ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.!
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ರಾಣಿಪುರಂ ಕಣಿವೆ ಕಾಸರಗೋಡಿನ ಜಿಲ್ಲೆಯಲ್ಲಿದೆ. ನಿಸರ್ಗ ಸೌಂದರ್ಯವನ್ನು ಸಂಪೂರ್ಣವಾಗಿ ಒಳಗೊಂಡಿರುವ ರಾಣಿಪುರಂ ಬಹುದೊಡ್ಡ ಹಿಲ್ ಸ್ಟೇಷನ್. ಸುಳ್ಯದಿಂದ 30 ಕಿಲೋಮೀಟರ್ ದೂರದಲ್ಲಿರುವ ಈ ಪ್ರದೇಶ ಅದ್ಭುತ ಪ್ರದೇಶ. ಕಾಸರಗೋಡಿನಿಂದ 48 ಕಿಲೋಮೀಟರ್ ದೂರದಲ್ಲಿದೆ ಇದು. ಸುಮಾರು 780 ಮೀಟರ್ ಸಮುದ್ರಮಟ್ಟದಿಂದ ಎತ್ತರ ಇರುವ ರಾಣಿಪುರಂ ನಿಸರ್ಗ ಪ್ರಿಯರ ಅದ್ಭುತ ಸ್ಥಳ.
ಸುಳ್ಯದಿಂದ ಕರಿಕೆ ಪ್ರದೇಶವಾಗಿ ರಾಣಿಪುರ ನ್ನು ತಲುಪಬಹುದು. ಮಡಿಕೇರಿಯಿಂದ ಭಾಗಮಂಡಲ ವಾಗಿ ರಾಣಿಪುರ0 ವನ್ನು ತಲುಪಬಹುದು. ಬ್ರಹ್ಮಗಿರಿ ಪರ್ವತ ಶ್ರೇಣಿಗಳ ಅಂಚಿನಲ್ಲಿ ಬರುವ ರಾಣಿಪುರಂ ಅದ್ಭುತ ವನರಾಶಿ ಗಳ ಸಂಗಮವಾಗಿದೆ. ಎತ್ತರದ ಬೆಟ್ಟದಲ್ಲಿ ನಿಂತು ನೋಡಿದಾಗ ಸುತ್ತಲೂ ಕಾಣುವ ಅದ್ಭುತ ರಮಣೀಯ ನೋಟ ಎಂತವರನ್ನು ಮೂಕವಿಸ್ಮಿತರನ್ನಾಗಿಸುತ್ತದೆ.
ರಾಣಿಪುರಂ ಹವಾಗುಣ ಅಷ್ಟೇ ಪ್ರಪುಲ್ಲ ವಾಗಿದೆ. ಬೀಸುವ ತಂಗಾಳಿ ನಮ್ಮ ಮನವನ್ನು ಮುದಗೊಳಿಸ ಬಹುದು. ರಾಣಿಪುರಂ ನಿಂದ ನಾವು ದೂರದಲ್ಲಿ ಕಾಣುವ ಸಮುದ್ರವನ್ನು ವೀಕ್ಷಿಸಬಹುದು. ಅಂತಹ ಎತ್ತರ ಪ್ರದೇಶದಲ್ಲಿ ಇದೆ. ಕೇರಳದ ಊಟಿ ಎಂದು ಕರೆಯಲ್ಪಡುವ ರಾಣಿಪುರಂ ಕೇರಳದ ಮುಕುಟಮಣಿ ಯಂತೆ ಶೋಭಿಸುತ್ತಿದೆ. ಕರ್ನಾಟಕ ರಾಜ್ಯದ ಸನಿಹದಲ್ಲಿಯೇ ಇರುವ ಈ ಅದ್ಭುತ ಸ್ಥಳ ಪ್ರಕೃತಿ ಪ್ರಿಯರಿಗೆ, ಚಾರಣಪ್ರಿಯರಿಗೆ ಹಾಗೂ ಪ್ರವಾಸಿಗರಿಗೆ ಅದ್ಭುತ ಸ್ಥಳ.
ಮಲ್ಪೆ: ಸಮುದ್ರದ ಅಲೆಗಳ ಹೊಡೆತಕ್ಕೆ ಸಿಲುಕಿದ ಮೂವರು ; ಓರ್ವ ಸಾವು.! Twitter Facebook LinkedIn WhatsApp ಉಡುಪಿ: ಈ ಋತುಮಾನದಲ್ಲಿ ಮೊದಲ ಬಾರಿ ಕಡಲು ಅಬ್ಬರಿಸಿದ್ದು, ಮೊದಲ ಕಡಲಿನ ಅಬ್ಬರವೇ ಓರ್ವನನ್ನು ಬಲಿಪಡಿದಿದೆ.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?