ಮಂಗಳವಾರ, ಏಪ್ರಿಲ್ 30, 2024
ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!-ನಮ್ಮದು ಮತ್ತು ರೇವಣ್ಣಕುಟುಂಬವೇ ಬೇರೆ ಬೇರೆ; ಕುಮಾರಸ್ವಾಮಿ-ಹೆತ್ತ ತಂದೆಯನ್ನೇ ಹಿಗ್ಗಾಮುಗ್ಗಾ ಮುಖಕ್ಕೆ ಜಾಡಿಸಿ ಮಗನಿಂದ ಕ್ರೂರ ಕೃತ್ಯ ; ಇಲ್ಲಿದೆ ವಿಡಿಯೋ-Gold Rate: ಏರಿಳಿತದಲ್ಲಿರುವ ಚಿನ್ನದ ದರ ; ಇಲ್ಲಿದೆ ಇಂದಿನ ಚಿನ್ನ-ಬೆಳ್ಳಿಯ ದರದ ವಿವರ-ಅಮಿತ್ ಶಾ ಹೇಳಿಕೆ ತಿರುಚಿದ ಆರೋಪ ; ತೆಲಂಗಾಣ ಸಿಎಂ ರೇವಂತ್ ರೆಡ್ಡಿಗೆ ಸಮನ್ಸ್..!-ನಾಮಪತ್ರ ಹಿಂಪಡೆದ ಕಾಂಗ್ರೆಸ್ ಅಭ್ಯರ್ಥಿ; ಬಿಜೆಪಿ ಸೇರ್ಪಡೆ ಸಾಧ್ಯತೆ.!-ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಕೇಸ್ ಗೆ ಟ್ವಿಸ್ಟ್ ದೂರುದಾರೆಯ ಅತ್ತೆಯಿಂದ ಶಾಕಿಂಗ್ ಹೇಳಿಕೆ.!-ಸಂಸದ ಪ್ರಜ್ವಲ್​ ರೇವಣ್ಣ ಜೆಡಿಎಸ್​ನಿಂದ ಉಚ್ಚಾಟನೆ.!-ಗೃಹಲಕ್ಷ್ಮಿ ಯೋಜನೆ ಹಣದಿಂದ ಮೊಬೈಲ್ ಖರೀದಿಸಿದ ಮಹಿಳೆ; ಡಿಸ್ಪ್ಲೇ ಪಿಚ್ಚರ್ ವೈರಲ್!-ಮಾಜಿ ಸಿಎಂ ಎಸ್​ಎಂ ಕೃಷ್ಣ ಆಸ್ಪತ್ರೆಗೆ ದಾಖಲು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಎಂದ ರೇಮಂಡ್ ಕಂಪನಿಯ ಸಂಸ್ಥಾಪಕ.

Twitter
Facebook
LinkedIn
WhatsApp
ಮಕ್ಕಳಿಗಾಗಿ ಆಸ್ತಿ ಮಾಡಬೇಡಿ ಎಂದ ರೇಮಂಡ್ ಕಂಪನಿಯ ಸಂಸ್ಥಾಪಕ.

ಮಕ್ಕಳಿಗೆ ಆಸ್ತಿ ಮಾಡಿ ಇಡಬೇಡಿ ಬದಲಾಗಿ ಮಕ್ಕಳನ್ನೇ ಆಸ್ತಿಯನ್ನಾಗಿಸಿ. ಎಂಬ ಮಾತು ಹಲವಾರು ವರ್ಷಗಳಿಂದ ಪ್ರಚಲಿತದಲ್ಲಿದೆ. ಇದೇ ಮಾತನ್ನು ಇತ್ತೀಚೆಗೆ ತಮ್ಮ ಹೇಳಿಕೆಗಳಿಂದಲೇ ಅತೀ ಹೆಚ್ಚು ಪ್ರಚಲಿತದಲ್ಲಿರುವ ರೇಮಂಡ್ ಗ್ರೂಪ್ ನ ಮಾಜಿ ಛೇರ್ಮನ್ ವಿಜಯಪತ್ ಸಿಂಘನಿಯ ಅವರು ಪುನರುಚ್ಚಿಸಿರಿಸಿದಂತಿದೆ.
ಅದೇನೆಂದರೆ, ‘ಮಕ್ಕಳಿಗೆ ಎಂದೆಂದಿಗೂ ಆಸ್ತಿ ಮಾಡಿ ಕೊಡಬೇಡಿ’ ಎಂದು ಹೇಳಿಕೆ ನೀಡಿದ್ದಾರೆ. ಮುಂದುವರೆದು ನನ್ನ ಜೀವನದಲ್ಲಿ ನಾನು ಬಹುದೊಡ್ಡ ಪಾಠ ಕಲಿತಿದ್ದೇನೆ ಎಂದಿದ್ದಾರೆ. ತಮ್ಮ ಆತ್ಮಕಥನ “An Incomplete Life” ಅನ್ನು ಬಿಡುಗಡೆ ಮಾಡಿದ್ದು ಅದರಲ್ಲಿ ತಮ್ಮ ಜೀವನದ ಬಗೆಗಿನ ಹಲವಾರು ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ.

ವಿಜಯಪತ್ ಅವರು ತಮ್ಮ ಪರಿವಾರದಲ್ಲಿ ಆಸ್ತಿಯ ವಿಚಾರವಾಗಿ ನಡೆದ ಒಂದು ಬಿರುಕಿನ ಬಗ್ಗೆಯೂ ಸಹ ಬರೆದಿದ್ದಾರೆ. ಇದರೊಂದಿಗೆ ಅವರು ತಮ್ಮ ಬಾಲ್ಯದ ದಿನಗಳಿಗೆ ಸಂಬಂಧಿಸಿದ ಕೆಲವು ವಿಷಯಗಳನ್ನು ಹಂಚಿಕೊಂಡಿದ್ದಾರೆ. ಇನ್ನು ತಮ್ಮ ಅನುಭವ ಹಂಚಿಕೊಳ್ಳುತ್ತಾ “ನನ್ನ ಜೀವನದಲ್ಲಿ ನಾನು ಕಲಿತ ಅತ್ಯಂತ ದೊಡ್ಡ ಪಾಠವೆಂದರೆ ಅದು ‘ನಾನು ಜೀವಂತವಿರುವಾಗ ನನ್ನ ಆಸ್ತಿಯನ್ನು ನನ್ನ ಮಕ್ಕಳಿಗೆ ಬಿಟ್ಟು ಕೊಡುವಾಗ ಬಹಳಷ್ಟು ಎಚ್ಚರಿಕೆ ಹಾಗೂ ಕಾಳಜಿವಹಿಸಬೇಕು’ ಎಂದಿದ್ದಾರೆ. ಮುಂದುವರೆದು ನಿಮ್ಮ ಆಸ್ತಿ ನಿಮ್ಮ ಮಕ್ಕಳಿಗೆ ಸೇರಬೇಕು ಆದರೆ ಅದು ನಿಮ್ಮ ಸಾವಿನ ನಂತರ ಸೇರಬೇಕು, ಏಕೆಂದರೆ ನನ್ನ ಉದ್ದೇಶ ಇಷ್ಟೇ ಎಲ್ಲ ತಂದೆ ತಾಯಿಯರು ನನ್ನಂತೆ ಅಲೆಯುವ ಪರಿಸ್ಥಿತಿ ಬರಬಾರದು ಎಂಬುದೇ ಆಗಿದೆ..! ಎನ್ನುತ್ತಾರೆ ವಿಜಯಪತ್ .

ನೀವು ನಂಬುತ್ತಿರೋ ಬಿಡುತ್ತಿರೋ ವಿಜಯಪತ್ ಅವರು ತಮ್ಮ ಆಸ್ತಿಯನ್ನು ಬಿಟ್ಟುಕೊಟ್ಟ ನಂತರ ಅವರು ಅದೆಂತಹ ಕಷ್ಟದ ದಿನಗಳನ್ನು ಎದುರಿಸಬೇಕಾಗಿ ಬಂದಿತ್ತೆಂದರೆ 1200 ಕೋಟಿ ರೂಪಾಯಿ ಮೌಲ್ಯದ ರೇಮಂಡ್ ಗ್ರೂಪ್ ನ ಒಡೆಯ ಒಡೆಯನಾಗಿದ್ದ ವಿಜಯಪತ್ ಅವರು ತಮ್ಮ ಕಛೇರಿಗೆ ಹೋಗದಂತಹ ಪರಿಸ್ಥಿತಿ ಇತ್ತು. ಅಲ್ಲಿ ತಮಗೆ ಸಂಬಂಧಪಟ್ಟ ಕೆಲವು ಮಹತ್ವಪೂರ್ಣ ದಾಖಲೆಗಳನ್ನೇ ನೋಡದಂತಹ ಪರಿಸ್ಥಿತಿ, ಅಲ್ಲಿನ ಕೆಲವು ಅವಶ್ಯಕ ಸಾಮಗ್ರಿಗಳನ್ನು ಮುಟ್ಟದ ಪರಿಸ್ಥಿತಿ, ಇದಷ್ಟೇ ಅಲ್ಲದೇ ಮುಂಬೈ ಹಾಗೂ ಲಂಡನ್ ನಲ್ಲಿರುವ ತಮ್ಮ ಕಾರನ್ನು ಅಲ್ಲಿಯೇ ಬಿಟ್ಟು ಬಿಡಬೇಕಾಯಿತು. ಅಷ್ಟೇ ಅಲ್ಲದೇ ತನ್ನ ಕಂಪನಿಯ ಸಿಬ್ಬಂದಿಗಳೊಂದಿಗೆ ಮಾತನ್ನು ಸಹ ಆಡದೆ ಇರುವಂತಹ ಹಾಗೂ ವಿಜಯಪತ್ ಅವರ ಕಛೇರಿಯ ಒಳಗೂ ಅವರ ಕಂಪನಿಯ ಕೆಲಸಗಾರರಿಗೆ ಬರದೇ ಇರುವಂತಹ ಪರಿಸ್ಥಿತಿಗೆ ತಂದು ಇಟ್ಟಿದ್ದರು ವಿಜಯಪತ್ ಅವರ ಮಗ. ಒಂದು ಕಾಲದಲ್ಲಿ 1200 ಕೋಟಿ ರೂಪಾಯಿ ಆಸ್ತಿ ಹೊಂದಿ ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಹೆಸರು ಮಾಡಿಕೊಂಡಿದ್ದ ವಿಜಯಪತ್ ಅವರು ಇಂದು ಎಂತಹ ಪರಿಸ್ಥಿತಿ ಎದುರಿಸುತ್ತಿದ್ದಾರೆ ಎಂದರೆ, ಒಂದೊಂದು ಪೈಸೆ ಪೈಸೆಗೂ ಯೋಚನೆ ಮಾಡಬೇಕಾದ ಪರಿಸ್ಥಿತಿ ಬಂದಿದೆ. ಒಂದು ಸಮಯದಲ್ಲಿ ವಿಜಯಪತ್ ಸಿಂಘನಿಯ ಅವರ ಆಡಂಬರ ಹೇಗಿತ್ತು ಎಂದರೆ ದೇಶದ ಅತ್ಯಂತ ಶ್ರೀಮಂತ ಮುಖೇಶ್ ಅಂಬಾನಿಯವರು ಈಗ ವಾಸವಿರುವ ಎಂಟಲಿಯಾ ಮನೆಗಿಂತಲೂ ದೊಡ್ಡ ಹಾಗೂ ಆಡಂಬರದ ಮನೆ ಜೆಕೆ ಹೌಸ್ ನಲ್ಲಿ ವಾಸವಿದ್ದರು.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !!

ಮಂಗಳೂರು ಲೋಕಸಭಾ ಚುನಾವಣೆ 2024: ಹಳ್ಳಿ ಗಲ್ಲಿಗಳಲ್ಲಿ ಕಾಂಗ್ರೆಸ್- ಬಿಜೆಪಿ ಸಮೀಕ್ಷೆಯ ಬಗ್ಗೆ ಮಾತುಕತೆ. ಮೂಡಬಿದ್ರಿ-ಬೆಳ್ತಂಗಡಿಯ ಬಿಲ್ಲವ ಮತ, ನೋಟಾದ ಬಗ್ಗೆ ವ್ಯಾಪಕ ಚರ್ಚೆ ಬಗ್ಗೆ !! Twitter Facebook LinkedIn WhatsApp ಮಂಗಳೂರು:

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು