ಪಟಿಯಾಲದಲ್ಲಿ ಕ್ರಿಕೆಟಿಗ, ರಾಜಕಾರಣಿ ನವಜೋತ್ ಸಿಂಗ್ ಸಿಧು (Navjot Singh Sidhu)ಅವರೊಂದಿಗಿನ ರಸ್ತೆ ಜಗಳ ಘಟನೆಯಲ್ಲಿ 34 ವರ್ಷಗಳ ಹಿಂದೆ ಪ್ರಾಣ ಕಳೆದುಕೊಂಡ ಗುರ್ನಾಮ್ ಸಿಂಗ್ (65) ಅವರ ಕುಟುಂಬ ಸದಸ್ಯರು ಸುಪ್ರೀಂಕೋರ್ಟ್ ತಮ್ಮ ಪರ ಆದೇಶ ನೀಡಿದಕ್ಕಾಗಿ ಸರ್ವಶಕ್ತನಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದ್ದಾರೆ. 34 ವರ್ಷಗಳ ನಂತರ ನ್ಯಾಯ ದೊರಕಿದೆ, ನಾನು ದೇವರ ಮುಂದೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಸುದೀರ್ಘ ಕಾನೂನು ಹೋರಾಟ ಕೊನೆಗೊಂಡ ನಂತರ ಗುರ್ನಾಮ್ ಸಿಂಗ್ (Gurnam Singh)ಅವರ ಮಗ ನರ್ವೇದಿಂದರ್ ಸಿಂಗ್ ಹೇಳಿದ್ದಾರೆ. 2018ರಲ್ಲಿ ಸುಪ್ರೀಂಕೋರ್ಟ್ (Supreme Court) ಕೇವಲ ₹ 1,000 ದಂಡವನ್ನು ವಿಧಿಸುವ ಮೂಲಕ ಸಿಧುವನ್ನು ಬಿಡುಗಡೆ ಮಾಡಿದಾಗ ನನಗೆ ನಿರಾಶೆಯಾಗಿದೆ ಎಂದಿದ್ದಾರೆ ನರ್ವೇದಿಂದರ್. ಆದರೆ ಕುಟುಂಬವು ಈ ನಿರ್ಧಾರವನ್ನು ದೇವರ ನಿರ್ಧಾರವೆಂದು ಒಪ್ಪಿಕೊಂಡಿದೆ ಎಂದಿದ್ದರು. ನಂತರ ಅವರು ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದು, “ನನಗೆ ನ್ಯಾಯಾಂಗದಲ್ಲಿ ನಂಬಿಕೆ ಇದೆ” ಎಂದು ಹೇಳಿದರು. ಗುರುವಾರ ಇದೇ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನವಜೋತ್ ಸಿಂಗ್ ಸಿಧುಗೆ ಜೈಲು ಶಿಕ್ಷೆ ವಿಧಿಸಿದೆ. ಈ ಆದೇಶಕ್ಕೆ ಪ್ರತಿಕ್ರಿಯಿಸಿದ ಗುರ್ನಾಮ್ ಸಿಂಗ್ ಅವರ ಮೊಮ್ಮಗ ಸಾಬ್ಬಿ, “ವಿಳಂಬವಾಗಬಹುದು ಆದರೆ ದೇವರು ಯಾವಾಗಲೂ ನ್ಯಾಯವನ್ನು ನೀಡುತ್ತಾನೆ. ನಾವು ದೇವರಿಗೆ ಮಾತ್ರವಲ್ಲದೆ ನಮ್ಮ ಸುದೀರ್ಘ ಕಾನೂನು ಹೋರಾಟದಲ್ಲಿ ನಮ್ಮೊಂದಿಗೆ ನಿಂತ ಪ್ರತಿಯೊಬ್ಬರಿಗೂ ನಾವು ಧನ್ಯವಾದ ಹೇಳುತ್ತೇವೆ. ಈ ಸಮಯದಲ್ಲಿ ನಾವು ಅನೇಕ ಒತ್ತಡಗಳನ್ನು ಅನುಭವಿಸಿದ್ದೇವೆ ಎಂದಿದ್ದಾರೆ.
ಆರೋಪ ಮುಕ್ತರಾದಾಗ ಸಿಧು ತೀವ್ರವಾಗಿ ಪ್ರತಿಕ್ರಿಯಿಸಿದ್ದರು. ನಾವು ದೇವರಿಗೆ ಕೃತಜ್ಞರಾಗಿರುತ್ತೇವೆ ಎಂದು ಮಾತ್ರ ಹೇಳಬಹುದು ಎಂದಿದ್ದಾರೆ ಸಾಬ್ಬಿ.
ಸತತವಾಗಿ 100 ಶೇಕಡ ಫಲಿತಾಂಶದ ವಿಶೇಷ ಸಾಧನೆ ಮಾಡಿದ ಸರಕಾರಿ ಪ್ರೌಢಶಾಲೆ ನಯನಾಡು Twitter Facebook LinkedIn WhatsApp ಬಂಟ್ವಾಳ: ಪಿಲಾತ್ತಬೆಟ್ಟು ಗ್ರಾಮದ ಅತ್ಯಂತ ಗ್ರಾಮೀಣ ಭಾಗದ ಆದರೆ ಪಕೃತಿ ರಮಣೀಯ ಪರಿಸರದಲ್ಲಿರುವ ಸರಕಾರಿ
ಬಂಗೇರ ಅಸ್ತಂಗತ. ಕೊನೆಗೂ ದಕ್ಷಿಣ ಕನ್ನಡದ ಪ್ರಬಲ ರಾಜಕಾರಣಿ ಮಂತ್ರಿಯಾಗಲಿಲ್ಲ! 2013 ರಲ್ಲಿ ಮಂತ್ರಿ ಸ್ಥಾನ ತಪ್ಪಿದ್ದು ಹೇಗೆ ಎಂಬುದು ಇಂದಿಗೂ ರಹಸ್ಯ!! Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡದ ಅಪ್ಪಟ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?