ಒಂದೇ ಧರ್ಮವಿದೆ; ಅದು ಸನಾತನ ಧರ್ಮ - ಯೋಗಿ ಆದಿತ್ಯನಾಥ್
ಧರ್ಮ ಇರುವುದೊಂದೇ ಅದು ಸನಾತನ ಧರ್ಮ(Sanatana Dharma) ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath)ಹೇಳಿದ್ದಾರೆ. ಒಂದೇ ಧರ್ಮವಿದೆ, ಅದು ಸನಾತನ ಧರ್ಮ, ಉಳಿದೆಲ್ಲವೂ ಪಂಥಗಳು ಮತ್ತು ಆರಾಧನಾ ವ್ಯವಸ್ಥೆಗಳು ಎಂದು ಹೇಳಿದ್ದಾರೆ. ಗೋರಖ್ಪುರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಿಎಂ ಯೋಗಿ ಅವರು ಸನಾತನ ಧರ್ಮವು ಮಾನವೀಯತೆಯ ಧರ್ಮವಾಗಿದೆ, ಯಾರಾದರೂ ಸನಾತನ ಧರ್ಮದ ಮೇಲೆ ದಾಳಿ ಮಾಡಿದರೆ ಇಡೀ ವಿಶ್ವದ ಮಾನವೀಯತೆ ತೊಂದರೆಗೆ ಒಳಗಾಗುತ್ತದೆ ಎಂದು ಹೇಳಿದ್ದರು.
ಬ್ರಹ್ಮಲಿನ್ ಮಹಂತ್ ದಿಗ್ವಿಜಯ್ನಾಥ್ ಅವರ ಒಂಬತ್ತನೇ ಪುಣ್ಯತಿಥಿ ಮತ್ತು ಬ್ರಹ್ಮಲಿನ್ ಮಹಂತ್ ಅವೇದ್ಯನಾಥ್ ಅವರ ಒಂಬತ್ತನೇ ಪುಣ್ಯತಿಥಿಯಂದು ಗೋರಖನಾಥ ದೇವಸ್ಥಾನದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಬ್ರಹ್ಮಲಿನ್ ಮಹಂತ್ ದಿಗ್ವಿಜಯ್ನಾಥ್ ಮತ್ತು ಬ್ರಹ್ಮಲಿನ್ ಮಹಂತ್ ಅವೇದ್ಯನಾಥ್ ಇಬ್ಬರೂ ಯೋಗಿ ಆದಿತ್ಯನಾಥ್ ಅವರ ಗುರುಗಳು. ಈ ಸಂದರ್ಭದಲ್ಲಿ ಯೋಗಿ ಆದಿತ್ಯನಾಥ್ ಕೂಡ ಸಮಾರಂಭದಲ್ಲಿ ಭಾಗವಹಿಸಿದ್ದರು.
ಸನಾತನ ಧರ್ಮದ ಮಹತ್ವವನ್ನು ವಿವರಿಸಿದ ಅವರು, ‘ಸನಾತನ ಧರ್ಮವು ಮಾನವೀಯತೆಯ ಧರ್ಮವಾಗಿದ್ದು, ಸನಾತನ ಧರ್ಮದ ಮೇಲೆ ದಾಳಿಯಾದರೆ ಅದು ಇಡೀ ವಿಶ್ವದ ಮಾನವೀಯತೆಗೆ ಬಿಕ್ಕಟ್ಟು ತರುತ್ತದೆ’ ಎಂದು ಹೇಳಿದರು.
ಶ್ರೀಮದ್ ಭಾಗವತದ ಸಾರವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ, ಅದನ್ನು ಅರ್ಥಮಾಡಿಕೊಳ್ಳಲು ಆಲೋಚನೆಗಳ ಸಂಕುಚಿತತೆ ಇರಬಾರದು ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದರು. ಸಣ್ಣ ಮತ್ತು ಸಂಕುಚಿತ ಮನಸ್ಸಿನ ಜನರು ಶ್ರೀಮದ್ ಭಾಗವತದ ಅಗಾಧತೆಯನ್ನು ಎಂದಿಗೂ ನೋಡಲಾಗುವುದಿಲ್ಲ. ಏಳು ದಿನಗಳ ಕಾಲ ನಡೆದ ಶ್ರೀಮದ್ ಭಗವತ್ ಕಥಾ ಜ್ಞಾನ ಯಾಗದಲ್ಲಿ ಇಲ್ಲಿ ಉಪಸ್ಥಿತರಿರುವ ಎಲ್ಲ ಭಕ್ತರು ಶ್ರದ್ಧಾ ಭಕ್ತಿಯಿಂದ ಪಾಲ್ಗೊಂಡು ಕಥೆಯನ್ನು ಆಲಿಸಿದರು.
ಉದಯನಿಧಿ ಸ್ಟಾಲಿನ್ ಹೇಳಿಕೆ
ಸನಾತನ ಧರ್ಮ ಎಂಬುದು ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್ ಟೀಕಿಸಿದ್ದರು. ಹೇಗೆ ಈ ರೋಗಗಳ ವಿರುದ್ಧ ಹೋರಾಡಲು ಸಾಧ್ಯವಿಲ್ಲವೂ ಅದನ್ನು ಬುಡಸಮೇತ ನಿರ್ಮೂಲನೆ ಮಾಡಬೇಕೋ ಹಾಗೆಯೇ ಸನಾತನ ಧರ್ಮವನ್ನು ವಿರೋಧಿಸಿ ಪ್ರಯೋಜನವಿಲ್ಲ ಅದನ್ನು ಇಲ್ಲದಂತೆ ಮಾಡಬೇಕು ಎಂದು ಹೇಳಿದ್ದರು. ಈ ಹೇಳಿಕೆಯು ದೇಶಾದ್ಯಂತ ಗದ್ದಲವನ್ನು ಸೃಷ್ಟಿ ಮಾಡಿತ್ತು.