ಶಿರ್ಲಾಲು ಗ್ರಾಮ ಪಂಚಾಯತ್ ವ್ಯಾಪ್ತಿಯ ಕರಂಬಾರು ಬಂತಡ್ಕ ಜನತೆಗೆ ಕುಡಿಯಲು ನೀರಿಲ್ಲ . ಆಕ್ರೋಶಗೊಂಡ ಸ್ಥಳೀಯರಿಂದ ಪಂಚಾಯತ್ ಬಳಿ ಪ್ರತಿಭಟನೆ.
Twitter
Facebook
LinkedIn
WhatsApp
ಬೆಳ್ತಂಗಡಿ ತಾಲೂಕಿನ ಶಿರ್ಲಾಲ್ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಂತಡ್ಕದ ಜನತೆಗೆ ನಾಲ್ಕೈದು ದಿವಸಗಳ ಸರಿಯಾದ ರೀತಿಯಲ್ಲಿ ನೀರಿಲ್ಲದ ಕಾರಣ ಇಂದು ಆಕ್ರೋಶಗೊಂಡ ಸ್ಥಳೀಯರು ಪಂಚಾಯತ್ ತೆರಳಿ ಪ್ರತಿಭಟನೆ ನಡೆಸಿದರು
ಪಂಚಾಯತ್ ಪಿಡಿಒ ಅವರನ್ನು ತರಾಟೆಗೆ ತೆಗೆದುಕೊಂಡ ಸ್ಥಳೀಯರು ನಮಗೆ ಸರಿಯಾದ ರೀತಿಯಲ್ಲಿ ನೀರು ಇಲ್ಲ ಎಂದು ಅಕ್ರೋಶ ಹೊರ ಹಾಕಿದರು.
ನಮಗೆ ಸರಿಯಾದ ರೀತಿಯಲ್ಲಿ ನೀರಿನ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕೆಂದು ಗ್ರಾಮ ಪಂಚಾಯತ್ ಪಿಡಿಯೋಗೆ ಸ್ಥಳೀಯರು ಮನವಿ ಮಾಡಿದ್ದಾರೆ.
ಸ್ಥಳೀಯರಾದ. ಆನಂದ ಪೂಜಾರಿ. ತಿಮ್ಮಪ್ಪ ಶೆಟ್ಟಿ. ಸಿದ್ದೀಕ್ ಬಂತಡ್ಕ. ಹರೀಶ. ಸುರೇಶ. ಲಕ್ಷ್ಮಿ ಅಶ್ರಫ್. ಮೊಹಮ್ಮದ್. ಕೊರಗಪ್ಪ ಮೊದಲಾದರು ಉಪಸ್ಥಿತರಿದ್ದರು