ ಎನ್ನುವುದು ಖುಷಿಯ ಸಂಗತಿ.

Billiards: ಪಂಕಜ್‌ ಆಡ್ವಾಣಿಗೆ 26ನೇ ವಿಶ್ವ ಬಿಲಿಯರ್ಡ್ಸ್‌ ಕಿರೀಟ

ದೋಹಾ: ಪಂಕಜ್‌ ಆಡ್ವಾಣಿ 26ನೇ ಬಾರಿಗೆ ಐಬಿಎಸ್‌ಎಫ್ ವರ್ಲ್ಡ್ ಬಿಲಿಯರ್ಡ್ಸ್‌ ಚಾಂಪಿ ಯನ್‌ಶಿಪ್‌ ಪ್ರಶಸ್ತಿಯನ್ನು ತಮ್ಮ ದಾಗಿಸಿಕೊಂಡಿದ್ದಾರೆ. ಮಂಗಳವಾರದ ಫೈನಲ್‌ನಲ್ಲಿ ಅವರು ಭಾರತದವರೇ ಆದ ಸೌರವ್‌ ಕೊಠಾರಿ ವಿರುದ್ಧ 1000-416 ಅಂಕಗಳ ಜಯ ಸಾಧಿಸಿದರು.

ಮೊದಲ ಗಂಟೆಯ ಸ್ಪರ್ಧೆಯಲ್ಲಿ ಪಂಕಜ್‌ ಆಡ್ವಾಣಿ 26-180 ಅಂಕಗಳ ಹಿನ್ನಡೆಯಲ್ಲಿದ್ದರು. ಬಳಿಕ ಹಿಡಿತ ಸಾಧಿಸತೊಡಗಿದರು. ಕಳೆದ ವರ್ಷದ ಕೌಲಾಲಂಪುರ ಫೈನಲ್‌ನ “ರೀ ಮ್ಯಾಚ್‌’ ಇದಾಗಿತ್ತು. ಸೌರವ್‌ ಕೊಠಾರಿ 2018ರಲ್ಲಿ ವಿಶ್ವ ಚಾಂಪಿಯನ್‌ ಪ್ರಶಸ್ತಿಗೆ ಭಾಜನರಾಗಿದ್ದರು.

ಸೆಮಿಫೈನಲ್‌ನಲ್ಲಿ ಆಡ್ವಾಣಿ ಮತ್ತು ಕೊಠಾರಿ ಭಾರತದ ಎದುರಾಳಿಗಳನ್ನೇ ಮಣಿಸಿದ್ದು ವಿಶೇಷ. ಕ್ರಮವಾಗಿ ರೂಪೇಶ್‌ ಶಾ ಮತ್ತು ಧ್ರುವ ಸಿತ್ವಾಲಾ ಅವರಿಗೆ ಸೋಲುಣಿಸಿದ್ದರು.
2003ರಿಂದ ಪಂಕಜ್‌ ಆಡ್ವಾಣಿ ಅವರ ವಿಶ್ವ ಪ್ರಶಸ್ತಿ ಗೆಲುವಿನ ಅಭಿಯಾನ ಆರಂಭವಾಗಿತ್ತು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist