ಗುರುವಾರ, ಫೆಬ್ರವರಿ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮಂಡ್ಯದಲ್ಲಿ ಅಪರೂಪದ ಪ್ರೇಮಕಥೆ. ಬರೋಬ್ಬರಿ 35 ವರ್ಷಗಳ ನಂತರ ಒಂದಾದ ಪ್ರೇಮಿಗಳು.

Twitter
Facebook
LinkedIn
WhatsApp
ಮಂಡ್ಯದಲ್ಲಿ ಅಪರೂಪದ ಪ್ರೇಮಕಥೆ. ಬರೋಬ್ಬರಿ 35 ವರ್ಷಗಳ ನಂತರ ಒಂದಾದ ಪ್ರೇಮಿಗಳು.

ಆತ ಸೋದರತ್ತೆ ಮಗಳನ್ನೇ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದ, ಆದರೆ ಆತನ ಅದೃಷ್ಟ ದಲ್ಲಿ ಆಕೆಯೊಂದಿಗೆ ಬದುಕೋದು ಬರೆದಿರಲಿಲ್ಲ. ಹೀಗಂತ ಆತ ಪ್ರೀತಿಯನ್ನು (S ಬಿಟ್ಟುಕೊಡಲು ಸಿದ್ಧವಿರಲಿಲ್ಲ. ಕೊನೆಗೂ ಗೆದ್ದಿದ್ದು ಆತನ ಪ್ರೀತಿ. ಫಲವಾಗಿ 35 ವರ್ಷದ ಬಳಿಕ ಪ್ರೀತಿಸಿದಾಕೆಯೊಂದಿಗೆ ಸಪ್ತಪದಿ ತುಳಿದು ಹೊಸಬದುಕಿಗೆ ಕಾಲಿಟ್ಟಿದ್ದಾರೆ.

ಮಂಡ್ಯದಲ್ಲಿ ಅಪರೂಪದ ಪ್ರೇಮಕಥೆ. ಬರೋಬ್ಬರಿ 35 ವರ್ಷಗಳ ನಂತರ ಒಂದಾದ ಪ್ರೇಮಿಗಳು.

ಇಷ್ಟಕ್ಕೂ ನಾವು ಹೇಳ್ತಿರೋದು ಯಾರ ಬಗ್ಗೆ ಅಂದ್ರಾ ತಮ್ಮ 65 ವಯಸ್ಸಿನಲ್ಲೂ ಜೀವನೋತ್ಸಾಹದೊಂದಿಗೆ ಹೊಸ ಬದುಕಿಗೆ ಕಾಲಿಟ್ಟ ಮೈಸೂರಿನ ಮೇಟಗಹಳ್ಳಿ ಹೆಬ್ಬಾಳದ ಚಿಕ್ಕಣ್ಣ ಮತ್ತು ಜಯಮ್ಮ ದಂಪತಿಯ ಬಗ್ಗೆ. ಚಿಕ್ಕಣ್ಣನ ಸೋದರತ್ತೆ ಮಗಳು ಜಯಮ್ಮ. ಚಿಕ್ಕಂದಿನಲ್ಲೇ ಚಿಕ್ಕಣ್ಣ ಜಯಮ್ಮನನ್ನು ಪ್ರೀತಿಸುತ್ತಿದ್ದರಂತೆ. ಆದರೆ ಮನೆಯವರು ಜಯಮ್ಮನನ್ನು ಬೇರೆಯ ಯುವಕನಿಗೆ ಮದುವೆ ಮಾಡಿ ಕೊಟ್ಟಿದ್ದರಂತೆ. ಆದರೆ 35 ವರ್ಷದ ಹಿಂದೆ ಜಯಮ್ಮ ಬೇರೆಯವರನ್ನು ಮದುವೆಯಾದರೂ ಚಿಕ್ಕಣ್ಣ ಮಾತ್ರ ಆಕೆಯ ನೆನಪಿನಲ್ಲೇ ಇದ್ದರಂತೆ.

ಮದುವೆಯಾದ ಜಯಮ್ಮನಿಗೆ ಒಂದು ಮಗ ಹುಟ್ಟಿದ್ದರೂ ಗಂಡ ಹೆಂಡತಿ ನಡುವೆ ಸಾಮರಸ್ಯ ಇರಲಿಲ್ಲ.‌ಹೀಗಾಗಿ ಇಷ್ಟು ವರ್ಷ ಗಂಡನ ಜೊತೆ ಗುದ್ದಾಡಿದ ಜಯಮ್ಮ ಕೊನೆಗೆ ಗಂಡನನ್ನು ತೊರೆದು ತವರಿಗೆ ವಾಪಸ್ಸಾಗಿದ್ದಳು. ಜಯಮ್ಮ ತವರಿಗೆ ವಾಪಸ್ಸಾಗುತ್ತಿದ್ದಂತೆ ಮತ್ತೆ ತನ್ನ ಪ್ರೀತಿಗಾಗಿ ತುಡಿದ ಚಿಕ್ಕಣ್ಣ ಜಯಮ್ಮನ ಮನವೊಲಿಸಿ ಹಿರಿಯರ‌ ಮನವೊಲಿಸಿ ಪ್ರೀತಿಸಿದ ಜೀವದೊಂದಿಗೆ ಹೊಸ ಬದುಕು ಕಟ್ಟಲು ಸಿದ್ಧವಾಗಿದ್ದಾನೆ.

ಮಂಡ್ಯದಲ್ಲಿ ಅಪರೂಪದ ಪ್ರೇಮಕಥೆ. ಬರೋಬ್ಬರಿ 35 ವರ್ಷಗಳ ನಂತರ ಒಂದಾದ ಪ್ರೇಮಿಗಳು.

ಮಂಡ್ಯದ ಮೇಲುಕೋಟೆ ಚೆಲುವರಾಯಸ್ವಾಮಿ ದೇವಾಲಯದಲ್ಲಿ ನಡೆದ ಈ ಅಪರೂಪದ ಮದುವೆಗೆ ಜಯಮ್ಮನ 25 ವರ್ಷದ ಪುತ್ರ ಸೇರಿದಂತೆ ಕುಟುಂಬಸ್ಥರು ಸಾಕ್ಷಿಯಾಗಿದ್ದಾರೆ. ಈ ಜೋಡಿಯ ಮದುವೆ ಪೋಟೋ ಗಳು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದ್ದು, ಜನರು ಕೊನೆಗೂ ಕಾದು ಕಾದು ಪ್ರೀತಿಯನ್ನು ಒಲಿಸಿಕೊಂಡ ಚಿಕ್ಕಣ್ಣನ ತಾಳ್ಮೆಯನ್ನು ಶ್ಲಾಘಿಷಿದ್ದಾರೆ.

ಚಿಕ್ಕಣ್ಣ ತನ್ನ ಮದುವೆಯ ಬಗ್ಗೆ ಯಾವುದೇ ಮುಜುಗರವಿಲ್ಲ.‌ ಬದಲಾಗಿ ಈ ಇಳಿ ವಯಸ್ಸಿನಲ್ಲಾದರೂ ತಾನು ಪ್ರೀತಿಸಿದ ಜಯಮ್ಮನನ್ನು ಮದುವೆಯಾದ ಖುಷಿಯಿದೆಯಂತೆ. ಜಯಮ್ಮ ಮದುವೆಯಾಗಿ ಹೋದರೂ ಚಿಕ್ಕಣ್ಣ ಮಾತ್ರ. ಮದುವೆಯಾಗದೇ ಸೋದರತ್ತೆ ಮಗಳ ನೆನಪಿನಲ್ಲೇ ಇಷ್ಟು ವರ್ಷ ಒಂಟಿಯಾಗಿದ್ದರಂತೆ. ಹೀಗಾಗಿ ಚಿಕ್ಕಣ್ಣನ ಈ ಪ್ರೀತಿಯನ್ನು ಕಂಡ ಕುಟುಂಬಸ್ಥರು ಕೂಡ ಮದುವೆಗೆ ಒಪ್ಪಿಕೊಂಡಿದ್ದು ಖುಷಿಯಿಂದ ಸಾಂಪ್ರದಾಯಿಕವಾಗಿ ಜಯಮ್ಮ ಹಾಗೂ ಚಿಕ್ಕಣ್ಣ ಮದುವೆ ನೆರವೇರಿಸಿಕೊಟ್ಟಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು