ಭಾನುವಾರ, ಏಪ್ರಿಲ್ 28, 2024
ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!-ಬಂಟ್ವಾಳ: ಅನಾರೋಗ್ಯದ ನಡುವೆಯೂ ಮತದಾನ ಮುಗಿಸಿ ಇಹಲೋಕ ತ್ಯಜಿಸಿದ ಮಾಜಿ ಸೈನಿಕ..!-Gold Rate: 10 ಗ್ರಾಂ ಆಭರಣದ ಬೆಲೆ ಇಂದು ಹೇಗಿದೆ-ಚುನಾವಣೆ ಭಾಷಣ ಮಾಡುವಾಗ ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ.!-EVM: ಇವಿಎಂ ಕುರಿತು ಚುನಾವಣಾ ಆಯೋಗದಿಂದ ಸ್ಪಷ್ಟನೆ ಕೇಳಿದ ಸುಪ್ರೀಂ ಕೋರ್ಟ್.!-ಮಂಡ್ಯದಲ್ಲಿ ಸುಮಲತಾ ಸಹಾಯ ಮಾಡಿಲ್ಲ; ಹಾಸನದಲ್ಲಿ ಬಿಜೆಪಿಯ ಕೆಲವರ ಸಹಾಯವಿಲ್ಲ :ದೇವೇಗೌಡ-HSRP ನಂಬರ್ ಪ್ಲೇಟ್ ಅಳವಡಿಸಲು ಮೇ 31ರ ವರೆಗೆ ಗಡುವು; ಎಷ್ಟು ಬೀಳಲಿದೆ ದಂಡ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

Dharwad: ಲಾಡ್ಜ್​ನಲ್ಲಿ ಒಟ್ಟಿಗೆ ನೇಣಿಗೆ ಶರಣಾದ ಯುವಕ, ಯುವತಿ

Twitter
Facebook
LinkedIn
WhatsApp
Dharwad: ಲಾಡ್ಜ್​ನಲ್ಲಿ ಒಟ್ಟಿಗೆ ನೇಣಿಗೆ ಶರಣಾದ ಯುವಕ, ಯುವತಿ

ಧಾರವಾಡ (ಡಿ.08): ಧಾರವಾಡ ಜಿಲ್ಲೆ ನವಲಗುಂದದ ಪಟ್ಟಣದ ಲಾಡ್ಜ್‌ನಲ್ಲಿ ಯುವ ಜೋಡಿಯೊಂದು ಒಂದೆ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ವೇಳೆ‌ ನಡೆದಿದೆ. ಆರಂಭದಲ್ಲಿ ಅವರಿಬ್ಬರೂ ಪ್ರೇಮಿಗಳೆ ಅಂತಾ ಎಲ್ಲರೂ ಭಾವಿಸಿದ್ದರು ಆದ್ರೆ ಯಾವಾಗ ಇಬ್ಬರೂ ಮನೆಯವರು ಅಲ್ಲಿಗೆ ಬಂದಿದ್ದರೋ ಆಗ ಇಡೀ ನವಲಗುಂದ ಮಾತ್ರವಲ್ಲ, ಸಮಾಜವೇ ಆಘಾತಪಡುವಂತಹ ಅಂಶ ಬೆಳಕಿಗೆ ಬಂದಿದೆ ಎಂದು ಹೇಳಲಾಗುತ್ತಿದೆ.

ನವಲಗುಂದ ಪಟ್ಟಣದ ಅಶೋಕ ಲಾಡ್ಜ್‌ವೊಂದರ ಫ್ಯಾನಿಗೆ ಜೋಡಿಯಾಗಿಯೇ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಇವರು ಕುಮಾರ ತಳವಾರ ಹಾಗೂ ಯುವತಿಯೊಬ್ಬಳು ಎಂದು ಹೇಳಲಾಗುತ್ತಿದೆ. ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣದ ಬಸ್ ನಿಲ್ದಾಣದ ಎದುರಿನ ಅಶೋಕ ಲಾಡ್ಜ್‌ನಲ್ಲಿ ಹೀಗೆ ನೇಣು ಕುಣಿಕೆಗೆ ಕೊರಳೊಡ್ಡಿದ ಇವರನ್ನು ಆರಂಭದಲ್ಲಿ ಎಲ್ಲರೂ ಪ್ರೇಮಿಗಳೇ ಇರಬಹುದೆಂದು ಭಾವಿಸಿದ್ದರು. ಆದರೆ ಆ ಬಳಿಕ ಬಯಲಾದ ಅಚ್ಚರಿಯ ಸಂಗತಿ ಅಂದ್ರೆ ಸಂಬಂಧದಲ್ಲಿ ಇವರಿಬ್ಬರು ಅಣ್ಣ-ತಂಗಿ ಎಂದು ಸಂಬಂಧಿಕರೆ ಹೇಳಿಕೊಂಡಿದ್ದಾರೆ.

ಹೌದು! ಹೀಗೆ ಜೋಡಿಯಾಗಿಯೇ ಸತ್ತು ಹೋಗಿರೋ ಇವರು ರಕ್ತ ಸಂಬಂಧದಲ್ಲಿ ಅಕ್ಕ ತಂಗಿಯರ ಮಕ್ಕಳು‌. ಹೀಗಾಗಿ ಇವರ ಈ ಆತ್ಮಹತ್ಯೆ ಪ್ರಕರಣ ಅನೇಕ ಸಂಶಯಗಳಿಗೆ ಕಾರಣವಾಗಿದ್ದು, ಇಬ್ಬರ ಮಧ್ಯೆ ಅಣ್ಣ ತಂಗಿಯ ಸಂಬಂಧವನ್ನೇ ಮೀರಿದ ಪ್ರೀತಿ ಉಂಟಾಗಿತಂತೆ. ಅದೇ ಕಾರಣಕ್ಕೆ ಹೀಗೆ ಮಾಡಿಕೊಂಡಿದ್ದು ಇದು ಸರಿಯಲ್ಲ ಅನ್ನೋ ಅಭಿಪ್ರಾಯ ವ್ಯಕ್ತವಾಗಿದೆ. ಸಂಬಂಧಿಕರಿಂದ ವ್ಯಕ್ತವಾಗಿದೆ. ಆದರೆ ಇವರಿಬ್ಬರು ಇಡಿ ಸಮಾಜವೇ ತಲೆ‌ತಗ್ಗಿಸುವ ಕೆಲಸವನ್ನ ಮಾಡಿದ್ದಾರೆ, ನಾವು ಹೇಗೆ ಮುಖ‌ ಎತ್ತಿಕ್ಕೊಂಡು ಬದುಕುವುದು ಎಂದು ಸಂಬಂಧಿಕರು ಕಣ್ಣೀರು ಹಾಕುವಂತಾಗಿದೆ.

22 ವಯಸ್ಸಿನ ಕುಮಾರ ನವಲಗುಂದ ತಾಲೂಕಿನ ಬೆಳವಟಗಿ ಗ್ರಾಮದವನು. ಧಾರವಾಡ ತಾಲೂಕಿನ ನೀರಲಕಟ್ಟಿ ಗ್ರಾಮದ ಯುವತಿ. ಇಬ್ಬರ ತಾಯಿಯಂದಿರೂ ಅಕ್ಕತಂಗಿಯರು‌. ಹೀಗಾಗಿ ಕುಮಾರ ಮತ್ತು ದೀಪಾ‌ ಜೋಡಿಯಾಗಿ ಓಡಾಡುವಾಗ ಇವರ ಸಂಬಂಧದ ಬಗ್ಗೆ ಯಾರಿಗೂ ಸಂಶಯವೇ ಇರಲಿಲ್ಲ. ಇನ್ನು ಧಾರವಾಡಲ್ಲಿ ಕೆಲಸ ಹಿಡಿತೇನಿ. ಕಂಪನಿಯೊಂದರಲ್ಲಿ ಕೆಲಸ ಸಿಗೋದು ಇದೇ ಇದೆ ಅಂತಾ ಹೇಳಿಕೊಂಡು ಆಗಾಗ ನೀರಲಕಟ್ಟಿಯ ಚಿಕ್ಕಮ್ಮನ ಮನೆಗೆ ಬರುತ್ತಿದ್ದ ಕುಮಾರ, ಅನೇಕ ಸಲ ತಿಂಗಳಾನುಗಟ್ಟಲೇ ಚಿಕ್ಕಮ್ಮನ ಮನೆಯಲ್ಲಿಯೇ ಉಳಿದು ಬಿಡುತ್ತಿದ್ದಂತೆ. 

ಡಿಸೆಂಬರ್ 5ರಂದು ಕುಮಾರ, ಬೆಂಗಳೂರಿನಲ್ಲಿ ಕೆಲಸ ಸಿಕ್ಕಿದೆ ಹೋಗುತ್ತೇನೆ ಅಂತಾ ತನ್ನ ಮನೆಯಲ್ಲಿ ಹೇಳಿ ಹೋಗಿದ್ದಾನೆ. ಅತ್ತ ಪಿಯುಸಿ ಓದುತ್ತಿರೋ ದೀಪಾ, ಡಿ. 5ರಂದು ಕಾಲೇಜ್‌ಗೆ ಹೋದವಳು ಮನೆಗೆ ವಾಪಸ್ ಬಂದಿರಲೇ‌ ಇಲ್ಲ. ಅಣ್ಣ ತಂಗಿ ಇಬ್ಬರು ಸೇರಿ ಊರಿಗೆ ಹೋಗಿರಬಹುದು ಎಂದುಕೊಂಡು ಮನೆಯವರೆಲ್ಲ ಸುಮ್ಮನಾಗಿ ಬಿಟ್ಟಿದ್ದಾರೆ. ಆದ್ರೆ ಇವರು ಅದೇ ಡಿ. 5ರಂದೇ ಅಶೋಕ ಲಾಡ್ಜ್ ಸೇರಿದವರು ಹೊರಗೆ ಬಂದೇ ಇಲ್ಲ. ಯಾವಾಗ ಇವರ ರೂಮ್ ಬಾಗಿಲು ಬುಧವಾರ ಇಡೀ ದಿನ ತೆಗೆದೇ ಇಲ್ಲವೋ ಆಗ ಬಾಗಿಲು ತೆರದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರೋದು ಬಹಿರಂಗಗೊಂಡಿದೆ.

ಸದ್ಯ ಇಬ್ಬರ ಮಧ್ಯೆ ಅಣ್ಣ ತಂಗಿ ಸಂಬಂಧದ ಹೊರತಾಗಿ ಬೇರೆ ರೀತಿಯ ಪ್ರೀತಿ ಇತ್ತಾ ಅಂತಾ ಯಾರೂ ಸಹ ಊಹಿಸಿಕೊಳ್ಳುತ್ತಿಲ್ಲ‌. ಊಹಿಸಿಕೊಳ್ಳಲು ಆಗದಂತಹುದೇ ಆದರೆ ಇವರಿಬ್ಬರು ಮಾಡಿಕೊಂಡಿರೋ ಈ ಅವಾಂತರ ಈಗ ಸಮಾಜಕ್ಕೆ ಒಂದು ಕಪ್ಪು ಚುಕ್ಕೆಯಾಗಿ ಹೋಗಿದ್ದು, ಎರಡೂ ಕಡೆಯ ಕುಟುಂಬಗಳು ಇವರು ಮಾಡಿದ ತಪ್ಪಿಗೆ ಅವಮಾನ ಎದುರಿಸುವಂತಾಗಿದೆ. ಇನ್ನು ಸ್ಥಳಕ್ಕೆ‌ ನವಲಗುಂದ ಪಿಎಸ್‌ಐ ನವೀನ್ ಜಕ್ಲಿ ಭೇಟಿ ನಿಡಿ ಪ್ರಕರಣವನ್ನ‌ ದಾಖಲಿಸಿಕ್ಕೊಂಡಿದ್ದಾರೆ. ಇದು ನಿಜವಾಗಿಯೂ ಆತ್ಮಹತ್ಯೆಯಾ ಅಥವಾ ಯಾರಾದ್ರೂ ಕೊಲೆ ಮಾಡಿದ್ದಾರಾ ಅನ್ನೋ ಅನುಮಾನವನ್ನ ಸಂಬಂಧಿಕರು ಹೊರ ಹಾಕಿದ್ದಾರೆ. ಆದಷ್ಟು ಬೇಗ ಪೋಲಿಸರು ತನಿಖೆ ನಡೆಸಿ ಇದು ಕೊಲೆನಾ, ಇವರೇ ಆತ್ಮಹತ್ಯೆ ಮಾಡಿಕ್ಕೊಂಡ್ರಾ ಎಂಬುದು ಪೋಲಿಸ್ ತನಿಖೆಯಿಂದ ಹೊರಬರಬೇಕಿದೆ. ಅದರಲ್ಲೂ ರೂಂ ಬಾಡಿಗೆ ಕೊಡಿಸಿದವರ ವಿಚಾರಣೆಯನ್ನ ಪೋಲಿಸರು ಮುಂದುವರೆಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ