ಹೊಸದಿಲ್ಲಿ: ಉದ್ಯೋಗಿಗಳ ಭವಿಷ್ಯ ನಿಧಿಗೆ 2021-22ನೇ ಸಾಲಿಗೆ ಶೇ. 8.1 ಬಡ್ಡಿ ದರ ಪಾವತಿಸಲು ಕೇಂದ್ರ ಹಣಕಾಸು ಸಚಿವಾಲಯ ಶುಕ್ರವಾರ ಅನುಮೋದನೆ ನೀಡಿದೆ. ಇದರೊಂದಿಗೆ ಸುಮಾರು 6 ಕೋಟಿ ಇಪಿಎಫ್ ಚಂದಾದಾರರು ತಮ್ಮ ಖಾತೆಗೆ ಜಮೆಯಾದ ಹಣಕ್ಕೆ ಸುಮಾರು ನಾಲ್ಕೂವರೆ ದಶಕದಲ್ಲೇ ಕನಿಷ್ಠ ಬಡ್ಡಿದರವನ್ನು ಪಡೆಯಲಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್ಒ) 2021-22ನೇ ಸಾಲಿಗೆ ಬಡ್ಡಿದರವನ್ನು ಶೇ. 8.5ರಿಂದ ಶೇ. 8.1ಕ್ಕೆ ಇಳಿಸಲು ತೀರ್ಮಾನಿಸಿತ್ತು. ಈ ಸಂಬಂಧ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಕಳುಹಿಸಿತ್ತು. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ ಇದಕ್ಕೆ ಸಮ್ಮತಿ ಸೂಚಿಸಿದ್ದು, ಪರಿಷ್ಕೃತ ಬಡ್ಡಿದರ ಸಂಬಂಧ ಆದೇಶವನ್ನು ಇಪಿಎಫ್ಒ ಶನಿವಾರ ಹೊರಡಿಸಿದೆ.
ಇಪಿಎಫ್ಒ ತನ್ನ ಸುಮಾರು 6 ಕೋಟಿ ಚಂದಾದಾರರ ಖಾತೆಗೆ ಶೇ. 8.1 ದರದಲ್ಲಿ ಬಡ್ಡಿಯನ್ನು ಜಮೆ ಮಾಡಲಿದೆ. 1977-78ರ ಬಳಿಕ ಇದೇ ಮೊದಲ ಬಾರಿಗೆ ಇಪಿಎಫ್ಒ ಬಡ್ಡಿದರ ಶೇ. 8.1ರ ಮಟ್ಟಕ್ಕೆ ಇಳಿಸಲಾಗಿದೆ.
ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !. Twitter Facebook LinkedIn WhatsApp ಮಂಗಳೂರು: 2024 ಲೋಕಸಭಾ ಚುನಾವಣೆಯಲ್ಲಿ ಮಂಗಳೂರು
ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು Twitter Facebook LinkedIn WhatsApp ಉಪ್ಪಿನಂಗಡಿ: ಚುನಾವಣ ನೀತಿ ಸಂಹಿತಿ ಜಾರಿಯಾಗುವ ಮುನ್ನವೇ ಮುದ್ರಿತವಾದ ವಿವಾಹ ಆಮಂತ್ರಣ ಪತ್ರದಲ್ಲಿ “ಈ ಬಾರಿಯೂ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?