ನವದೆಹಲಿ: ಪಂಜಾಬಿ ಗಾಯಕ ಹಾಗೂ ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಅವರನ್ನು ಭಾನುವಾರ ಮಾನ್ಸಾ ಬಳಿ ಗುಂಡಿಕ್ಕಿ ಹತ್ಯೆ ಮಾಡಲಾಯಿತು. ಆದರೆ ಹತ್ಯೆಯಾದ ಒಂದು ದಿನದ ಬಳಿಕ ಮತ್ತೊಂದು ಸ್ಫೋಟಕ ಸತ್ಯ ಬಯಲಾಗಿದೆ.
ಹಂತಕರು ಮೂಸೆ ವಾಲಾ ಅವರನ್ನು ಹತ್ಯೆ ಮಾಡಲು ಮುಂದಾಗಿದ್ದರು. ಆಗ ಅವರ ಭದ್ರತೆಯಲ್ಲಿ ನಿಯೋಜಿಸಲಾದ ಎಕೆ-47 ರೈಫಲ್ಗಳೊಂದಿಗೆ ಶಸ್ತ್ರ ಸಜ್ಜಿತ ಕಮಾಂಡೋಗಳನ್ನು ಕಂಡು ಹಿಂದಿರುಗಿದ್ದರು. ನಂತರ ಕೆನಡಾದ ದರೋಡೆಕೋರ ಗೋಲ್ಡಿ ಬ್ರಾರ್ನಿಂದ ಎಎನ್-94 ರೈಫಲ್ ಅನ್ನು ತಂದಿದ್ದಾರೆ. ಅದರಿಂದಲೇ ಗುಂಡುಹಾರಿಸಿ ಹತ್ಯೆ ಮಾಡಲಾಗಿದೆ.
AK-47 ಗಿಂತಲೂ ಭಯಾನಕ ರೈಫಲ್: AN-94 ರಷ್ಯಾದ ಆಕ್ರಮಣಕಾರಿ ರೈಫಲ್ ಆಗಿದೆ. ಎಎನ್ ಎಂಬ ಸಂಕ್ಷಿಪ್ತ ರೂಪವು `ಅವ್ಟೊಮತ್ ನಿಕೊನೊವಾ’ ಮಾಡೆಲ್ 1994 ಅನ್ನು ಸೂಚಿಸುತ್ತದೆ. ಎಎನ್-94 ಅನ್ನು ಅದರ ಮುಖ್ಯ ವಿನ್ಯಾಸಕ ಗೆನ್ನಡಿ ನಿಕೊನೊವ್ ಹೆಸರಿಡಲಾಗಿದೆ. ಅವರು ಈ ಹಿಂದೆ ನಿಕೊನೊವ್ ಮೆಷಿನ್ ಗನ್ ಅನ್ನು ವಿನ್ಯಾಸಗೊಳಿಸಿದ್ದರು. 1980 ರಲ್ಲಿ ಎಎನ್-94 ತಯಾರಿಸುವ ಕಾರ್ಯ ಪ್ರಾರಂಭವಾಗಿ 1994 ರಲ್ಲಿ ಪೂರ್ಣಗೊಂಡಿತು.
ನಂತರ 1997ರಲ್ಲಿ ರಷ್ಯಾ ಸೈನ್ಯಕ್ಕೆ ಎಎನ್-47 ರೈಫಲ್ ಅನ್ನು ಸೇರಿಸಲಾಯಿತು. ಈಗಲೂ ರಷ್ಯಾ ಸೈನ್ಯ ಇದನ್ನು ಬಳಸುತ್ತಿದೆ. ಕೆಲವು ಶಸ್ತ್ರಾಸ್ತ್ರಗಳ ಅವಶ್ಯಕತೆಗಳನ್ನು ಪೂರೈಸಲು ಇದನ್ನು ಬಳಸಲಾಗುತ್ತಿದೆ ಎಂದು ಸುದ್ದಿ ಮಾಧ್ಯಮಗಳು ವರದಿಮಾಡಿವೆ.
ಎಎನ್-94 ರೈಫಲ್ನ ವಿಶೇಷತೆಗಳೇನು?
ಉಪ್ಪಿನಂಗಡಿ: ಹೃದಯಾಘಾತದಿಂದ ಯುವಕ ಸಾವು.! Twitter Facebook LinkedIn WhatsApp ಉಪ್ಪಿನಂಗಡಿ: ಇಲ್ಲಿನ ನಿನ್ನಿಕಲ್ಲು ನಿವಾಸಿ ದಿ| ಗೋಪಾಲ ಗೌಡ ಅವರ ಪುತ್ರ ಜನಾರ್ದನ ನಿನ್ನಿಕಲ್ಲು (27) ಅವರು ಹೃದಯಾಘಾತದಿಂದ ಶುಕ್ರವಾರ ನಿಧನರಾಗಿದ್ದಾರೆ. ಮೇಸ್ತ್ರಿ
ಸುಬ್ರಮಣ್ಯ: ಹತ್ತು ದಿನದ ಹಿಂದೆ ಅಷ್ಟೇ ಮದ್ವೆ ಆಗಿದ್ದ ನವ ವಿವಾಹಿತ ಸಿಡಿಲಿಗೆ ಬಲಿ..! Twitter Facebook LinkedIn WhatsApp ಸುಬ್ರಮಣ್ಯ: 10 ದಿನಗಳ ಹಿಂದೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ಯುವಕ ಸಿಡಿಲು ಬಡಿದು ಸಾವನ್ನಪ್ಪಿರುವ
ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?