Gejjegiri: ದ.ಕನ್ನಡ ಜಿಲ್ಲೆಗೆ ಸಚಿವರಾಗಿ ಆಗಮಿಸಿದ ದಿನವೇ ಗೆಜ್ಜೆಗಿರಿಗೆ ಭೇಟಿ ನೀಡಿದ ಸಚಿವ ಮಧು ಬಂಗಾರಪ್ಪ

Gejjegiri ಪುತ್ತೂರು: ಸಚಿವನಾಗಿ ತುಳುನಾಡಿನ ಈ ಮಣ್ಣಿಗೆ ಆಗಮಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ (Primary and Secondary Education) ಸಚಿವ ಮಧು ಬಂಗಾರಪ್ಪ (Madhu Bangarappa) ನೇರವಾಗಿ ಗೆಜ್ಜೆ ಗಿರಿಗೆ (Gejjegiri) ಆಗಮಿಸಿದ್ದಾರೆ.
ವಿಮಾನ ನಿಲ್ಧಾನದಲ್ಲಿ ನನಗೆ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ (Gejjegiri) ಶಿಲಾನ್ಯಾಸ ಸಂಧರ್ಭದಲ್ಲಿ ನಾನು ಶಿಲಾನ್ಯಾಸ ಕ್ಕೆ ಹಾಲು ಹಾಕಿದ ಬಗ್ಗೆ ನೆನಪಾಯಿತು, ಈ ದಿನವೇ ನಾನು ಗೆಜ್ಜೆಗಿರಿಗೆ ಹೋಗಬೇಕು ಎಂಬ ಪ್ರೇರಣೆ ಆಕಾಂಕ್ಷೆ ನನ್ನ ಮನದಾಳದಲ್ಲಿ ಮೂಡಿತು, ಕೂಡಲೇ ನನ್ನವರಲ್ಲಿ ಈ ವಿಷಯ ಪ್ರಸ್ತಾಪಿಸಿದೆ ಮತ್ತು ಗೆಜ್ಜೆಗಿರಿಗೆ ಹೋಗಲು ತೀರ್ಮಾನಿಸಿದೆ. ನನ್ನ ತಂದೆ ಬಂಗಾರಪ್ಪ (Bangarappa) ರವರನ್ನು ಪ್ರೀತಿಸುವ ಅದೆಷ್ಟೋ ಹೃದಯಗಳು ಇಲ್ಲಿ ಇವೆ ಎಂದು ಸಂತೋಷ ವ್ಯಕ್ತಪಡಿಸಿದ್ದಾರೆ ಸಚಿವ ಮಧು ಬಂಗಾರಪ್ಪ (Madhu Bangarappa).
ಕ್ಷೇತ್ರಾಡಳಿತ ಸಮಿತಿ ಶ್ರೀ ನಾರಾಯಣ ಗುರು (Sree Narayana Guru) ನಿಗಮಸ್ಥಾಪನೆ ಮತ್ತು ಅದಕ್ಕೆ ಹಣ ಮೀಸಲು ಇಡುವ ಬಗ್ಗೆ ಹಾಗೂ ಕ್ಷೇತ್ರಾಭಿವೃದ್ಧಿಯ ಮನವಿಗೆ ಪೂರಕವಾಗಿ ಸ್ಪಂದಿಸಿದರು. ಗೆಜ್ಜೆಗಿರಿಯಲ್ಲಿ ವಿಶೇಷ ಪ್ರಾರ್ಥನೆ ಯನ್ನು ಸಲ್ಲಿಸಿದರು. ಗೆಜ್ಜೆಗಿರಿಯಲ್ಲಿ (Gejjegiri) ವಿಶೇಷ ಪ್ರಾರ್ಥನೆ ಯನ್ನು ಸಲ್ಲಿಸಿದರು. ಈ ಕ್ಷೇತ್ರ ಒಂದು ವಿಶೇಷ ಕ್ಷೇತ್ರವಾಗಿದ್ದು, ಇದರ ಅಭಿವೃದ್ಧಿಗೆ ನಾನು ಸಹಕಾರ ಒದಗಿಸುವುದಾಗಿ ಈ ಸಂದರ್ಭದಲ್ಲಿ ಅವರು ನುಡಿದಿದ್ದಾರೆ. ಸತ್ಯ ಧರ್ಮ, ನ್ಯಾಯಕ್ಕೆ ಹೆಸರುವಾಸಿಯಾದ ಕೋಟಿ ಚೆನ್ನಯ್ಯರ (Koti and Chennayya) ಆದರ್ಶ ಪರಂಪರೆ ಬಿಂಬಿಸುವ ಸುಮಾರು 550 ವರ್ಷಗಳ (years) ಇತಿಹಾಸ (History) ವನ್ನು ತಿಳಿಸುವ ಈ ಕ್ಷೇತ್ರ ನಾನು ಭಕ್ತಿಯಿಂದ ನೆನೆಯುವ ಕ್ಷೇತ್ರ ಇದು ಎಂದು ಅಭಿಪ್ರಾಯ ಪಟ್ಟಿದ್ದಾರೆ. ಶಿಲಾನ್ಯಾಸ (Foundation stone) ಸಂದರ್ಭದಲ್ಲಿ ಕ್ಷೇತ್ರಕ್ಕೆ ಆಗಮಿಸಿ ಶಿಲಾನ್ಯಾಸವನ್ನು ನೆರವೇರಿಸಿದ ನೆನಪುಗಳನ್ನು ಅವರು ಈ ಸಂದರ್ಭದಲ್ಲಿ ಹಂಚಿಕೊಂಡರು.
ಈ ಸಂದರ್ಭದಲ್ಲಿ ಪುತ್ತೂರು (Puttur) ಶಾಸಕರಾದ ಅಶೋಕ್ ಕುಮಾರ್ ರೈ (Ashok Kumar Rai), ಕೆಪಿಸಿಸಿ ಸಂಯೋಜಕ ಹೇಮನಾಥ್ ಶೆಟ್ಟಿ ಕಾವು (Hemanath Shetty), ಕ್ಷೇತ್ರದ ಆಡಳಿತ ಸಮಿತಿಯ ಅಧ್ಯಕ್ಷರಾದ ಪಿ೦ತಾಬರ ಹೆರಾಜೆ, ಗೌರವಾಧ್ಯಕ್ಷರಾದ ಜಯಂತ ನಡು ಬೈಲು, ಉಪಾಧ್ಯಕ್ಷ ರವಿ ಚಿಲಿಂಬಿ, ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಹಿರಿಯರಾದ ಶ್ರೀಧರ ಪೂಜಾರಿ, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಕ್ಷೇತ್ರದ ಟ್ರಸ್ಟಿ ಗಳಾದ ಡಾ. ರಾಜಾರಾಮ್, ಕಾನೂನು ಸಲಹೆಗಾರದ ನವನೀತ್.ಡಿ. ಹಿ೦ಗಾಣಿ,
ಕ್ಷೇತ್ರದ ವಕ್ತಾರ ರಾದ ರಾಜೇಂದ್ರ ಚಿಲಿಂಬಿ, ಪುತ್ತೂರು ಬಿಲ್ಲವ ಸಂಘದ ಅಧ್ಯಕ್ಷರಾದ ಸತೀಶ್ ಕೆಡಿಂಜ, ಕ್ಷೇತ್ರದ ಮ್ಯಾನೇಜರ್ ದೀಪಕ್ ಕೋಟ್ಯಾನ್, ನಾರಾಯಣ ಪೂಜಾರಿ ಉಪಸ್ಥಿತರಿದ್ದರು.