ಮಂಗಳವಾರ, ಮೇ 14, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಇಶಾನ್ ಕಿಶಾನ್ ನನ್ನು ಪಂದ್ಯದಿಂದ ಹೊರಗಿಟ್ಟ ವಿಚಾರದಲ್ಲಿ ಬಿಸಿಸಿಐ ವಿರುದ್ಧ ಕಿಡಿಕಾರಿದ ಜಡೇಜಾ..!

Twitter
Facebook
LinkedIn
WhatsApp
ಇಶಾನ್ ಕಿಶಾನ್ ನನ್ನು ಪಂದ್ಯದಿಂದ ಹೊರಗಿಟ್ಟ ವಿಚಾರದಲ್ಲಿ ಬಿಸಿಸಿಐ ವಿರುದ್ಧ ಕಿಡಿಕಾರಿದ ಜಡೇಜಾ..!

ಮುಂಬಯಿ: ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಟಿ20 ಸರಣಿಯ 4ನೇ ಮತ್ತು ಅಂತಿಮ ಪಂದ್ಯದಲ್ಲಿ ಇಶಾನ್​ ಕಿಶನ್​(Ishan Kishan) ಅವರನ್ನು ಆಡುವ ಬಳಗದಿಂದ ಹೊರಗಿಟ್ಟ ವಿಚಾರದಲ್ಲಿ ಟೀಮ್​ ಮ್ಯಾನೆಜ್​ಮೆಂಟ್​ ಮತ್ತು ಬಿಸಿಸಿಐ ವಿರುದ್ಧ ಮಾಜಿ ಆಟಗಾರ ಅಜಯ್​ ಜಡೇಜಾ(Ajay Jadeja) ಕಿಡಿಕಾರಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಅಸಮಧಾನ ಹೊರಹಾಕಿರುವ ಜಡೇಜಾ, “ಎಷ್ಟು ಭಾರತೀಯ ಆಟಗಾರರು ದ್ವಿಶತಕ ಬಾರಿಸಿದ್ದಾರೆ? ಇಶಾನ್ ಕಿಶನ್ ಈ ಕೆಲಸವನ್ನು ಮಾಡಿದ್ದಾರೆ. ಅವರು ತಂಡಕ್ಕಾಗಿ ಆಡಲು ಯಾವಾಗಲೂ ಸಿದ್ಧರಾಗುತ್ತಾರೆ. ಆದರೆ ಅವರನ್ನು ಪದೇಪದೆ ನಿರ್ಲಕ್ಷಿಸಲಾಗುತ್ತಿದೆ. ಏಕದಿನ ವಿಶ್ವಕಪ್​ ಟೂರ್ನಿಯ ಆರಂಭಿಕ 2 ಪಂದ್ಯಗಳಲ್ಲಿ ಅವರು ಅಮೋಘ ಪ್ರದರ್ಶನ ನೀಡಿದ್ದರು. ಬಳಿಕ ಅವರಿಗೆ ಆಡುವ ಅವಕಾಶ ನೀಡಲಿಲ್ಲ. ಕಳೆದ ಎರಡು ವರ್ಷಗಳಲ್ಲಿ ಅವರು ಎಷ್ಟು ಪಂದ್ಯಗಳನ್ನು ಆಡಿದ್ದಾರೆ? ಭಾರತೀಯ ಕ್ರಿಕೆಟ್‌ನ ಈ ಸಮಸ್ಯೆ ಇಂದು ನಿನ್ನೆಯದ್ದಲ್ಲ. ಈ ಪದ್ಧತಿ ಬದಲಾಗುವ ತನಕ ತಂಡ ಪ್ರಗತಿ ಕಾಣದು” ಎಂದು ಜಡೇಜಾ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.

“ಉತ್ತಮ ಫಾರ್ಮ್​ನಲ್ಲಿರುವ ಆಟಗಾರರನ್ನು ಒಂದೆರಡು ಪಂದ್ಯ ಆಡಿಸಿ ಆ ಬಳಿಕ ಕೈಬಿಡುವುದು ಟೀಮ್​ ಇಂಡಿಯಾದ ಕೆಟ್ಟ ಪದ್ಧತಿ. ಈ ಮನಸ್ಥಿತಿ ಬದಲಾಗಬೇಕು. ಸಂಜು ಸ್ಯಾಮ್ಸನ್​ ವಿಚಾರದಲ್ಲಿಯೂ ಇದೇ ಸಂಭವಿಸಿದೆ. ಅವರನ್ನು ಕೂಡ ಕೆಲ ಸರಣಿಗೆ ಆಯ್ಕೆ ಮಾಡಿ ಸೀಮಿತ ಪಂದ್ಯ ಆಡಿಸಿ ಬೆಂಚ್​ ಕಾಯಿಸಿದ್ದನ್ನು ನಾವು ಈಗಾಗಲೇ ಕಂಡಿದ್ದೇವೆ. ಫಾರ್ಮ್​ನಲ್ಲಿ ಇರದ ಆಟಗಾರನ್ನು ಬೆಂಚ್​ ಕಾಯಿಸುವುದರಲ್ಲಿ ಅರ್ಥವಿದೆ. ಈ ನಿಯಮ ಬೇರೆಲ್ಲ ದೇಶದ ಕ್ರಿಕೆಟ್​ ಮಂಡಳಿ ಚಾಚು ತಪ್ಪದೆ ಪಾಲಿಸುತ್ತಿದೆ. ಆದರೆ ಭಾರತೀಯ ಕ್ರಿಕೆಟ್​ ಮಂಡಳಿ ಮಾತ್ರ ತದ್ವಿರುದ್ಧ” ಎಂದು ಜಡೇಜಾ ಅಭಿಪ್ರಾಯಪಟ್ಟಿದ್ದಾರೆ.

ಅಮೋಘ ಬ್ಯಾಟಿಂಗ್​ ಪ್ರದರ್ಶನ

ಇಶಾನ್​ ಅವರು ಆಸೀಸ್​ ವಿರುದ್ಧದ ಮೊದಲ ಪಂದ್ಯದಲ್ಲಿ 39 ಎಸೆತಗಳಲ್ಲಿ 58 ರನ್‌ಗಳ ಆಕರ್ಷಕ ಬ್ಯಾಟಿಂಗ್​ ನಡಸಿದ್ದರು. ದ್ವಿತೀಯ ಪಂದ್ಯದಲ್ಲಿಯೂ ಸ್ಫೋಟಕ ಬ್ಯಾಟಿಂಗ್​ ಮೂಲಕ 32 ಎಸೆತಗಳಲ್ಲಿ 52 ರನ್‌ ಬಾರಿಸಿದ್ದರು. ಆದರೆ ಮೂರನೇ ಟಿ20 ಪಂದ್ಯದಲ್ಲಿ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ದರು. ಇದೊಂದೆ ಕಾರಣಕ್ಕೆ ಅವರನ್ನು ಮುಂದಿನ 2 ಪಂದ್ಯಗಳಿಂದ ಕೈ ಬಿಡಲಾಗಿತ್ತು.

ಉತ್ತಮ ಮನೋಭಾವದ ವ್ಯಕ್ತಿ’

“ಇಶಾನ್ ಕಿಶನ್ ಉತ್ತಮ ಮನೋಭಾವ ಹೊಂದಿದ ವ್ಯಕ್ತಿ. ಅವರು ಚೆನ್ನಾಗಿ ಆಡಿದಾಗ ನನಗೆ ಸಂತೋಷವಾಗುತ್ತದೆ. ಅವರು ಎಲ್ಲರನ್ನೂ ಸಂತೋಷಪಡಿಸುವ ವ್ಯಕ್ತಿಯಾಗಿದ್ದಾರೆ. ಪ್ರತಿಯೊಬ್ಬ ಆಟಗಾರನ ಬ್ಯಾಟ್, ಕೈಗವಸುಗಳು ಮತ್ತು ಹೆಲ್ಮೆಟ್‌ಗಳನ್ನು ಸಿದ್ಧ ಪಡಿಸುವಲ್ಲಿ ಇಶಾನ್​ ಚಾಕಚಕ್ಯತೆ ಹೊಂದಿದ್ದಾರೆ. ಆಡುವ ಬಳಗದಿಂದ ಹೊರಗುಳಿದರೂ ಅವರು ಎಂದಿಗೂ ದೂರು ನೀಡಿದನ್ನು ನಾನು ನೋಡಿಲ್ಲ” ಎಂದು ಆರ್​. ಅಶ್ವಿನ್ ಅವರು ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಇಶಾನ್​ ಅವರನ್ನು ಹಾಡಿ ಹೊಗಳಿದ್ದರು.

ಇಶಾನ್​ ಕಿಶನ್​ ಅವರು ಭಾರತ ಪರ 27 ಏಕದಿನ ಪಂದ್ಯಗಳನ್ನು ಆಡಿ, 933 ರನ್​ ಬಾರಿಸಿದ್ದಾರೆ. ತಲಾ ಒಂದು ಶತಕ ಮತ್ತು ದ್ವಿಶತಕ ಬಾರಿಸಿದ್ದಾರೆ. 32 ಟಿ20 ಪಂದ್ಯಗಳಿಂದ 796 ರನ್​ ಗಳಿಸಿದ್ದಾರೆ. 2 ಟೆಸ್ಟ್​ ಪಂದ್ಯಗಳಿಂದ 78 ರನ್​ ಕಲೆಹಾಕಿದ್ದಾರೆ. ಐಪಿಎಲ್​ನಲ್ಲಿ 91 ಪಂದ್ಯಗಳನ್ನು ಆಡಿ 2324 ಗಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ