ಗುರುವಾರ, ಮೇ 2, 2024
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ವೈರಲ್ ಆಗಿದ್ದು ಹೇಗೆ..?-ಮಹಿಳೆ ಬಡ ಮತ್ತು ಹಸಿದಿರುವಾಗ ಅನ್ನ ಹಾಕಿ, ನಿಮ್ಮ ಅದನ್ನಲ್ಲ; ಪ್ರಜ್ವಲ್ ರೇವಣ್ಣ ವಿರುದ್ಧ ನಟಿ ಪೋಸ್ಟ್ ವೈರಲ್.!-ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!-ಮಡಂತ್ಯಾರು: ಸೇಕ್ರೆಡ್ ಹಾರ್ಟ್ ಆಂಗ್ಲ ಮಾಧ್ಯಮ ಶಾಲಾ ಶಿಕ್ಷಕಿ ಹೃದಯಘಾತದಿಂದ ನಿಧನ..!-ಕೋವಿಡ್-19 ಲಸಿಕೆ ಪ್ರಮಾಣಪತ್ರದಿಂದ ಮೋದಿ ಫೋಟೊ ಕಾಣೆ; ವರದಿಯಲ್ಲೇನಿದೆ.?-Shyam Rangeela: ಮೋದಿ ವಿರುದ್ಧ ವಾರಣಾಸಿಯಲ್ಲಿ ಹಾಸ್ಯ ನಟ ಚುನಾವಣೆಗೆ ಸ್ಪರ್ಧೆ..!-ಅಪಾರ್ಟ್‌ಮೆಂಟ್‌ನ ರೂಫ್‌ನಲ್ಲಿ ಸಿಲುಕಿದ್ದ ಪುಟ್ಟ ಮಗುವಿನ ರೋಚಕ ರಕ್ಷಣೆ; ಇಲ್ಲಿದೆ ವಿಡಿಯೋ-ಸಲ್ಮಾನ್ ಖಾನ್ ಮನೆ ಮೇಲೆ ಗುಂಡಿನ ದಾಳಿ ಮಾಡಿದ್ದ ಒಬ್ಬ ಆರೋಪಿ ಜೈಲಿನಲ್ಲೇ ಆತ್ಮಹತ್ಯೆ..!-ರಾಜ್ಯದ ಕೆಲ ಜಿಲ್ಲೆಗಳಲ್ಲಿ ಏರಲಿದೆ ಗರಿಷ್ಠ ತಾಪಮಾನ; ರೆಡ್ ಅಲರ್ಟ್ ಘೋಷಣೆ.!-ಅಶ್ಲೀಲ ವಿಡಿಯೋ ಕೇಸ್ ಪ್ರಕರಣ ; ಪ್ರಜ್ವಲ್ ರೇವಣ್ಣ ಮೊದಲ ಪ್ರತಿಕ್ರಿಯೆ ಏನು..?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಗಗನಕ್ಕೇರಿದ ಅಡಿಕೆ ದರ. ರೈತರು ಫುಲ್ ಖುಷ್!

Twitter
Facebook
LinkedIn
WhatsApp
ಗಗನಕ್ಕೇರಿದ ಅಡಿಕೆ ದರ. ರೈತರು ಫುಲ್ ಖುಷ್!

ಅಡಿಕೆ ದರ ಏರಿಕೆಯಿಂದಾಗಿ ಅಡಿಕೆ ಬೆಳೆದವರ ಮಾನ – ಗೌರವ ಹೆಚ್ಚಾದಂತಿದೆ. ಕೈಗೆ ಒಂದಷ್ಟು ಕಾಸು ಸೇರುತ್ತಿದ್ದಂತೆಯೇ ಮಲೆನಾಡು ಭಾಗದಲ್ಲಿ ಕಾರುಗಳು ದಾಂಗುಡಿ ಇಡುತ್ತಿವೆ. ಅಡಿಕೆ ತೋಟಗಳ ಮಾಲೀಕರ ಬಾಯಿಯಲ್ಲಿ ಸಾವಿರಗಳ ಪದ ಮರೆತು ಹೋಗಿ ಮಾತೆತ್ತಿದರೆ ಲಕ್ಷ ಎಂಬ ಮಾತೇ ಕೇಳಿ ಬರುತ್ತಿದೆ..!

ಅಡಕೆ ಧಾರಣೆಯಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆ; ತೋಟ ವಿಸ್ತರಣೆಯತ್ತ ಬೆಳಗಾರರ ಚಿತ್ತ
‘ಪ್ರತಿ ವರ್ಷ ಆನವಟ್ಟಿ ಪಟ್ಟಣದ ಷೋ ರೂಂಗಳಲ್ಲಿ ಸುಮಾರು ಎರಡು ನೂರು ಬೈಕ್‌ಗಳು ಮಾರಾಟವಾಗುತ್ತಿದ್ದವು. ಈ ವರ್ಷ ಆ ವೇಗ ಇಲ್ಲ. ಪೆಟ್ರೋಲ್‌ ಬೆಲೆ ಏರಿಕೆ, ಎಲೆಕ್ಟ್ರಿಕ್‌ ಬೈಕ್‌ಗಳ ಆಗಮನ ಹಾಗೂ ಅಡಿಕೆ ಬೆಲೆ ಏರಿಕೆಯಿಂದ ಉತ್ತೇಜಿತರಾದ ರೈತರು ಬೈಕ್‌ಗಳಿಂದ ದೂರವಾಗಿ ಕಾರು ಖರೀದಿಯತ್ತ ವಾಲುತ್ತಿದ್ದಾರೆ’ ಎನ್ನುತ್ತಿದ್ದಾರೆ ಬೈಕ್‌ ಷೋ ರೂಂನ ಮಾಲೀಕ ಸಂಪತ್‌ ಕುಮಾರ್‌.

ಮಲೆನಾಡು ಭಾಗದಲ್ಲಿ ದಶಕಗಳ ಹಿಂದೆ ಭತ್ತವೇ ಪ್ರಮುಖ ಬೆಳೆ. ದಿನ ಕಳೆದಂತೆ ಭತ್ತದ ಬೆಳೆಯ ಜಮೀನಿನ ಕೆಲ ಭಾಗ ಶುಂಠಿ ಹಾಗೂ ಅನಾನಸ್‌ ಬೆಳೆಯಲು ಮಾರ್ಪಾಡಾಗಿದೆ. ಶುಂಠಿ ಬೆಳೆ ಮತ್ತು ಅನಾನಸ್‌ ಬೆಳೆಯ ಬೆಲೆಗಳ ಇಳಿಮುಖವಾಗಿದ್ದರಿಂದ ಬೆಳೆಗಾರರ ಸಂಖ್ಯೆ ಇಳಿಮುಖವಾಗಿದೆ. ಈಗ ಅಡಿಕೆ ಬೆಲೆ ಏರಿಕೆಯಿಂದ ಆಕರ್ಷಿತರಾಗಿರುವ ಮಲೆನಾಡು ರೈತರು, ಅಡಿಕೆ ಬೆಳೆಯುವತ್ತ ಚಿತ್ತ ನೆಟ್ಟಿದ್ದಾರೆ. ಭತ್ತದ ಬೆಳೆಯ ಬಹುಪಾಲು ಜಮೀನು ಅಡಿಕೆ ತೋಟಗಳಾಗಿ ಮಾರ್ಪಾಡಾಗುತ್ತಿದ್ದು, ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಕೂಲಿ ಕಾರ್ಮಿಕರ ಕೂಲಿಯೂ ಹೆಚ್ಚಾಗಿದ್ದು, ಸಣ್ಣ ಪುಟ್ಟ ರೈತರಿಗೆ ಮಾರಕವಾಗಿ ಪರಿಣಮಿಸಿದ್ದು, ತಮ್ಮ ಜಮೀನುಗಳಲ್ಲಿ ಕುಟುಂಬದವರೊಡಗೂಡಿ ತಾವೇ ದುಡಿಯುವಂತಾಗಿದೆ. ಅಡಿಕೆಯ ಬೆಲೆ ಏರಿಕೆಯಿಂದಾಗಿ ಹೆಚ್ಚಿನ ಇಳುವರಿಯ ದುರಾಸೆಗೆ ಬಿದ್ದ ರೈತರು ಸಾವಯವ ಕೃಷಿಯಿಂದ ದೂರವಾಗುತ್ತಿದ್ದಾರೆ. ಕೊಟ್ಟಿಗೆ ಗೊಬ್ಬರದ ಬಳಕೆಯ ಪ್ರಮಾಣ ಕಡಿಮೆಯಾಗುತ್ತಿದೆ. ಹೆಚ್ಚಿನ ಇಳುವರಿಯ ಆಸೆಗಾಗಿ ರಾಸಾಯನಿಕ ಗೊಬ್ಬರದತ್ತ ಮುಖ ಮಾಡುತ್ತಿದ್ದಾರೆ.

ದಿನೇ ದಿನೇ ಏರುತ್ತಿರುವ ಪೆಟ್ರೋಲ್‌ ಮತ್ತು ಡಿಸೇಲ್‌ಗಳ ಬೆಲೆ ಏರಿಕೆಯಿಂದ ಕಾರು ಕೊಳ್ಳದಿರುವ ಅಡಿಕೆ ತೋಟಗಳ ಮಾಲೀಕರು ಬೆಲೆ ಇಳಿಕೆ ಹಾಗೂ ಸಿ. ಎನ್‌. ಜಿ ಗ್ಯಾಸ್‌ಗಳ ಬಂಕ್‌ಗಳ ಆಗಮನಕ್ಕಾಗಿ ಕಾಯುತ್ತಿದ್ದಾರೆ. ಬೆಲೆಗಳಲ್ಲಿ ಇಳಿಕೆ ಕಂಡರೆ ಸಣ್ಣ ಪುಟ್ಟ ತೋಟದ ಮಾಲೀಕರು ಸಹ ಕಾರುಗಳ ಖರೀದಿಗೆ ಮುಂದಾಗಲಿದ್ದಾರೆ. ಇದಕ್ಕೆ ಕೋವಿಡ್‌ -19 ಕಾಯಿಲೆ ಒಂದು ಕಾರಣವಾಗಿದ್ದು ಜನರೊಂದಿಗೆ ಬೆರೆಯಲು ಆತಂಕ ಪಡುವವರು ಬಸ್‌ಗಳಲ್ಲಿ ಸಂಚಾರ ಮಾಡುವುದರಿಂದ ದೂರ ಸರಿದು ಸ್ವಂತ ವಾಹನ ಖರೀದಿಗೆ ಮುಂದಾಗಿದ್ದಾರೆ.

ಪ್ರತಿ ವರ್ಷ ಕನಿಷ್ಠ ನಲವತ್ತು ಟ್ರ್ಯಾಕ್ಟರ್‌ ಮಾರಾಟವಾಗುತ್ತಿದ್ದು ಡಿಸೇಲ್‌ ಬೆಲೆ ಏರಿಕೆ, ಅಡಿಕೆ ತೋಟಗಳ ಸಂಖ್ಯೆ ಹೆಚ್ಚಳದಿಂದಾಗಿ ಕೇವಲ 10-15 ಟ್ರ್ಯಾಕ್ಟರ್‌ ಮಾರಾಟಕ್ಕೆ ಇಳಿಕೆಯಾಗಿದೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!

ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..!

ಅಡ್ಯಾರ್: ಬೊಂಡ ಫ್ಯಾಕ್ಟರಿಯಲ್ಲಿ ಎಳನೀರು ಕುಡಿದು ಅಸ್ವಸ್ಥ ಪ್ರಕರಣ; ಬೊಂಡಾ ಫ್ಯಾಕ್ಟರಿಗೆ ಕ್ಲೀನ್ ಚಿಟ್..! Twitter Facebook LinkedIn WhatsApp ಮಂಗಳೂರು:ಅಡ್ಯಾರ್‌ನಲ್ಲಿರುವ ಬೋಂಡಾ ಕಾರ್ಖಾನೆಯಿಂದ ಪೂರೈಕೆಯಾಗುವ ತೆಂಗಿನಕಾಯಿ ನೀರು ಸೇವಿಸಿ ಹಲವರು ಅಸ್ವಸ್ಥರಾಗಿದ್ದಾರೆ ಎಂಬ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು