ಬೆಂಗಳೂರು: ಸೆಕ್ಸ್ ವಿಚಾರಕ್ಕಾಗಿ ಸಲಿಂಗಕಾಮಿಗಳ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದ್ದು, ಹತ್ಯೆ ಆರೋಪದಡಿ ಆರೋಪಿಯನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಮೂಡಲಪಾಳ್ಯ ನಿವಾಸಿ ರಕ್ಷಿತ್ ಗೌಡ ಬಂಧಿತ ಆರೋಪಿ. ಕೃತ್ಯದ ಹಿಂದೆ ರಕ್ಷಿತ್ ಎಂಬಾತ ಭಾಗಿಯಾಗಿರುವುದು ಕಂಡು ಬಂದಿದ್ದು, ಈ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದಾರೆ. ವಿಚಾರಣೆ ವೇಳೆ ಸೆಕ್ಸ್ ವಿಚಾರಕ್ಕಾಗಿ ಪ್ರದೀಪ್ನನ್ನ ಹತ್ಯೆ ಮಾಡಿರುವುದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇನ್ನೂ ಕೊಲೆಯಾದ ಪ್ರದೀಪ್ ಪುರುಷನಾದರೂ ಹೆಣ್ಣಿನ ರೀತಿ ವೇಷ ಧರಿಸುತ್ತಿದ್ದ. ಸ್ಥಳೀಯರೆಲ್ಲರೂ ಈತನನ್ನ ಹೆಂಗಸು ಎಂದೇ ಭಾವಿಸಿದ್ದರು.
ಕ್ಯಾಷಿಯರ್ ಲೇಔಟ್ನಲ್ಲಿ ಬಾಡಿಗೆ ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ಪ್ರದೀಪ್ ಜೀವನಕ್ಕಾಗಿ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ. ಪುರುಷರೊಂದಿಗೆ ಸಂಬಂಧದ ಬಗ್ಗೆ ಅತೀವ ಆಸಕ್ತಿ ಹೊಂದಿದ್ದ. ಮತ್ತೊಂದೆಡೆ ಆಟೋ ಚಾಲಕನಾಗಿದ್ದ ಆರೋಪಿ ರಕ್ಷಿತ್ ಪ್ರದೀಪ್ ಮನೆಗೆ ಎರಡು ಮೂರು ಬಂದು ಹೋಗಿದ್ದ. ಈ ವೇಳೆ ಇಬ್ಬರ ನಡುವೆ ಲೈಂಗಿಕ ಕ್ರಿಯೆ ನಡೆದಿದೆ. ಆರಂಭದಲ್ಲಿ ಪ್ರದೀಪ್ನನ್ನು ಹೆಂಗಸು ಎಂಸು ಭಾವಿಸಿದ್ದ ಆರೋಪಿಯು ತದನಂತರ ವಿಷಯ ಗೊತ್ತಾದರೂ ಸೆಕ್ಸ್ ಮುಂದುವರೆಸಿದ್ದ. ಕಳೆದ ತಿಂಗಳು 28 ರಂದು ಆರೋಪಿ ರಕ್ಷಿತ್ ಪ್ರದೀಪ್ ಮನೆಗೆ ಬಂದಿದ್ದ. ಕುಡಿದ ಅಮಲಿನಲ್ಲಿ ಲೈಂಗಿಕ ಕ್ರಿಯೆ ನಡೆಸುವಾಗ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ಮೊದಲು ಚಾಕುವಿನಿಂದ ಪ್ರದೀಪ್ ರಕ್ಷಿತ್ ಮೇಲೆ ಹಲ್ಲೆ ಮಾಡಿದ್ದಾನೆ. ಪ್ರತಿರೋಧವಾಗಿ ಅದೇ ಚಾಕುವಿನಿಂದ ರಕ್ಷಿತ್, ಪ್ರದೀಪ್ ಹೊಟ್ಟೆಗೆ ತಿವಿದು ಹತ್ಯೆ ಮಾಡಿ ಮನೆಗೆ ಬೀಗ ಜಡಿದು ಎಸ್ಕೇಪ್ ಆಗಿದ್ದ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,
ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?