ಭಾನುವಾರ, ಮೇ 5, 2024
ಪ್ರಜ್ವಲ್‌ ರೇವಣ್ಣರ ಅಶ್ಲೀಲ ವಿಡಿಯೋವನ್ನು ನಾನು ನೋಡುವ ಧೈರ್ಯ ಮಾಡಿಲ್ಲ :ನಿಖಿಲ್‌ ಕುಮಾರಸ್ವಾಮಿ-Onion price : ಈರುಳ್ಳಿ ದರ ಮತ್ತೆ ಏರಿಕೆಯಾಗುವ ಸಾಧ್ಯತೆ; ಕಾರಣವೇನು?-ಅಶ್ಲೀಲ ವಿಡಿಯೋ ಪ್ರಕರಣ; ದೇವೇಗೌಡರ ನಿವಾಸಿದಿಂದಲೇ ಹೆಚ್​ಡಿ ರೇವಣ್ಣ ಎಸ್ಐಟಿ ವಶಕ್ಕೆ..!-ಮಂಗಳೂರಿನ ಚುನಾವಣೆಯ ಡಲ್ ಪ್ರಚಾರದ ಮೂಲಕ ಹೆಣೆ ದ ಬಿಜೆಪಿ ತಂತ್ರಗಾರಿಕೆಯು ರಾಷ್ಟ್ರೀಯ ಕಾಂಗ್ರೆಸ್ ನ ದಾರಿ ತಪ್ಪಿಸಿತೇ?-ಚುನಾವಣಾ ಪ್ರಚಾರಕ್ಕೆ ಹಣವಿಲ್ಲವೆಂದು ಚುನಾವಣೆಗೆ ಸ್ಪರ್ಧಿಸಲು ನಿರಾಕರಿಸಿ ಕಾಂಗ್ರೆಸ್​​ ಅಭ್ಯರ್ಥಿ..!-ಕೋವಿಶೀಲ್ಡ್​ ಪಡೆದವರು ಕೋಲ್ಡ್, ಐಸ್​ ಕ್ರೀಮ್ ಸೇವಿಸಬಾರದು ಎನ್ನುವುದು ಸುಳ್ಳು ಸುದ್ದಿ ಎಂದ ಆರೋಗ್ಯ ಇಲಾಖೆ.!-17 ಭಾರತೀಯರು ಸೇರಿದಂತೆ ಒಟ್ಟು 25 ಮಂದಿ ಹಡಗಿನಲ್ಲಿದ್ದ ಸಿಬ್ಬಂದಿಯನ್ನು ಬಿಡುಗಡೆ ಮಾಡಿದ ಇರಾನ್!-ಕಾರ್ಕಳ : ನಾಲ್ಕು ತಿಂಗಳೊಳಗೆ ಪರುಶುರಾಮ ಥೀಂ ಪಾರ್ಕ್ ಕಾಮಗಾರಿ ಮುಗಿಸುವಂತೆ ಹೈಕೋರ್ಟ್ ಆದೇಶ..!-ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.!-ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಂಗಳೂರು: ಹಿಂದೂ ದೇವಸ್ಥಾನದ ಗೋಪುರದ ಮೇಲಿನ ಯೇಸು ವಿಗ್ರಹ ತೆರವು

Twitter
Facebook
LinkedIn
WhatsApp
MV5BNTk1OTUxMzIzMV5BMl5BanBnXkFtZTcwMzMxMjI0Nw@@. V1 1 1

ಬೆಂಗಳೂರು: ಸಾಕಷ್ಟು ವಿರೋಧ ವ್ಯಕ್ತವಾದ ಬಳಿಕ ತ್ಯಾಗರಾಜನಗರದ ಹಿಂದೂ ದೇವಸ್ಥಾನದ ಗೋಪುರದ ಮೇಲಿದ್ದ ಕ್ರೈಸ್ತ ಪ್ರತಿಮೆ ತೆಗೆದು ಆ ಜಾಗಕ್ಕೆ ಆದ್ಯಂತ ಪ್ರಭು ವಿಗ್ರಹ ಸ್ಥಾಪನೆ ಮಾಡಲಾಗಿದೆ. ಆಡಳಿತ ಮಂಡಳಿ ಬೆಂಗಳೂರಿನ ತ್ಯಾಗರಾಜನಗರದ ದೇವಸ್ಥಾನದ ಗೋಪುರದಲ್ಲಿದ್ದ ಯೇಸು ವಿಗ್ರಹ ತೆರವುಗೊಳಿಸಿದೆ.

1968 ರಿಂದ ಗೋಪುರದಲ್ಲಿ ಯೇಸು ಕ್ರಿಸ್ತನ ವಿಗ್ರಹವಿತ್ತು. ಗಣೇಶನ ದೇವಸ್ಥಾನದ ಗೋಪುರದಲ್ಲಿ ಯೇಸುವಿನ ವಿಗ್ರಹ ಯಾಕೆ ಇರಬೇಕು? ಯೇಸು ವಿಗ್ರಹವನ್ನ ತೆರವುಗೊಳಿಸುವಂತೆ ನಾಲ್ಕು ವರ್ಷದಿಂದ ಹಿಂದೂ ಪರ ಸಂಘಟನೆಗಳು ಮನವಿ ಮಾಡಿದ್ದರು. ಈ ಹಿನ್ನಲೆ ಮಾರ್ಚ್ 2 ರಂದು ಯೇಸು ಕ್ರಿಸ್ತನ ವಿಗ್ರಹ ತೆರವುಗೊಳಿಸಿ, ಯೇಸು ಕ್ರಿಸ್ತ ಇದ್ದ ಜಾಗದಲ್ಲಿ ಆದ್ಯಂತ ಪ್ರಭು ವಿಗ್ರಹ ಸ್ಥಾಪನೆ ಮಾಡುವುದಾಗಿ ಗಣೇಶ ಮಂದಿರಂ ದೇವಸ್ಥಾನ ಟ್ರಸ್ಟಿ ಸುಮುಖ್ ರಾಜ್ ಹೇಳಿಕೆ ನೀಡಿದ್ದರು.

1968 ರಲ್ಲಿ ನಮ್ಮ ತಾತ ಈ ಗೋಪುರವನ್ನ ಸ್ಥಾಪಿಸಿದ್ರು. ಸರ್ವಧರ್ಮ ಸಹಿಷ್ಣುತೆ ಸಾರುವ ದೃಷ್ಟಿಯಿಂದ ಈ ಗೋಪುರವನ್ನ ನಿರ್ಮಿಸಿದ್ರು. ಈ ಗೋಪುರದಲ್ಲಿ ಯೇಸು ಕ್ರಿಸ್ತ ಮಾತ್ರ ಅಲ್ಲ. ಸಾಯಿಬಾಬಾ, ಬಸವಣ್ಣ, ವಿವೇಕಾನಂದ ಸೇರಿದಂತೆ ಒಂದಷ್ಟು ವಚನಾಕಾರರ ವಿಗ್ರಹ ಕೂಡ ಹಾಕಲಾಗಿತ್ತು. ಇಷ್ಟು ವರ್ಷಗಳ ಕಾಲ ಯಾರು ಇದರ ಬಗ್ಗೆ ವಿರೋಧ ವ್ಯಕ್ತಪಡಿಸಿರಲಿಲ್ಲ. ಈಗ ಒಂದಷ್ಟು ತಿಂಗಳಿನಿಂದ ಹಿಂದೂ ಪರ ಸಂಘಟನೆಗಳು ಯೇಸು ವಿಗ್ರಹ ಗೋಪುರದಲ್ಲಿರುವುದಕ್ಕೆ ವಿರೋಧ ವ್ಯಕ್ತಪಡಿಸಿದ್ರು. ದೇವಸ್ಥಾನಕ್ಕೆ ಬಂದು ಗಲಾಟೆ ಸಹ ಮಾಡಿದ್ರು. ನಂತ್ರ ರಾತ್ರೋರಾತ್ರಿ ಬಂದು ಯೇಸುವಿನ ವಿಗ್ರಹವನ್ನ ಭಿನ್ನಗೊಳಿಸಿದ್ರು. ಈ ಹಿನ್ನಲೆ ಭಿನ್ನವಾಗಿರುವ ವಿಗ್ರಹ ಗೋಪುರದಲ್ಲಿ ಇರಬಾರದೆಂದು ಯೇಸುವಿನ ವಿಗ್ರಹ ತೆರವುಗೊಳಿಸಿ ಆದ್ಯಂತ ಪ್ರಭು ವಿಗ್ರಹ ಪ್ರತಿಷ್ಠಾಪಿಸಿದ್ದೇವೆ ಎಂದು ಸುಮುಖ್ ರಾಜ್ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ