ಮಂಗಳೂರು: ಇಲ್ಲಿನ ರಾಮಕೃಷ್ಣ ಮಠದ ನಿಕಟಪೂರ್ವ ಅಧ್ಯಕ್ಷ ಪೂಜ್ಯ ಸ್ವಾಮಿ ಪೂರ್ಣಕಾಮಾನಂದಜಿ ಮಹಾರಾಜ್ (81) ಗುರುವಾರ(ಡಿ.15) ಬೆಳಗ್ಗೆ ಮಹಾಸಮಾಧಿ ಹೊಂದಿದರು.
81 ವರ್ಷ ವಯಸ್ಸಾಗಿದ್ದ ಸ್ವಾಮೀಜಿಯ ಹುಟ್ಟೂರು ಬಾಗಲಕೋಟೆ. ಶ್ರೀಮಾತೆ ಶಾರದಾದೇವಿಯವರ ಜನ್ಮ ಜಯಂತಿಯಂದೇ ಇಂದು ಬೆಳಗ್ಗೆ 6.15 ಕ್ಕೆ ಹೃದಯಾಘಾತದಿಂದಾಗಿ ಇಹಲೋಕ ತ್ಯಜಿಸಿದರು.
ಶ್ರೀ ರಾಮಕೃಷ್ಣ- ವಿವೇಕಾನಂದರ ತತ್ವಾದರ್ಶಗಳಿಂದ ಪ್ರಭಾವಿತರಾದ ಸ್ವಾಮಿಜಿ 1969 ರಲ್ಲಿ ಭಾರತೀಯ ನೌಕಾ ಸೇನೆಯಿಂದ ನಿವೃತ್ತಿ ಪಡೆದು ಮುಂಬೈ ರಾಮಕೃಷ್ಣ ಮಠಕ್ಕೆ ಬ್ರಹ್ಮಚಾರಿಯಾಗಿ ಸೇರಿದರು.
ರಾಮಕೃಷ್ಣ ಮಹಾಸಂಘದ 10ನೆೇ ಅಧ್ಯಕ್ಷರಾಗಿದ್ಧ ಪರಮ ಪೂಜ್ಯ ಸ್ವಾಮಿ ವಿರೇಶ್ವರಾನಂದಜಿ ಯವರಿಂದ ಮಂತ್ರದೀಕ್ಷೆ ಪಡೆದರು. 1978 ರಲ್ಲಿ ಸನ್ಯಾಸ ದೀಕ್ಷೆಯನ್ನು ಸ್ವೀಕರಿಸಿ ಮುಂಬೈ, ಅರುಣಾಚಲಪ್ರದೇಶ ಮತ್ತು ಮಾರಿಷಸ್ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿದರು.
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?