ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮಂಡ್ಯದಲ್ಲಿ ಅಪರೂಪದ ಪ್ರೇಮಕಥೆ. ಬರೋಬ್ಬರಿ 35 ವರ್ಷಗಳ ನಂತರ ಒಂದಾದ ಪ್ರೇಮಿಗಳು.

Twitter
Facebook
LinkedIn
WhatsApp
ಮಂಡ್ಯದಲ್ಲಿ ಅಪರೂಪದ ಪ್ರೇಮಕಥೆ. ಬರೋಬ್ಬರಿ 35 ವರ್ಷಗಳ ನಂತರ ಒಂದಾದ ಪ್ರೇಮಿಗಳು.

ಆತ ಸೋದರತ್ತೆ ಮಗಳನ್ನೇ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ, ಆದರೆ ಆತನ ಅದೃಷ್ಟ ದಲ್ಲಿ ಆಕೆಯೊಂದಿಗೆ ಬದುಕೋದು ಬರೆದಿರಲಿಲ್ಲ. ಹೀಗಂತ ಆತ ಪ್ರೀತಿಯನ್ನು (S ಬಿಟ್ಟುಕೊಡಲು ಸಿದ್ಧವಿರಲಿಲ್ಲ. ಕೊನೆಗೂ ಗೆದ್ದಿದ್ದು ಆತನ ಪ್ರೀತಿ. ಫಲವಾಗಿ 35 ವರ್ಷದ ಬಳಿಕ ಪ್ರೀತಿಸಿದಾಕೆಯೊಂದಿಗೆ ಸಪ್ತಪದಿ ತುಳಿದು ಹೊಸಬದುಕಿಗೆ ಕಾಲಿಟ್ಟಿದ್ದಾರೆ.

ಮಂಡ್ಯದಲ್ಲಿ ಅಪರೂಪದ ಪ್ರೇಮಕಥೆ. ಬರೋಬ್ಬರಿ 35 ವರ್ಷಗಳ ನಂತರ ಒಂದಾದ ಪ್ರೇಮಿಗಳು.

ಇಷ್ಟಕ್ಕೂ ನಾವು ಹೇಳ್ತಿರೋದು ಯಾರ ಬಗ್ಗೆ ಅಂದ್ರಾ ತಮ್ಮ 65 ವಯಸ್ಸಿನಲ್ಲೂ ಜೀವನೋತ್ಸಾಹದೊಂದಿಗೆ ಹೊಸ ಬದುಕಿಗೆ ಕಾಲಿಟ್ಟ ಮೈಸೂರಿನ ಮೇಟಗಹಳ್ಳಿ ಹೆಬ್ಬಾಳದ ಚಿಕ್ಕಣ್ಣ ಮತ್ತು ಜಯಮ್ಮ ದಂಪತಿಯ ಬಗ್ಗೆ. ಚಿಕ್ಕಣ್ಣನ ಸೋದರತ್ತೆ ಮಗಳು ಜಯಮ್ಮ. ಚಿಕ್ಕಂದಿನಲ್ಲೇ ಚಿಕ್ಕಣ್ಣ ಜಯಮ್ಮನನ್ನು ಪ್ರೀತಿಸುತ್ತಿದ್ದರಂತೆ. ಆದರೆ ಮನೆಯವರು ಜಯಮ್ಮನನ್ನು ಬೇರೆಯ ಯುವಕನಿಗೆ ಮದುವೆ ಮಾಡಿ ಕೊಟ್ಟಿದ್ದರಂತೆ. ಆದರೆ 35 ವರ್ಷದ ಹಿಂದೆ ಜಯಮ್ಮ ಬೇರೆಯವರನ್ನು ಮದುವೆಯಾದರೂ ಚಿಕ್ಕಣ್ಣ ಮಾತ್ರ ಆಕೆಯ ನೆನಪಿನಲ್ಲೇ ಇದ್ದರಂತೆ.

ಮದುವೆಯಾದ ಜಯಮ್ಮನಿಗೆ ಒಂದು ಮಗ ಹುಟ್ಟಿದ್ದರೂ ಗಂಡ ಹೆಂಡತಿ ನಡುವೆ ಸಾಮರಸ್ಯ ಇರಲಿಲ್ಲ.‌ಹೀಗಾಗಿ ಇಷ್ಟು ವರ್ಷ ಗಂಡನ ಜೊತೆ ಗುದ್ದಾಡಿದ ಜಯಮ್ಮ ಕೊನೆಗೆ ಗಂಡನನ್ನು ತೊರೆದು ತವರಿಗೆ ವಾಪಸ್ಸಾಗಿದ್ದಳು. ಜಯಮ್ಮ ತವರಿಗೆ ವಾಪಸ್ಸಾಗುತ್ತಿದ್ದಂತೆ ಮತ್ತೆ ತನ್ನ ಪ್ರೀತಿಗಾಗಿ ತುಡಿದ ಚಿಕ್ಕಣ್ಣ ಜಯಮ್ಮನ ಮನವೊಲಿಸಿ ಹಿರಿಯರ‌ ಮನವೊಲಿಸಿ ಪ್ರೀತಿಸಿದ ಜೀವದೊಂದಿಗೆ ಹೊಸ ಬದುಕು ಕಟ್ಟಲು ಸಿದ್ಧವಾಗಿದ್ದಾನೆ.

ಮಂಡ್ಯದಲ್ಲಿ ಅಪರೂಪದ ಪ್ರೇಮಕಥೆ. ಬರೋಬ್ಬರಿ 35 ವರ್ಷಗಳ ನಂತರ ಒಂದಾದ ಪ್ರೇಮಿಗಳು.

ಮಂಡ್ಯದ ಮೇಲುಕೋಟೆ ಚೆಲುವರಾಯಸ್ವಾಮಿ ದೇವಾಲಯದಲ್ಲಿ ನಡೆದ ಈ ಅಪರೂಪದ ಮದುವೆಗೆ ಜಯಮ್ಮನ 25 ವರ್ಷದ ಪುತ್ರ ಸೇರಿದಂತೆ ಕುಟುಂಬಸ್ಥರು ಸಾಕ್ಷಿಯಾಗಿದ್ದಾರೆ. ಈ ಜೋಡಿಯ ಮದುವೆ ಪೋಟೋ ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಕೊನೆಗೂ ಕಾದು ಕಾದು ಪ್ರೀತಿಯನ್ನು ಒಲಿಸಿಕೊಂಡ ಚಿಕ್ಕಣ್ಣನ ತಾಳ್ಮೆಯನ್ನು ಶ್ಲಾಘಿಷಿದ್ದಾರೆ.

ಚಿಕ್ಕಣ್ಣ ತನ್ನ ಮದುವೆಯ ಬಗ್ಗೆ ಯಾವುದೇ ಮುಜುಗರವಿಲ್ಲ.‌ ಬದಲಾಗಿ ಈ ಇಳಿ ವಯಸ್ಸಿನಲ್ಲಾದರೂ ತಾನು ಪ್ರೀತಿಸಿದ ಜಯಮ್ಮನನ್ನು ಮದುವೆಯಾದ ಖುಷಿಯಿದೆಯಂತೆ. ಜಯಮ್ಮ ಮದುವೆಯಾಗಿ ಹೋದರೂ ಚಿಕ್ಕಣ್ಣ ಮಾತ್ರ. ಮದುವೆಯಾಗದೇ ಸೋದರತ್ತೆ ಮಗಳ ನೆನಪಿನಲ್ಲೇ ಇಷ್ಟು ವರ್ಷ ಒಂಟಿಯಾಗಿದ್ದರಂತೆ. ಹೀಗಾಗಿ ಚಿಕ್ಕಣ್ಣನ ಈ ಪ್ರೀತಿಯನ್ನು ಕಂಡ ಕುಟುಂಬಸ್ಥರು ಕೂಡ ಮದುವೆಗೆ ಒಪ್ಪಿಕೊಂಡಿದ್ದು ಖುಷಿಯಿಂದ ಸಾಂಪ್ರದಾಯಿಕವಾಗಿ ಜಯಮ್ಮ ಹಾಗೂ ಚಿಕ್ಕಣ್ಣ ಮದುವೆ ನೆರವೇರಿಸಿಕೊಟ್ಟಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು